ದಿನದ ಸುದ್ದಿ
ದೀಪಾವಳಿ ಅಲ್ಲ ‘ದೀಪ ದಾನ ಉತ್ಸವ’ ಆಚರಿಸೋಣ
- ವಿಶ್ವನಾಥ ಎಸ್ ಕರಡಿ
ಬೌದ್ಧರು(ಬಹುಜನರು)ಆಚರಣೆ ಮಾಡಬೇಕಿರುವುದು ದೀಪಾವಳಿ ಹಬ್ಬ ಅಲ್ಲ ಅದರ ಬದಲಾಗಿ ‘ದೀಪ ದಾನ ಉತ್ಸವ’ವನ್ನು ಆಚರಿಸಬೇಕು.
ಈ ದೀಪ ಧಾನ ಉತ್ಸವದ ಹಿನ್ನೆಲೆ ಏನೆಂದರೆ ಕಪಿಲವಸ್ತುವಿನ ರಾಜಕುಮಾರ ಸಿದ್ದಾರ್ಥ ಮನೆಯನ್ನು ಬಿಟ್ಟು ಹೋಗಿ ವೇಸಾಕ ಪೂರ್ಣಿಮೆಯಂದು ಭೋದಿ ಪ್ರಾಪ್ತಿ ಮಾಡಿಕೊಂಡು ಬುದ್ದ ಆಗುತ್ತಾರೆ. ಬುದ್ದ ಆದ ನಂತರ ಅವರು ಮನೆ ಬಿಟ್ಟು ಸತತ 17 ವರುಷಗಳ ನಂತರ ಕಪಿಲವಸ್ತುವಿಗೆ ಬುದ್ಧರಾಗಿ ಬಂದಾಗ ಊರಿನ ತುಂಬಾ ದೀಪಗಳನ್ನು ಪ್ರಜ್ವಲಿಸುವ ಮುಖಾಂತರ ಬುದ್ಧರನ್ನು ಸ್ವಾಗತಿಸುತ್ತಾರೆ.
ಸಾಮ್ರಾಟ ಅಶೋಕನು ಕಳಿಂಗ ಯುದ್ಧದ ನಂತರ ಶಸ್ತ್ರ ತ್ಯಾಗ ಮಾಡಿ ಬೌದ್ದ ಧಮ್ಮಕ್ಕೆ ಶರಣಾಗಿ ಒಂದು ತಿಂಗಳು ಬೌದ್ದ ಸ್ಥಳಗಳಿಗೆ ಭೇಟಿ ಕೊಡುತ್ತಾನೆ. ಈ ಭೇಟಿಯ ನಂತರ ಕಾರ್ತಿಕ ಅಮವಾಸೆಯ ದಿನ ಬುದ್ಧರನ್ನು ಕಪಿಲವಸ್ತುವಿಗೆ ಸ್ವಾಗತಿಸಿದ ದಿನವನ್ನು ಸಾಮ್ರಾಟ ಅಶೋಕನು ‘ದೀಪ ದಾನ ಉತ್ಸವ‘ ಎಂಬ ಆಚರಣೆಯನ್ನು ಮಾಡುತ್ತಾನೆ.
ದೀಪ ಧಾನ ಉತ್ಸವದಲ್ಲಿ ಹೊಸ ಬಟ್ಟೆ ಧರಿಸಿ ಬುದ್ದ, ಧಮ್ಮ, ಸಂಘಕ್ಕೆ ವಂದಿಸಿ ಸಿಹಿ ತಿಂಡಿ ಮಾಡಿ ತಿಂದು ಸ್ನೇಹಿತರು, ಬಂಧುಗಳು ತಂದೆ, ತಾಯಿ, ಮಕ್ಕಳು ಎಲ್ಲರೂ ಜ್ಞಾನದ ಸಂಕೇತವಾಗಿರುವ ದೀಪವನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಈ ಹಬ್ಬವನ್ನು ಆಚರಿಸಬೇಕು. ಈ ಆಚರಣೆಯ ಉದ್ದೇಶ ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವುದಾಗಿದೆ.
