Connect with us

ಅಂತರಂಗ

ಕೃಷಿ ಬಿಕ್ಕಟ್ಟಿನ ನಿರ್ಲಕ್ಷ್ಯ ಮೋದಿ ಸೋಲಿಸೀತೆ? : ಮಂಡ್ಯದ ವಳಗೆರೆಹಳ್ಳಿಯ ರೈತ ಆತ್ಮಹತ್ಯೆಗಳ ‘ಪೋಸ್ಟ್ ಮಾರ್ಟಂ’

Published

on

  • ಮಂಡ್ಯದ ವಳೆಗೆರೆಹಳ್ಳಿಯ ಆತ್ಮಹತ್ಯೆ ಮಾಡಿಕೊಂಡ ಐವರು ರೈತರ ಆತ್ಮಹತ್ಯೆಗಳನ್ನು ‘ರಾಜಕೀಯ-ಆರ್ಥಿಕ ಪೋಸ್ಟ್ ಮಾರ್ಟಂ’ ಮೂಲಕ ಕೃಷಿ ಸಂಕಟದ ಆಳ ಅಗಲಗಳನ್ನು ಇಲ್ಲಿ ಅಳೆಯಲಾಗಿದೆ. ಮಂಡ್ಯ ಮತ್ತು ಕೊಪ್ಪಳದ ಕೃಷಿ ಸಂಕಟಗಳನ್ನು ಕುರಿತು ಸಂಶೋಧನೆ ಮಾಡುತ್ತಿರುವ ದೀಪಾ ಕುರುಪ್ ಅದರ ಬೆಳಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ಈ ಕುರಿತು ಮೋದಿ ಸರಕಾರದ ಘೋಷಣೆ ಮತ್ತು ‘ಸಾಧನೆ’ಗಳ ನಡುವಿನ ಕಂದಕವನ್ನು ತೆರೆದಿಡುತ್ತಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಬಂದಿರುವ ರೈತರ ಚಳುವಳಿಯ ಬಗೆಗೂ ಬರೆಯುತ್ತಾರೆ. ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕೃಷಿ ಸಂಕಟಗಳ ತೀವ್ರ ನಿರ್ಲಕ್ಷ ಮೋದಿಯನ್ನು ಸೋಲಿಸಬಲ್ಲದು ಎಂದು ಅಂತರ್ರಾಷ್ಟ್ರೀಯ ಓದುಗರಿಗೆ ತಿಳಿಸುವ ಈ ಲೇಖನ ‘ಅಲ್ ಜಜೀರಾ’ (https://www.aljazeera.com/news/2019/04/india-elections-farm-crisis-pm-narendra-modi-190418191725241.html)ವೆಬ್ ಮ್ಯಾಗಜೀನ್ ನಲ್ಲಿ ಪ್ರಕಟವಾಗಿದೆ. ಇಲ್ಲಿ ಬರುವ ಕೃಷಿ ಸಂಕಟದ ಹಲವು ಆಯಾಮಗಳ ಬಗ್ಗೆ ಈ ಪತ್ರಿಕೆಯಲ್ಲಿ ಹಲವು ಬರಹಗಳು ಪ್ರಕಟವಾಗಿದ್ದರೂ, ಕ್ಷೇತ್ರ ಸಮೀಕ್ಷೆಯ ಪ್ರಕರಣಗಳ ಆಧಾರವಿರುವುದರಿಂದ ಈ ಲೇಖನವನ್ನು ಇಡಿಯಾಗಿ ಪ್ರಕಟಿಸಲಾಗುತ್ತಿದೆ. ಇದನ್ನು ಈ ಕ್ಷೇತ್ರ ಸಮಿಕ್ಷೆಯಲ್ಲಿ ಭಾಗವಹಿಸಿದ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕ ಟಿ. ಯಶವಂತ ಅನುವಾದಿಸಿದ್ದಾರೆ.

“ಮಂಡ್ಯದಲ್ಲಿ ಏಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ”ಎಂದು ಮುಜಗರದಿಂದಲೇ ವಳೆಗೆರಹಳ್ಳಿ ಗ್ರಾಮಸ್ಥರನ್ನು ಪ್ರಶ್ನಿಸಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿಗೆ ಸೇರಿರುವ ವಳೆಗೆರೆಹಳ್ಳಿ ಗ್ರಾಮದ ಬಹಳಷ್ಟು ಜನರಿಗೆ 2015 ಹಾಗೂ 2017 ರ ನಡುವಿನ ಎರಡು ವರ್ಷದಲ್ಲಿ ತನ್ನ ಗ್ರಾಮದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಆಶ್ಚರ್ಯವನ್ನೇನೂ ಹುಟ್ಟಿಸಲಿಲ್ಲ.

ಆದರೆ ಏಪ್ರಿಲ್ 1ರಂದು ನಡೆದ ಶ್ರೀನಿವಾಸ್ ರವರ ಆತ್ಮಹತ್ಯೆ ಅವರ ಮನಸ್ಸಿನಲ್ಲಿ ಹಸಿರಾಗಿದೆ. 45 ವರ್ಷ ವಯಸ್ಸಿನ ರೈತ ಸುಮಾರು ಐದು ಲಕ್ಷ ರೂ ನಷ್ಟಿದ್ದ ಸಾಲದಿಂದ ಮುಕ್ತನಾಗದೆ ವೃದ್ದೆ ತಾಯಿ, ಪತ್ನಿ ಮತ್ತು ಮಗನನ್ನು ಬಿಟ್ಟು ಅಗಲಿದ್ದಾರೆ. ಕಳೆದ ವರ್ಷವಷ್ಟೇ ಬಂಧು, ಸ್ನೇಹಿತರು ಹಾಗೂ ಗ್ರಾಮದ ಲೇವಾದೇವಿದಾರರಿಂದ ಮಗಳ ಮದುವೆ ವೆಚ್ಚ ಭರಿಸಲು ಸಾಲ ಪಡೆದಿದ್ದರು. ಮತ್ತೇ ಈ ವರ್ಷ ತನ್ನ ಒಂದು ಎಕರೆ ಜಮೀನಿನಲ್ಲಿ ಭತ್ತ ಬೆಳೆಯಲು ಮತ್ತಷ್ಟು ಸಾಲ ಮಾಡಿದ್ದರು. ಹಾಕಿದ್ದ ಬಂಡವಾಳಕ್ಕಿಂತ ಸಾಕಷ್ಟು ಕಡಿಮೆ ಬೆಲೆಗೆ ಭತ್ತ ಮಾರಾಟ ಆಗಿದ್ದು, ಸಾಲ ತೀರಿಸುವ ಅವನ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿತು.

ಆದರೆ ಶ್ರೀನಿವಾಸ್ ರವರ ಸಾವು ರೈತ ಆತ್ಮಹತ್ಯೆ ಯ ಕೃಷಿ ಇಲಾಖೆ ಅಂಕಿ ಸಂಖ್ಯೆ ಪಟ್ಟಿಯಲ್ಲಿ ಸೇರ್ಪಡೆ ಆಗಿಲ್ಲ. ಲೆಕ್ಕಕ್ಕೆ ಹಾಗೂ ಪರಿಹಾರ ಸೌಲಭ್ಯಗಳ ಕ್ರಮಕ್ಕೆ ಒಳಪಡಬೇಕಾದರೆ, ಮರಣೋತ್ತರ ಪರೀಕ್ಷೆ ಮಾಡಿಸಬೇಕು. ಅವರ ಕುಟುಂಬದಂತೆ ಬಹಳಷ್ಟು ಇತರರು ಸಾಂಸ್ಕೃತಿಕ ಮತ್ತು ಭಾವನಾತ್ಮಕ ಕಾರಣಗಳಿಗಾಗಿ ಇಂತಹ ಪ್ರಕ್ರಿಯೆಯನ್ನು ನಿರಾಕರಿಸಿರುತ್ತಾರೆ. ಶ್ರೀನಿವಾಸ್ ರವರ ರೀತಿ ಎಣಿಕೆಗೆ ಪರಿಗಣಿಸದ ಆತ್ಮಹತ್ಯೆಗಳು ವಾರ್ಷಿಕವಾಗಿ ರಾಷ್ಟ್ರೀಯ ಅಪರಾಧ ರೆಕಾಡ್ರ್ಸ್ ಬ್ಯೂರೋ (ಓಅಖಃ) ಪ್ರಕಟಿಸುವ ರೈತ ಆತ್ಮಹತ್ಯೆಗಳ ಸಂಖ್ಯೆಗಿಂತ ವಾಸ್ತವವಾಗಿ ಜರುಗುತ್ತಿರುವ ಅತ್ಮಹತ್ಯೆಗಳು ಹೆಚ್ಚಿರುವುದನ್ನು ತೋರಿಸುತ್ತದೆ.

ನಿಖರವಲ್ಲದಿದ್ದರೂ 2016ರ ತನಕ ಸಾಮಾಜಿಕ ಕಾರ್ಯಕರ್ತರು ಹಾಗೂ ನೀತಿ ನಿರೂಪಕರು ಉಲ್ಲೇಖಿಸಬಹುದಾಗಿದ್ದು ಓಅಖಃ ದತ್ತಾಂಶ ಮಾತ್ರವಾಗಿತ್ತು. ಆ ನಂತರದಿಂದ ಬಿಜೆಪಿ ಸರ್ಕಾರ ಆತ್ಮಹತ್ಯೆ ಅಂಕಿಸಂಖ್ಯೆಗಳನ್ನು ಪ್ರಕಟಿಸಲು ನಿರಾಕರಿಸಿದೆ. ಅದರ ಒಟ್ಟು ರಾಜಕೀಯ ಕಥನಕ್ಕೆ ಅನುಕೂಲವಾಗುವಂv,É ನಿರುದ್ಯೋಗ ಮಟ್ಟ ಅಥವಾ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ತನಗೆ `ಮುಜುಗರ ಉಂಟುಮಾಡುವ’ ಅಂಕಿ ಸಂಖ್ಯೆಗಳನ್ನು ಮರೆಮಾಚುವ ಇಲ್ಲವೆ ತಿರುಚುವ ಕಾರ್ಯತಂತ್ರದ ಭಾಗವಾಗಿಯೇ ಇದನ್ನು ಮಾಡಲಾಗಿದೆ.

ಜನಸಂಖ್ಯೆಯ ಶೇಕಡಾ 69 ರಷ್ಟು ಅಂದರೆ 83 ಕೋಟಿ ಜನ ಇರುವ ಗ್ರಾಮೀಣ ಪ್ರದೇಶದ ಸಂಕಷ್ಟ ಅಳೆಯುವ ಸೂಚಕವಿದು. ಓಅಖಃ ಪ್ರಕಾರ 2015 ರ ಹಿಂದಿನ ಎರಡು ದಶಕಗಳಲ್ಲಿ ಕನಿಷ್ಠ 3.21 ಲಕ್ಷ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಬಿಜೆಪಿ ಆಡಳಿತದ ಹಿಂದೆಯೂ ಬಿಕ್ಕಟ್ಟು ಇರುವ ಬಗ್ಗೆ ಕೂಡ ಓಅಖಃ ಬೆಳಕು ಚೆಲ್ಲುತ್ತಿದೆ. 2014 ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ `ಕ್ರಾಂತಿ’ ಮಾಡುವುದಾಗಿ ರೈತ-ಕೃಷಿ ಕೂಲಿಕಾರರನ್ನು ನಂಬಿಸಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಗ್ರಾಮೀಣ ಬಿಕ್ಕಟ್ಟು ಮಾತ್ರ ಮತ್ತಷ್ಟು ಉಲ್ಬಣಿಸಿದೆ.

2014 ರ ಬಿಜೆಪಿ ಪ್ರಣಾಳಿಕೆ ರೈತರಿಗೆ ಉತ್ಪಾದನಾ ವೆಚ್ಚದ ಶೇಕಡಾ 50 ರಷ್ಟು ಲಾಭಾಂಶದ ಭರವಸೆ ನೀಡಿತ್ತು. ಮತ್ತೊಂದು ಅವಧಿಗೆ ಅಧಿಕಾರ ನಿರೀಕ್ಷಿಸುತ್ತಿರುವ ಮೋದಿ, 2019ರ ಬಿಜೆಪಿ ಪ್ರಣಾಳಿಕೆಯಲ್ಲಿ ಪುನುರುಚ್ಚರಿಸಿರುವ ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸಲು 2022 ರವರೆಗೆ ಅವಕಾಶ ನೀಡುವಂತೆ ಮತದಾರರನ್ನು ಕೇಳುತ್ತಿದ್ದಾರೆ. ಆದರೆ ಕೃಷಿ ಕ್ಷೇತ್ರದ ಒಟ್ಟಾರೆ ಚಿತ್ರಣ ಈ ಭರವಸೆಯ ವಿರುದ್ದ ದಿಕ್ಕಿನಲ್ಲಿದೆ.

ಕೃಷಿ ಕ್ಷೇತ್ರದ ಆರ್ಥಿಕ ಚಟುವಟಿಕೆಯ ಮಾಪಕವಾದ ಒಟ್ಟು ಮೌಲ್ಯ ವರ್ದನೆಯು(ಉಗಿಂ)2014-19 ರ ಪ್ರಸ್ತುತ ಬಿಜೆಪಿ ನೇತೃತ್ವದ ಎನ್.ಡಿ.ಎ. ಅವಧಿಯ ಸ್ಥಿರ ದರದಲ್ಲಿ ಸರಾಸರಿ ಶೇಕಡಾ 2.8 ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ನಿರಂತರ ಎರಡು ಅವಧಿಯ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಾದ ಯುಪಿಎ-1 (2004-09) ಹಾಗೂ ಯುಪಿಎ-2 (2009-14) ಗಳಿಗೆ ಹೋಲಿಸಿದರೆ ಇದು ಗಮನಾರ್ಹವಾಗಿ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಕೃಷಿಯಲ್ಲಿ ತೊಡಗಿರುವ ಪುರುಷ ಹಾಗೂ ಮಹಿಳೆಯರ ಗ್ರಾಮೀಣ ಕೂಲಿಯ ಪ್ರಮಾಣ ಸಹ ಕುಂಠಿತಗೊಂಡಿದೆ.