ಆದರೆ ಇಂದು ದೀಪ ದಾನ ಉತ್ಸವವನ್ನು ವಿಕೃತಗೊಳಿಸಿ ಮನುವಾದಿಗಳು ದೀಪಾವಳಿ ಮಾಡಿದ್ದಾರೆ ಈ ಹಬ್ಬದಲ್ಲಿ ಪಟಾಕಿ ಸಿಡಿಸಿ ಶಬ್ದಮಾಲಿನ್ಯ ಉಂಟುಮಾಡಿ ಲಕ್ಷ್ಮಿ ಪೂಜೆ ಮಾಡುತ್ತಾರೆ ಮತ್ತು ದನ ಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಾರೆ. ಬುದ್ಧರ ತಾಯಿ ಮಹಾಮಾಯೆಯನ್ನು ಲಕ್ಷ್ಮಿ ದೇವಿಯನ್ನಾಗಿ ವಿಕೃತಿಸಿದ್ದು ಕೂಡ ಇದೆ.
ಒಟ್ಟಿನಲ್ಲಿ ಬಾಬಾಸಾಹೇಬರು ಹೇಳಿದಂತೆ ಕ್ರಾಂತಿಗೆ ಪ್ರತಿಕ್ರಾಂತಿಯನ್ನು ನಾವು ಸರಿಯಾಗಿ ತಿಳಿದುಕೊಂಡು ನಮ್ಮ ನೈಜ್ಯ ಸಂಸ್ಕೃತಿಯನ್ನು ಆಚರಿಸಿ ಸಂಭ್ರಮಿಸುವ ಅವಶ್ಯಕತೆ ಇದೆ. ಜಂಬೂದ್ವೀಪದ ಸಂಸ್ಕೃತಿಯಲ್ಲಿ ನಾವು ಮಾಡಿರುವ ಕ್ರಾಂತಿಗೆ ಮನು ಸಂತಾನಿಗಳು ಪ್ರತಿಕ್ರಾಂತಿ ಮಾಡಿದ್ದಾರೆ ಆ ಪ್ರತಿಕ್ರಾಂತಿಯ ವೈಭವಿಕೃತ ಹಬ್ಬಗಳನ್ನು ಆಚರಿಸುತ್ತಿದ್ದೇವೆ ಎಂಬುದು ದುಃಖದ ವಿಷಯ. ಅದರಲ್ಲೂ ಬಾಬಾಸಾಹೇಬರ ಹೋರಾಟದ ಬೆವರಿನ ಫಲ ಉಣ್ಣುತ್ತಿರುವ ನೌಕರಸ್ಥರೇ ಇದಕ್ಕೆ ಬೆನ್ನು ಬಿದ್ದಿದ್ದಾರೆ.
ಈ ದೀಪಾವಳಿ ಆಸುಪಾಸು #ಬಲಿಪಾಡ್ಯ ಎಂದು ಕೂಡ ಆಚರಿಸುವುದುಂಟು ಆ ದಿನವನ್ನು ಮೂಲನಿವಾಸಿ ದಾನವ(ದಾನ ನೀಡುವವರು)ರಾಜ ಬಳಿ ಚಕ್ರವರ್ತಿಯನ್ನು ವಾಮನ ಎನ್ನುವ ಬ್ರಾಹ್ಮಣ ಮೋಸದಿಂದ ಕೊಂದ ದಿನವನ್ನೂ ಕೂಡ ಮನು ಸಂತಾನಿಗಳು ಹಬ್ಬವೆಂದು ಆಚರಿಸುವುದುಂಟು. ಬಳಿ ಚಕ್ರವರ್ತಿ ಒಬ್ಬ ದಕ್ಷ ಆಡಳಿತಗಾರ ಹಾಗೂರೈತಾಪಿ ರಾಜ ಆಗಿದ್ದನು.