ವಳೆಗೆರಹಳ್ಳಿ ಆತ್ಮಹತ್ಯೆಗಳು

ಗ್ರಾಮಗಳಲ್ಲಿನ ಬಿಕ್ಕಟ್ಟಿನ ಲಕ್ಷಣಗಳು ಹಾಗೂ ಹೊರಬಿದ್ದಿರುವ ಅಂಕಿಸಂಖ್ಯೆಗಳು, ಬಿಜೆಪಿಯ ಭರವಸೆಗಳಿಗೂ ‘ಸಾಧನೆ’ಗಳಿಗ ಇರುವ ಕಂದಕವನ್ನು ತೋರಿಸುತ್ತಿವೆ. ಬಿಜೆಪಿ ಗ್ರಾಮೀಣ ಬಿಕ್ಕಟ್ಟನ್ನು ಒಂದು ರಚನಾತ್ಮಕ ಬಿಕ್ಕಟ್ಟು ಎಂದು ಗ್ರಹಿಸುವುದಿಲ್ಲ. ಬಹುತೇಕ ಕೃಷಿ ಭೂಮಿಗೆ ಕಾಲುವೆ ನೀರಾವರಿ ಹೊಂದಿರುವ ಹಾಗೂ ಭತ್ತ, ಕಬ್ಬು, ರೇಷ್ಮೆ ಬೆಳೆಯುವ ವಳೆಗೆರಹಳ್ಳಿಯಲ್ಲಿನ ಪರಿಸ್ಥಿತಿ ಇದಕ್ಕೆ ಕನ್ನಡಿಯಾಗಿದೆ. 2015 ಮತ್ತು 2017 ರ ನಡುವೆ ಆತ್ಮಹತ್ಯೆ ಮಾಡಿಕೊಂಡಿರುವ ಐದು ಕುಟುಂಬಗಳ ಜೊತೆಗಿನ ಸಂವಾದವು ಗ್ರಾಮೀಣ ಭಾರತದ ರಾಜಕೀಯ ಆರ್ಥಿಕತೆಯಲ್ಲಿನ ಬಿಕ್ಕಟ್ಟಿಗೆ ಸಾಕ್ಷಿ ಒದಗಿಸುವ ಮಾನವ ದುರಂತವನ್ನು ಅನಾವರಣಗೊಳಿಸಿದೆ.

ಜಯರಾಮು ಎಂ.(36), ಮಧುಕರ್ (40), ನಾಥಪ್ಪ,(46), ಸಿ.ಎಂ.ಸಂಪತ್(37) ಮತ್ತು ಮರಿಗೌಡ (50) – ಆತ್ಮಹತ್ಯೆ ಮಾಡಿಕೊಂಡ ಈ ಐವರ ಕುಟುಂಬಗಳು ಎರಡು ಎಕರೆಗಿಂತ ಕಡಿಮೆ ಹಿಡುವಳಿ ಹೊಂದಿದ್ದು, ಕೃಷಿ ಕೂಲಿಗಾರರಾಗಿಯೂ ಸಹ ಕೆಲಸ ಮಾಡುತ್ತಿದ್ದರು. ರಾಷ್ಟ್ರೀಯ ಸರಾಸರಿ ಹಿಡುವಳಿ 2.7 ಎಕರೆ. ಈ ಎಲ್ಲಾ ಐದು ರೈತರು ಲಾಭಗಳಿಸುವಲ್ಲಿ ವಿಫಲರಾಗಿದ್ದು ಕುತ್ತಿಗೆಮಟ್ಟ ಸಾಲದಲ್ಲಿ ಮುಳುಗಿದವರು. ಅನಾರೋಗ್ಯ, ಮದುವೆ, ಕೃಷಿ ಲಾಗುವಾಡು ಮತ್ತಿತರೆ ವೆಚ್ಚ ನಿಭಾಯಿಸುವ ಕಾರಣದಿಂದಾಗಿ ಸಾಲಗಾರರಾಗಿದ್ದರು.

ಈ ಸಾಲದ ಗಣನೀಯ ಮೊತ್ತವನ್ನು ಸ್ಥಳೀಯ ಲೇವಾದೇವಿದಾರರಿಂದ ಪಡೆಯಲಾಗಿತ್ತೇ ವಿನಃ ಬ್ಯಾಂಕ್ನಿಂದಲ್ಲ. ಮಾಸಿಕ ಶೇಕಡಾ 5 ರ ದುಬಾರಿ ಬಡ್ಡಿ ದರ. ಜುಲೈ 2015 ರಲ್ಲಿ ಆತ್ಮಹತ್ಯೆಗೀಡಾದ ಜಯರಾಮು ತಾಯಿ 58 ವರ್ಷದ ಸಣ್ಣಮ್ಮ, ರಾಜ್ಯ ಸರ್ಕಾರ ಕೊಟ್ಟ ಪರಿಹಾರ ಧನ ಅವಳ ಮಗನ ಸುಸ್ಥಿ ಸಾಲದ ಬಡ್ಡಿಗೆ ಸರಿ ಹೋಯಿತು ಎಂದು ನಿಟ್ಟುಸಿರು ಬಿಟ್ಟರು.

ಮಧುಕರ್, ಒಬ್ಬ ದಲಿತ ರೈತ, ಸುಮಾರು ಶೇಕಡಾ 9 ರಷ್ಟು ಮಾಸಿಕ ದುಬಾರಿ ಬಡ್ಡಿ ದರದ ಸಾಲಗಾರ. ಆಗಷ್ಟೇ ಗುತ್ತಿಗೆ ಪಡೆದಿದ್ದ ಒಂದು ಎಕರೆ ಭೂಮಿಗೆ ಬಾಡಿಗೆ ಪಾವತಿಸಲು ಸಾಲ ಮಾಡಿದ್ದ. ಲೇವಾದೇವಿದಾರರು ತಮ್ಮ ಹಣದ ಸುರಕ್ಷತೆಗಾಗಿ ಸಾಮಾನ್ಯವಾಗಿ ದಲಿತರನ್ನು ಹಾಗೂ ಇತರೆ ಭೂ ಹೀನ ಬಡವರನ್ನು, ಅವರ ಹತ್ತಿರ ಈ ಸಣ್ಣ ಮೊತ್ತಕ್ಕೆ ಗ್ಯಾರಂಟಿ ನೀಡಬಹುದಾದ ಯಾವುದೇ ಆಸ್ತಿ ಇರದೇ ಇರುವುದರಿಂದ, ಹೆಚ್ಚಿನ ನಷ್ಟ ಉಂಟು ಮಾಡಬಹುದಾದ ಸಾಲಗಾರರೆಂದು ಪರಿಗಣಿಸುತ್ತಾರೆ.

ಮಧುಕರ್ ಆತ್ಮಹತ್ಯೆ ಮಾಡಿಕೊಂಡ ಮೇಲೆ ಆತನ ವಿಧವೆ ಪತ್ನಿ, ಸುನಂದಾ (30),ಸಾಲ ತೀರಿಸಲು ಇದ್ದ ಅರ್ಧ ಎಕರೆ ಜಮೀನು ಮಾರಾಟ ಮಾಡಿದ್ದಾಗಿ ಹೇಳಿದರು. ಈಗ ಈ ಕುಟುಂಬಕ್ಕೆ ಯಾವುದೇ ಭೂಮಿ ಇಲ್ಲ. ಕುಟುಂಬ ನಿರ್ವಹಣೆಗಾಗಿ ಗಾಮೆರ್ಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೃಷಿ ಇಲಾಖೆ, ಆತ್ಮಹತ್ಯೆಗೀಡಾದ ವಳೆಗೆರಹಳ್ಳಿ ರೈತರನ್ನು ಸಣ್ಣ ಮತ್ತು ಅಂಚಿನ ರೈತರೆಂದು ವರ್ಗೀಕರಿಸಿದೆ. ಇಂತಹವರ ಪ್ರಮಾಣ ದೇಶದಲ್ಲಿ ಶೇಕಡಾ 86 ರಷ್ಷಿದ್ದರೂ, ಗಣತಿ ಪ್ರಕಾರ ಕೇವಲ ಶೇಕಡಾ 47 ರಷ್ಟು ಕೃಷಿ ಭೂಮಿ ಹೊಂದಿದ್ದಾರೆ. ಈ ಶೇಕಡಾ 86 ಜನರೇ ಭಾರತದ ಕೃಷಿ ಬಿಕ್ಕಟ್ಟಿನ ಬಹು ಭಾರ ಹೊತ್ತಿರುವವರು. ಕೃಷಿ ಸಂಕಟವು ಭಾರತೀಯ ರೈತರನ್ನು ತಲೆಮಾರಿನಿಂದ ತಲೆಮಾರಿಗೆ ಹೆಚ್ಚು ಹೆಚ್ಚು ತುಂಡು ಹಿಡುವಳಿದಾರರನ್ನಾಗಿಸುತ್ತಿದೆ. ಭೂ ಹಂಚಿಕೆಯ ಅಸಮಾನತೆ ಕೂಡ ತೀವ್ರಗೊಂಡಿದೆ.

ಬರಗಾಲ, ಬೆಳೆ ವಿಮೆ ಇತ್ಯಾದಿ

ಮಂಡ್ಯವೂ ಸೇರಿದಂತೆ ಭಾರತದ ಬಹುತೇಕ ಭಾಗ 2014 ರಿಂದ ಸತತ ಎರಡು ವರ್ಷಗಳ ಬರಗಾಲವನ್ನು ಅನುಭವಿಸಿದ್ದರೂ, ಈ ಯಾವ ಕುಟುಂಬಗಳು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಪಡೆದಿಲ್ಲ. ಅಸಮರ್ಪಕ ಭೂ ದಾಖಲಾತಿ ಅಥವಾ ಆಧಾರ್ ಜೊತೆ ಬ್ಯಾಂಕ್ ಖಾತೆ ಜೋಡಣೆ ಆಗದಿರುವ ಕಾರಣದಿಂದ ಬರ ಪರಿಹಾರ ಪಟ್ಟಿಯಿಂದ ಅವರು ಹೊರಗುಳಿದಿದ್ದರು ಎಂದು ವಳೆಗೆರಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಆರೋಪಿಸಿದರು.

ರೈತನ ಜೊತೆ ಪ್ರಿಮಿಯಂ ನ ಒಂದು ಭಾಗವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಾವತಿಸುವ, ಮೋದಿ ಸರ್ಕಾರದ ಮಹತ್ವಕಾಂಕ್ಷಿ ಬೆಳೆ ವಿಮೆ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯೂ, ಅವರನ್ನು ಒಳಗೊಂಡಿಲ್ಲ. ಇಡೀ ಊರಿನ ಎಲ್ಲಾ ಬೆಳೆಗಳು ನಾಶವಾದರೆ ಮಾತ್ರ ವಿಮೆ ದಾವೆಗೆ ಅವಕಾಶ ಇರುವ ಈ ಯೋಜನೆ ಉಪಯೋಗಿಯಾಗಿಲ್ಲ ಎಂದು ವಳೆಗೆರಹಳ್ಳಿ ರೈತರು ತಿಳಿಸಿದರು. ಮಿಗಿಲಾಗಿ ವಾಣಿಜ್ಯ ಬೆಳೆಗಳನ್ನು ಈ ವಿಮೆ ಯೋಜನೆ ಒಳಗೊಂಡಿಲ್ಲವಾದ್ದರಿಂದ ಕಬ್ಬು ಬೆಳೆಯುವ ಎಲ್ಲರನ್ನೂ ಹೊರಗಿಟ್ಟಿದೆ.

ಸತತ ಎರಡು ವರ್ಷಗಳ ಬೆಳೆ ವಿಫಲತೆ ಕಾರಣದಿಂದ ತನ್ನ ಹೊಲದಲ್ಲಿ ಸಣ್ಣಮ್ಮನ 30 ವರ್ಷದ ಮಗ ಜಯರಾಮು 2015 ರಲ್ಲಿ ಆತ್ಮಹತ್ಯೆಗೀಡಾದರು. ಆದರೆ ಆತನಿಗೆ ಬೆಳೆ ವಿಮೆ ಸಹಾಯಕ್ಕೆ ಬಂದಿಲ್ಲ. ಈ ಯೋಜನೆ ಮೋದಿರವರ 2018-19 ರ ಕೃಷಿ ಬಜೆಟ್ ನ ಕಾಲು ಭಾಗದಷ್ಟು ಅಂದರೆ 57,600 ಕೋಟಿ ರೂಗಳ ಅನುದಾನವನ್ನು ಪಡೆದಿದ್ದರೂ, ಹೇಗೆ ಸರ್ಕಾರಿ ವೆಚ್ಚದ ಹೆಚ್ಚಳ ಅಂತಿಮವಾಗಿ ಕಾರ್ಪೋರೆಟ್ ಗಳಿಗೆ ಅನುಕೂಲವಾಗುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆ. ಈ ಯೋಜನೆಯ ಅಡಿಯಲ್ಲಿ ಬರುವ 18 ವಿಮಾ ಕಂಪನಿಗಳಲ್ಲಿ 13 ಖಾಸಗಿಯಾಗಿದ್ದು, ಈ ಎಲ್ಲವೂ ರಿಲಯನ್ಸ್ ಗ್ರೂಪ್, ಟಾಟಾ ಸನ್ಸ್, ಬಜಾಜ್ ಗ್ರೂಪ್ ಹಾಗೂ ಭಾರತಿ ಎಂಟರ್ಪ್ರೈಸಸ್ ನಂತಹ ಭಾರತದ ದೈತ್ಯ ಕಾರ್ಪೊರೇಟ್ ಉಧ್ಯಮಗಳ ಒಡೆತನಕ್ಕೆ ಒಳಪಟ್ಟಂತಹವು.

ಬಿಜೆಪಿ ಯೇತರ ನೇತೃತ್ವದ ರಾಜ್ಯ ಸರ್ಕಾರಗಳು ಬರಪರಿಹಾರದಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿವೆ. “2018-19 ರಲ್ಲಿ ಬರ ಪರಿಹಾರವಾಗಿ ಬಿಜೆಪಿ ಅಧಿಕಾರದಲ್ಲಿದ್ದ ಮಹಾರಾಷ್ಟ್ರ ವು 4700 ಕೋಟಿ ರೂ ಅನುದಾನ ಪಡೆದಿದೆ. ಆದರೆ ಕರ್ನಾಟಕ ಅತ್ಯಂತ ತೀವ್ರ ಹಾಗೂ ವಿಶಾಲ ವ್ಯಾಪ್ತಿಯಲ್ಲಿ ಬರಗಾಲದ ಬವಣೆಯಲ್ಲಿದ್ದರೂ ಕೇವಲ 949 ಕೋಟಿ ರೂ ಮಾತ್ರ ಪಡೆಯಿತು. ಇದು ಕಣ್ಣಿಗೆ ರಾಚುವ ತಾರತಮ್ಯ. ಬರಪರಿಹಾರದಲ್ಲಿ ರಾಜಕೀಯ ಮಾಡುವುದು ಅಮಾನವೀಯ” ಎನ್ನುತ್ತಾರೆ ಗ್ರಾಮೀಣಾಭಿವೃದ್ದಿ ಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ.

ಬಿಜೆಪಿ ಯ ಡಿ.ವಿ.ಸದಾನಂದ ಗೌಡ ಕೇಂದ್ರ ಸರ್ಕಾರದ ಸಾಂಖ್ಯಿಕ ಹಾಗೂ ಯೋಜನೆ ಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿ ಗಳು “ಇದೂಂದು ಸುಳ್ಳಿನ ಕಂತೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 2.4 ಲಕ್ಷ ಕೋಟಿ ಕೊಟ್ಟಿದೆ. ಇದು ಕಾಂಗ್ರೆಸ್ ಕೊಟ್ಟಿದ್ದಕ್ಕಿಂತ ಮೂರು ಪಟ್ಟು ಹೆಚ್ಚು “ಎಂದು ಆರೋಪಗಳನ್ನು ಅಲ್ಲಗಳೆಯುತ್ತಾರೆ.