ಆದರೂ ಅವನನ್ನು ಮೋಸದಿಂದ ಕೊಲ್ಲಲಾಯಿತು ಎಂದು ಹೇಳುವ ಬದಲು ವಾಮನ ಎಂಬುವವ ಮೂರು ಹೆಜ್ಜೆ ಜಾಗ ದಾನ ಬೇಡಿದ ಆಗ ಒಂದು ಹೆಜ್ಜೆ ಭೂಮಿಮೇಲೆ ಇನ್ನೊಂದು ಆಕಾಶಕ್ಕೆ ಮತ್ತೊಂದು ಬಳಿ ಚಕ್ರವರ್ತಿಯ ತಲೆ ಮೇಲೆ ಇಟ್ಟು ಪಾತಾಳಕ್ಕೆ ತಳ್ಳಿದ ಎಂದು ಬುರುಡೆ ಬಿಟ್ಟು ಹಬ್ಬ ಆಚರಿಸುತ್ತಾರೆ. ಪುರಾಣದ ಕಥೆ ಏನೇ ಇರಲಿ ಆದರೆ ಆ ಕಥೆಯಿಂದ ನಮಗೆ ಅವರು ಮೋಸ ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಲಿದ್ದಾರೆ ಎಂಬ ವಿಷಯ ಸ್ಪಷ್ಟವಾಗುತ್ತದೆ.
ಒಟ್ಟಿನಲ್ಲಿ ನಾವು ಮನುವಾದಿಗಳು ನಮ್ಮನ್ನು ಮೂರ್ಖರನ್ನಾಗಿಸಲು ಹೆಣೆದಿರುವ ಮೋಸದ ಕಥೆಗಳನ್ನು ನಂಬದೆ ಅವರ ಶ್ರೇಷ್ಠತ್ವ ಸಾರುವ ಅರ್ಥ ಇಲ್ಲದ ವ್ಯರ್ಥ ಹಬ್ಬಗಳನ್ನು ಆಚರಿಸದೆ ನಮ್ಮದೇ ಇತಿಹಾಸ ಇರುವ ನಮ್ಮ ಸಂಸ್ಕೃತಿಯ ಹಬ್ಬಗಳನ್ನು ಆಚರಿಸಿ ನಮ್ಮ ಇತಿಹಾಸ ನೆನಪಿಸಿಕೊಳ್ಳುತ್ತಾ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುತ್ತಾ ಬುದ್ದ, ಬಸವ, ಅಂಬೇಡ್ಕರರ ಹೋರಾಟದ ರಥವನ್ನು ಗುರಿ ಮುಟ್ಟಿಸುವ ಕಡೆಗೆ ಒಯ್ಯೋಣ ಬನ್ನಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಹೆಚ್. ಕೇಶವ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಶಿವಮೊಗ್ಗ:ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ ಬ್ಯಾಕ್ಲಾಗ್ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾದ ಹುದ್ದೆಗಳನ್ನು ಇಲಾಖಾ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇಲ್ಲಿಯ ಜಂಟಿ ನಿರ್ದೇಶಕರಾದ ಶ್ರೀ ಕೇಶವ ಹೆಚ್. ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ 2022ನೇ ಸಾಲಿನಲ್ಲಿ ಬ್ಯಾಕ್ಲಾಗ್ ಅಡಿಯಲ್ಲಿ ಅರ್ಥಶಾಸ್ತç (ಎಸ್.ಟಿ), ರಾಜ್ಯಶಾಸ್ತç (ಎಸ್.ಸಿ), ಗ್ರಂಥಪಾಲಕರು (ಎಸ್.ಟಿ) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇಲ್ಲಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾದ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರಿಗೆ ದಿನಾಂಕ: 24-11-2025 ರಂದು ಅರ್ಜಿ ಸಲ್ಲಿಸಿ, ಬ್ಯಾಕ್ ಲಾಗ್ ನೇಮಕಾತಿಯ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಲಾಗಿತ್ತು.
ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಯಾವುದೇ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ಜ್ಞಾಪನ ನೀಡಿ 7 ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ವಿನಂತಿಸಲಾಗಿತ್ತು. ಆದರೆ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರು ಅರ್ಜಿ ಸಲ್ಲಿಸಿ 2 ತಿಂಗಳಾದರೂ ಕನಿಷ್ಠ ಹಿಂಬರಹವನ್ನಾದರೂ ನೀಡದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.