ಬೆಲೆಗಳ ಸಮಸ್ಯೆ

ರೈತರ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ತಾವು ಪಡೆಯುವ ಕೃಷಿ ಉತ್ಪನ್ನಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ರೈತರಿಗೆ ಸಿಗುವ ಬೆಲೆಯ ಮಾಪಕವಾದ ಪ್ರಾಥಮಿಕ ಆಹಾರ ಸರಕಿನ ಸಗಟು ದರ ಸೂಚ್ಯಂಕ (WPI) ದ ಪ್ರಕಾರ 2013 -2014 ರಿಂದ ಸಗಟು ದರ ಸೂಚ್ಯಂಕ ಇಳಿಕೆ ಅಥವಾ ನಿಶ್ಚಲ ಸ್ಥಿತಿಯಲ್ಲಿದೆ. ಬೆಲೆಗಳ ಸಮಸ್ಯೆಗೆ ರಾಜಕಾರಣಿಗಳು ಆಗ್ಗಾಗ್ಗೆ ಆರೋಪಿಸುವಂತೆ ಮಳೆ ಕಾರಣ ಎನ್ನುತ್ತಿದ್ದರೆ, ಕರ್ನಾಟಕದ ಮಂಡ್ಯ, ಕೊಪ್ಪಳ ಹಾಗೂ ಕೋಲಾರ ಜಿಲ್ಲೆಗಳ ರೈತರ ಪ್ರಕಾರ ಕೃಷಿ ಬಿಕ್ಕಟ್ಟಿನ ಮೂಲ ಬೆಲೆಗಳಲ್ಲಿದೆ. ರೈತರು ಪಡೆಯುವ ದರ ವಿರಳವಾಗಿ ಲಾಭದಾಯಕವಾಗಿದ್ದು, ಅದರ ಏರಿಳಿತವು ರೈತರ ಜೀವನವನ್ನು ಹೆಚ್ಚು ಅನಿಶ್ಚಿತೆಗೊಳಿಸಿದೆ.

ಭತ್ತದ ಗದ್ದೆಯಲ್ಲಿ ಆತ್ಮಹತ್ಯೆಗೀಡಾದ ಮರೀಗೌಡ (50)ರ ಪತ್ನಿ ಚಿಕ್ಕತಾಯಮ್ಮ (42) “ಆಗಾಗ್ಗೆ ನಾವು ಹಲವು ಬರಗಳನ್ನು ಎದುರಿಸಿದ್ದೇವೆ. ಇದು ಪ್ರಕೃತಿಯಲ್ಲಿ ಸಾಮಾನ್ಯ. ಆದರೆ ಭತ್ತ ಮಾರಿದ್ದರಿಂದ ಬಂದ ಹಣ ಆ ವರ್ಷದ ರಸಗೊಬ್ಬರದ ಖರ್ಚಿಗೂ ಸಾಲದೇ ಇರುವುದನ್ನು ನನ್ನ ಗಂಡ ಎದುರಿಸಲಾರದೇ ಹೋದ” ಎಂದು ದುಃಖಿಸಿದಳು.

ಮರೀಗೌಡ ತೀರಿ ಹೋದ ನಂತರ ಅವಳು ಮತ್ತು ಅವಳ ಮಗ ತನ್ನ ಎರಡು ಎಕರೆ ಜಮೀನಿನ ಬೆಳೆಯನ್ನು ಕಬ್ಬು ಬೆಳೆಗೆ ಬದಲಾಯಿಸಿದರು. ಇತ್ತೀಚಿನ ಬೆಳೆಯನ್ನು ಟನ್ ಗೆ 2400 ರೂಗೆ ಮಾರಿದ್ದಾರೆ. ಕಡ್ಡಾಯವಾಗಿ ರೈತರಿಗೆ ಪಾವತಿಸಬೇಕಾದ, ಸರ್ಕಾರ ನಿಗದಿಪಡಿಸಿದ ನ್ಯಾಯ ಮತ್ತು ಲಾಭದಾಯಕ ಬೆಲೆ (ಈಖP) ಗಿಂತ ಇದು 350 ರೂ ಕಡಿಮೆ. ಕಾರ್ಖಾನೆಯು ಈ ಪಾವತಿಯನ್ನೂ ನಾಲ್ಕು ತಿಂಗಳು ವಿಳಂಬ ಮಾಡಿದೆ. “ಈ ಹಣ ಬರುವಷ್ಟರಲ್ಲಿ ಬೆಳೆ ಸಾಲದ ಬಡ್ಡಿ ಬೆಳೆದಿತ್ತು. ಬೆಳೆ ಖರ್ಚಿಗಿಂತ ಈಖP ದರವೇ ಕಡಿಮೆ ಇರುವಾಗ, ನಾವು ಈಖP ಗಿಂತ ಕಡಿಮೆ ದರಕ್ಕೆ ಮಾರಾಟ ಮಾಡಿದ್ದೇವೆ” ಎಂದು ಚಿಕ್ಕತಾಯಮ್ಮ ವಿವರಿಸಿದರು.

ಕಬ್ಬು ಬೆಳೆ ಖರ್ಚಿನ ಶೇಕಡಾ 77 ರಷ್ಟು ಸೇರಿಸಿ ಈಖP ನಿಗದಿಪಡಿಸಿದ್ದೇವೆ ಎಂಬ ಕೇಂದ್ರ ಸರ್ಕಾರದ ವಾದವನ್ನು ಸಂದರ್ಶಿಸಿದ ಪ್ರತಿ ಕಬ್ಬು ಬೆಳೆಗಾರರು ನಿರಾಕರಿಸಿದರು. ಜಿಲ್ಲೆಯಲ್ಲಿದ್ದ ಏಕೈಕ ಸಾರ್ವಜನಿಕ ಕಾರ್ಖಾನೆಯನ್ನು 2013 ರಲ್ಲಿ ಮುಚ್ಚುವ ಮೂಲಕ ಸರ್ಕಾರ ಖರೀದಿಯಿಂದ ಅಧಿಕೃತವಾಗಿ ದೂರ ಉಳಿಯಿತು.

2017 ಮತ್ತು 2018 ರ ಕಬ್ಬು ಅರೆಯುವ ಅವಧಿಯಲ್ಲಿ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಬ್ ನ ರೈತರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದರು. ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಒಡೆತನ ಅಥವಾ ನಿಯಂತ್ರಣದಲ್ಲಿರುವುದರಿಂದ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಸರ್ಕಾರಗಳು ತೀವ್ರವಾಗಿ ಸ್ಪಂದಿಸುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ದರ ಕುಸಿತಕ್ಕೆ ಒಳಗಾದಾಗ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ದೇಶ ಭಾರತ ಸಕ್ಕರೆ ಮೇಲಿನ ರಪ್ತು ತೆರಿಗೆಯನ್ನು ತೆಗೆದುಹಾಕಿತು. ಈ ವರ್ಷದ ಮೊದಲು ಸಕ್ಕರೆ ಕಾರ್ಖಾನೆಗಳಿಗೆ 10,500 ಕೋಟಿ ರೂ. ಉತ್ತೇಜಕ ಸಾಲದ ನೆರವು ನೀಡಿತ್ತು

ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಬಿಜೆಪಿ ಪುನಃ ಭರವಸೆ ನೀಡಿದೆ. 2015 ರಲ್ಲಿ ಅಧಿಕೃತವಾಗಿ ಬಿಜೆಪಿ ಸರ್ಕಾರ ವೇ ಸುಪ್ರೀಂ ಕೋರ್ಟ್ ಗೆ “ಉತ್ಪಾದನೆ ವೆಚ್ಚಕ್ಕೂ, ಕನಿಷ್ಠ ಬೆಂಬಲ ಬೆಲೆಗೂ ಯಾಂತ್ರಿಕ ಸಂಬಂಧ ಕಲ್ಪಿಸುವುದು ಉತ್ಪಾದನೆಯನ್ನು ನಿರುತ್ಸಾಹಗೊಳಿಸಲಿದೆ ಮತ್ತು ಮಾರುಕಟ್ಟೆಯನ್ನು ವಿಕೃತಿಗೊಳಿಸಲಿದೆ” ಎಂದು ಅಪಿಡವೆಟ್ ಸಲ್ಲಿಸಿ ತನ್ನ ಅಧಿಕೃತ ಧೋರಣೆಯನ್ನು ಪ್ರಕಟಪಡಿಸಿತ್ತು.

ಕನಿಷ್ಟ ಬೆಂಬಲ ಬೆಲೆಯಲ್ಲಿ `ಐತಿಹಾಸಿಕ` ಹೆಚ್ಚಳ ಎಂದು ಮೋದಿ ರವರು ಬಣ್ಣಿಸಿ ರೈತರ ಉತ್ಪನ್ನಗಳಿಗೆ ಶೇಕಡಾ 50 ರಷ್ಟು ಲಾಭಾಂಶ ನೀಡುವ ಚುನಾವಣಾ ಭರವಸೆ ಈಡೇರಿದಂತಾಗಿದೆ ಎಂಬುದನ್ನು 2018 ರ ತನಕವೂ ಪ್ರಕಟಿಸಿರಲಿಲ್ಲ. ಆದರೆ ಈ ಹೆಚ್ಚಳ ನಾಲ್ಕು ವರ್ಷಗಳಷ್ಟೂ ತುಂಬಾ ವಿಳಂಬ ಮಾತ್ರವೇ ಅಲ್ಲ ಜೊತೆಗೆ ಭೂ ಬಾಡಿಗೆಯನ್ನು ಪರಿಗಣಿಸದೆ ಅಸಮರ್ಪಕವಾಗಿತ್ತು. ಗೇಣಿ ಭೂಮಿಯಲ್ಲಿ ಬೇಸಾಯ ಮಾಡುವ ದೊಡ್ಡ ಸಂಖ್ಯೆಯ ರೈತರನ್ನು ಒಳಗೊಂಡಿರಲಿಲ್ಲ. ಹಲವಾರು ವರದಿಗಳು ಹೇಳುವಂತೆ ಸರ್ಕಾರ ಖರೀದಿಯಲ್ಲಿ ವಿಳಂಬ ಹಾಗೂ ನಿರಾಸಕ್ತಿ ವಹಿಸಿದ್ದರಿಂದ ಬೆಲೆಗಳ ಮೇಲೆ ಪರಿಣಾಮ ಬೀರಲು ಕನಿಷ್ಠ ಬೆಂಬಲ ಬೆಲೆ ಸಂಪೂರ್ಣ ವಿಫಲವಾಯಿತು.

ಕಟಾವು ಮುಗಿದ 45 ದಿನಗಳ ನಂತರವಷ್ಟೇ ಸರ್ಕಾರಿ ಖರೀದಿ ವ್ಯವಸ್ಥೆ ಪ್ರಾರಂಭವಾಯಿತು ಎಂದು ಮಂಡ್ಯ ಹಾಗೂ ಕೊಪ್ಪಳ ಜಿಲ್ಲೆಯ ಭತ್ತ ಬೆಳೆಗಾರರು ತಿಳಿಸಿದ್ದಾರೆ. ಹಣ ಪಾವತಿ ತಿಂಗಳುಗಟ್ಟಲೆ ವಿಳಂಬ ಆಗುವುದರಿಂದ ಸರ್ಕಾರಿ ಖರೀದಿ ಕೇಂದ್ರಕ್ಕೆ ಮಾರುವುದಿಲ್ಲ ಎಂದು ಸಣ್ಣ ರೈತರು ಅತೃಪ್ತಿ ವ್ಯಕ್ತಪಡಿಸಿದರು. ಹೀಗೆ ಇವರಿಗೆ ಒSP ಯ ಮೂರನೇ ಒಂದರಷ್ಟು ಕಡಿಮೆ ಬೆಲೆಗೆ ಖಾಸಗಿ ವ್ಯಾಪಾರಿಗಳಿಗೆ ಮಾರುವುದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ.

ಜಾಗತಿಕ ಮಾರುಕಟ್ಟೆಯ ಏರಿಳಿತಗಳು
ಉದಾರೀಕರಣಗೊಂಡ ವ್ಯಾಪಾರಿ ದೋರಣೆಗಳು ಈ ಬಿಕ್ಕಟ್ಟನ್ನು ಹೆಚ್ಚಿಸಿವೆ. ಗೋಧಿ, ದ್ವಿದಳ ಧಾನ್ಯಗಳು ಹಾಗೂ ಹಾಲು ಉತ್ಪನ್ನಗಳು ಮುಂತಾದ ಸರಕುಗಳ ಅನಿಯಂತ್ರಿತ ಅಮದು ಬೆಲೆಗಳ ಅನಿಶ್ಚಿತತೆಗೆ ಕೊಡುಗೆ ನೀಡಿದೆ. ವಳೆಗೆರಹಳ್ಳಿ ಯಲ್ಲಿ ರೇಷ್ಮೆ ಕೃಷಿಕರು ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಗೆ ನೇರವಾಗಿ ಜೋಡಿಸಲ್ಪಟ್ಟಿದ್ದಾರೆ.

2015 ರಲ್ಲಿ ಕಚ್ಚಾ ರೇಷ್ಮೆಯ ಅಮದು ಸುಂಕವನ್ನು ಸರ್ಕಾರ ಕಡಿತಗೊಳಿಸಿದಾಗ ಸರಸಮ್ಮನ ಪ್ರಪಂಚ ತಲೆಕೆಳಗಾಯಿತು. ಜನವರಿ 2016 ರಲ್ಲಿ ಆಕೆಯ ಗಂಡ ನಾಥಪ್ಪ ರೇಷ್ಮೆ ಗೂಡನ್ನು ಪ್ರತಿ ಕೆಜಿಗೆ 80 ರೂನಂತೆ ಮಾರಾಟ ಮಾಡಿದ. ಇದು ಆತ ಸಾಮಾನ್ಯವಾಗಿ ಮಾರಾಟ ಮಾಡುತ್ತಿದ್ದ ದರದ ಕಾಲು ಭಾಗ. “ಇದಾದ ಒಂದು ವಾರದಲ್ಲೇ ಅವರು ಆತ್ಮಹತ್ಯೆಗೀಡಾದರು” ಎಂದು 37 ವರ್ಷದ ವಿಧವೆ ಕಣ್ಣು ಒರೆಸಿಕೊಂಡರು.

ನೋಟು ರದ್ದಿನ ಮರ್ಮಘಾತ

ಭಾರತೀಯ ಆರ್ಥಿಕತೆಗೆ ಹಣಕಾಸು ಆಘಾತಕಾರಿಯಾಗಿ ಎರಗಿದ ಮೋದಿ ರವರ ನವೆಂಬರ್ 2016 ನೋಟು ರದ್ದು ಸತತ ಬರಗಾಲದಿಂದ ತತ್ತರಿಸಿ ತೆವಳುತ್ತಾ ಚೇತರಿಸಿಕೊಳ್ಳುತ್ತಿದ್ದ ಗ್ರಾಮೀಣ ಭಾರತಕ್ಕೆ ಆದ ಮರ್ಮಘಾತ. ನೋಟು ರದ್ದು ಕೃಷಿ ಮಾರುಕಟ್ಟೆಯನ್ನು ಹಾಳುಗೆಡುವಿದೆ ಎಂದು ಎರಡು ವರ್ಷದ ನಂತರ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ ಸಂಸದೀಯ ಸಮಿತಿ ಮುಂದೆ ಹೇಳಿಕೊಂಡಿದೆ. ನೋಟು ರದ್ದು ಕೆಟ್ಟ ಕಾಲದಲ್ಲಿ ಬಂದ ಮತ್ತೊಂದು ದುರ್ಘಟನೆ ಮಾತ್ರವೇ ಅಲ್ಲ. ಮುಂಗಾರು
ಬೆಳೆ(ಖಾರೀಪ್)ಮಾರಬೇಕಿತ್ತು ಅಥವಾ ಹಿಂಗಾರು (ರಾಬಿ)ಬೆಳೆಗೆ ಬೇಕಾದ ಸಾಮಗ್ರಿ ಖರೀದಿಸಬೇಕಿತ್ತು. ನಗದು ಕೊರತೆ ಈ ಎರಡು ಚಟುವಟಿಕೆಗಳನ್ನು ಸ್ಥಭ್ದಗೊಳಿಸಿತ್ತು.

ನೋಟು ರದ್ದು ಪರಿಣಾಮಕಾರಿಯಾಗಿ ಕೃಷಿ ಪೂರೈಕೆ ಸರಪಳಿಯನ್ನು ಹಾಳುಗೆಡುವಿತು. ಸರ್ಕಾರವು ಒಂದು ವಾರದಲ್ಲೇ ತನ್ನ ಅಂದಾಜಿನಿಂದ ಹಿಂದೆ ಸರಿದು ನೋಟು ರದ್ದು “ಕೃಷಿ ರಂಗವನ್ನು ಔಪಚಾರಿಕಗೊಳಿಸುತ್ತಿದೆ” ಎಂದು ಹೊಗಳಿ ಹೊಸ ವರದಿಯನ್ನು ತಯಾರಿಸಿತು. ಸಂದರ್ಶಿಸಿದ ಪ್ರತಿಯೊಬ್ಬ ರೈತನ ಬಳಿಯೂ ನೋಟು ರದ್ದು ಸಮಯದಲ್ಲಿ ಅವನು ಅನುಭವಿಸಿದ ಸಂಕಟದ ಕಥೆ ಇದ್ದು, ಸರ್ಕಾರದ ವಾದವನ್ನು ಅಲ್ಲಗಳೆಯುತ್ತವೆ. ಕೃಷಿ ಕೂಲಿಕಾರರು ಸಹ ಸಂಕಟಕ್ಕೀಡಾದರು. ಕೂಲಿಕಾರರಿಗೆ ಪಾವತಿಸಲು ರೈತರ ಬಳಿ ಹಣವೇ ಇರಲಿಲ್ಲವಾದ್ದರಿಂದ ಕೆಲಸಕ್ಕಾಗಿ ಪರಿತಪಿಸಬೇಕಾಯಿತು. ಹಳ್ಳಿಗಳಲ್ಲಿ ಕೆಲಸದ ಅವಕಾಶ ಕ್ಷೀಣಿಸಿದಾಗ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ಕೆಲಸ ಅರಸಿ ನಗರ, ಪಟ್ಟಣಗಳಿಗೆ ಸಾಮಾನ್ಯವಾಗಿ ಕೂಲಿಕಾರರು ವಲಸೆ ಹೋಗುತ್ತಾರೆ. ಭಾರತದ ಬೆಳೆಯುತ್ತಿರುವ ಕಟ್ಟಡ ನಿರ್ಮಾಣ ವಲಯದಲ್ಲಿ ಅಷೊತ್ತಿಗಾಗಲೇ ಐದು ಕೋಟಿ ಜನ ಉದ್ಯೋಗ ಕಂಡು ಕೊಂಡಿದ್ದರು. ಆದರೆ ನೋಟು ರದ್ದತಿ ಹಾಗೂ 2017 ರಿಂದ ಜಾರಿಗೆ ಬಂದ ಜಿ.ಎಸ್.ಟಿ. ಕಟ್ಟಡ ನಿರ್ಮಾಣ ವಲಯದ ಚಟುವಟಿಕೆಗಳನ್ನು ನಿಧಾನಗೊಳಿಸಿತು. ಉತ್ತರ ಕರ್ನಾಟಕದ ಕೊಪ್ಪಳ ದಲ್ಲಿ ನೂರಾರು ಜನ ತಮ್ಮ ಗ್ರಾಮಕ್ಕೆ ಮರಳಿದ್ದರು.

ಕೊಪ್ಪಳದ ಕುಷ್ಟಗಿಯ ಭೂ ಹೀನ ಕೂಲಿಕಾರ ಮಾಲಕ್ ಸಾಬ್ (37) “ರೈತರು ಯಂತ್ರಗಳನ್ನು ಬಳಸುತ್ತಿರುವುದು ಮತ್ತು ಕಡಿಮೆ ಬೆಳೆ ಬೆಳೆಯುತ್ತಿರುವುದರಿಂದ ಗ್ರಾಮದಲ್ಲಿ ಕೆಲಸ ಸಿಗುವುದು ಕಷ್ಟವಾಗಿದೆ. ಇದು ಗಾಯದ ಮೇಲೆ ಉಪ್ಪು ಸವರಿದಂತೆ. ಕಟ್ಟಡ ಕಾಮಗಾರಿ ಕೆಲಸಕ್ಕೆ ವಾಪಸ್ಸಾಗಲು ಇನ್ನು ಆರು ತಿಂಗಳು ಬೇಕು” ಎನ್ನುತ್ತಾ ನಿಟ್ಟುಸಿರು ಬಿಟ್ಟರು.

ತನ್ನ ಮಹತ್ವಾಕಾಂಕ್ಷಿ ಯೋಜನೆ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ವಿಫಲವಾಗಿದೆ. ಪ್ರತಿ ಸಾರಿಯೂ ವೇತನ ಪಾವತಿಯನ್ನು ವಿಳಂಬಿಸಲಾಗುತ್ತಿದೆ. ಜನ ಜೀವನ ನಿಸ್ತೇಜಗೊಂಡು ವ್ಯಾಪಕವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಈ ರೀತಿಯ ಅನುಷ್ಠಾನ ಗ್ರಾಮೀಣ ಬಡವರ ಬದುಕಿನಲ್ಲಿ ಮತ್ಯಾವ ಪರಿಣಾಮ ಬೀರಲು ಸಾಧ್ಯ.

ರೈತ ಚಳುವಳಿಗಳು

ಇತ್ತೀಚಿನ ವರ್ಷಗಳಲ್ಲಿ ರೈತರು ಹೆಚ್ಚಿನ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಭಾರತದ ಬಿಕ್ಕಟ್ಟು ನಗರದ ರಸ್ತೆಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತಿದೆ. ಬೆಲೆ ಕುಸಿತ ಖಂಡಿಸಿ ತಮ್ಮ ಉತ್ಪನ್ನಗಳನ್ನು ರಸ್ತೆಯಲ್ಲಿ ಸುರಿದು ಅಥವಾ ಸುಟ್ಟು ಪ್ರತಿಭಟಿಸುತ್ತಿರುವ ದೃಶ್ಯಗಳು ಕರುಣಾಜನಕವಾಗಿವೆ.

ಕಾರ್ಷಿಕ ಬಿಕ್ಕಟ್ಟಿನ ಕಾರಣದಿಂದ ರೈತ ಆತ್ಮಹತ್ಯೆಗಳು 2015 ರಲ್ಲಿ 2683 ವರದಿಯಾಗಿದ್ದು ಇದು ಹಿಂದಿನ ವರ್ಷದ ಸಂಖ್ಯೆ 628 ಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು. ರಾಷ್ಟ್ರೀಯ ಅಪರಾಧ ಅಂಕಿಸಂಖ್ಯೆಗಳು ಲಭ್ಯವಿರುವ ಕೊನೆ ವರ್ಷ 2016 ರಲ್ಲಿ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು.

ಆದರೆ, ಪ್ರತಿಭಟನೆಯೂ ಹೆಚ್ಚು ಸುಸಂಘಟಿತಗೊಳ್ಳುತ್ತಿದೆ. 2017 ರ ವರೆಗೂ ರೈತ ಸಂಘಟನೆಗಳು ತಮ್ಮ ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಗಳನ್ನು ನಡೆಸುತ್ತಿದ್ದವು. ನೋಟು ರದ್ದು ಮತ್ತು ತೀವ್ರ ಬೆಲೆ ಕುಸಿತದಲ್ಲಿ ವ್ಯಕ್ತವಾಗುತ್ತಿರುವ ತೀವ್ರಗೊಂಡ ಬಿಕ್ಕಟ್ಟು ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡಿವೆ.

ಆ ವರ್ಷ ಲಾಭದಾಯಕ ಬೆಲೆ ಹಾಗೂ ಸಾಲ ಮನ್ನಾ ಬೇಡಿಕೆಗಳ ಆಧಾರದಲ್ಲಿ ಸುಮಾರು 150 ರೈತಾಪಿ ಸಂಘಟನೆಗಳು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ರಚಿಸಿಕೊಂಡವು. 2018 ರಲ್ಲಿ ,ವಿವಿದೆಡೆಗಳಿಂದ ಬಂದ ನಾಲ್ಕು ಬೃಹತ್ ರ್ಯಾಲಿಗಳು ದೇಶದ ರಾಜಧಾನಿ ನವ ದೆಹಲಿಯಲ್ಲಿ ಸಮಾವೇಶಗೊಂಡು ಪ್ರತಿಭಟನಾ ಅಲೆಯನ್ನೇ ಎಬ್ಬಿಸಿದವು.

ವ್ಯಾಪಕ ಸಾಮಾಜಿಕ ಸಂಯೋಜನೆ ಒಳಗೊಂಡ ಕಾರಣದಿಂದ ಸಹ ಈ ಕಾರ್ಷಿಕ ಪ್ರತಿಭಟನೆ ಪ್ರಾಮುಖ್ಯತೆ ಪಡೆದಿದೆ. “ಗ್ರಾಮೀಣ ಸಮಾಜದ ವಿವಿಧ ಸ್ತರಗಳ ರೈತಾಪಿ ಸಮೂಹವನ್ನು ಒಟ್ಟಾಗಿ ಸೆಳೆದಿರುವುದರಿಂದ ನಮ್ಮ ಈ ಪ್ರತಿಭಟನೆ ಅತ್ಯಂತ ಮಹತ್ವಪೂರ್ಣವಾದುದ್ದಾಗಿದೆ” ಎಂದು 1.5 ಕೋಟಿ ಸದಸ್ಯತ್ವದ ಅಖಿಲ ಭಾರತ ಕಿಸಾನ್ ಸಭಾ ದ ಜಂಟಿ ಕಾರ್ಯದರ್ಶಿ ವಿಜು ಕೃಷ್ಣನ್ ಅಭಿಪ್ರಾಯ ಪಡುತ್ತಾರೆ

ಗ್ರಾಮೀಣ ಮತ

2018 ರಲ್ಲಿ ಮೂರು ಮುಖ್ಯ ರಾಜ್ಯಗಳ ಬಿಜೆಪಿ ಸೋಲಿಗೆ ಗ್ರಾಮೀಣ ಮತವೇ ಕಾರಣ ಎಂದು ವ್ಯಾಪಕವಾಗಿ ಆರೋಪಿಸಲಾಗುತ್ತಿದೆ. ಅಂದಿನಿಂದ ಎಲ್ಲ ರಾಜಕೀಯ ಪಕ್ಷಗಳು ಸಾಲ ಮನ್ನಾ ಮತ್ತು ರೈತರ ಖಾತೆಗೆ ಹಣ ಹಾಕುವ ಯೋಜನೆ ಪ್ರಕಟಿಸುತ್ತಿವೆ.ಈ ವರ್ಷದ ಫೆÉಬ್ರವರಿ ಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ವಾರ್ಷಿಕ 6000 ರೂ. ಹಣ ನೀಡುವ ರಾಷ್ಟ್ರೀಯ ನಗದು ವರ್ಗಾವಣೆ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಕಟಿಸಿತು. ಕಾಂಗ್ರೆಸ್ ಪ್ರಣಾಳಿಕೆ ಐದು ಕೋಟಿ ಕಡು ಬಡವರಿಗೆ ಅಷ್ಟೇ ಮೊತ್ತವನ್ನು ಪ್ರತಿ ತಿಂಗಳು ನೀಡುವುದಾಗಿ ಘೋಷಿಸಿದೆ.

ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ರೈತ ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಬಿಜೆಪಿ ಕೂಡ ಒಂದು ಲಕ್ಷ ರೂ ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಹೇಳಿದರೆ, ಕಾಂಗ್ರೆಸ್ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಹಾಗೂ ಪ್ರತ್ಯೇಕ ಕೃಷಿ ಬಜೆಟ್ ಮಾಡುವುದಾಗಿ ಭರವಸೆ ನೀಡಿದೆ. ದಶಕಗಳಿಂದ ವ್ರಣಗೊಂಡು ಉಲ್ಬಣವಾಗಿರುವ ಬಿಕ್ಕಟ್ಟನ್ನು ಈ ರಾಜಕೀಯ ಪಕ್ಷಗಳು ಹೇಗೆ ನಿಭಾಯಿಸಲಿವೆ ಎಂಬುದನ್ನು ಮುಂದೆ ನೋಡಬೇಕಿದೆ. ಆದರೆ ಈಗ ವಳೆಗೆರಹಳ್ಳಿ ಯ ಎಲ್ಲ ರೈತರು ಈ ಭರವಸೆಗಳನ್ನು ನಂಬುತ್ತಿಲ್ಲ.

“ಬೆಲೆ ಬಗ್ಗೆ ಏನು? ಮತ್ತೊಮ್ಮೆ ನಮ್ಮ ಬೆಳೆ ಮಾರುವಾಗ ಈ ಹಣ ಹಾಕುವ ಯೋಜನೆ ಹೇಗೆ ಖಾತರಿ ನೀಡುತ್ತದೆ, ಇವೆಲ್ಲವನ್ನೂ ನಾವು ಹೇಗೆ ತಿಳಿಯುವುದು, ನೀವು ಮತ್ತೇ ಇಲ್ಲಿಗೆ ಬರುವ ಹೊತ್ತಿಗೆ ನಾವು ಇದ್ದವೂ ಇಲ್ಲವೋ, ನಮ್ಮ ಕುಟುಂಬದವರನ್ನು ನೀವು ಮಾತನಾಡಿಸುವುದಿಲ್ಲ ಎಂದು ನಾನು ಹೇಗೆ ಹೇಳಲಿ?”ಎಂದು , ತನ್ನ ಗ್ರಾಮದ ಮತ್ತೊಬ್ಬರನ್ನು ಕಳೆದುಕೊಂಡು ದುಃಖತಪ್ತನಾದ 32 ವರ್ಷದ ರೈತ ಉಮೇಶ್ ಕೇಳುತ್ತಾನೆ. ಇವರ ಪ್ರಕಾರ ಇದು ಒಂದು ಮುಗಿಯದ ಮಾನವ ನಿರ್ಮಿತ ದುರಂತ.

– ದೀಪಾ ಕುರುಪ್ (ಕನ್ನಡಕ್ಕೆ : ಟಿ.ಯಶವಂತ)
ಕೃಪೆ: ಅಲ್ ಜಜೀರಾ

ಮೂಲ ಲೇಖನ ಓದಲು ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.aljazeera.com/news/2019/04/india-elections-farm-crisis-pm-narendra-modi-190418191725241.html

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 days ago

ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ

ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ...

ಅಂತರಂಗ6 days ago

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ...

ದಿನದ ಸುದ್ದಿ6 days ago

ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು. ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್...

ದಿನದ ಸುದ್ದಿ1 week ago

ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ...

ದಿನದ ಸುದ್ದಿ1 week ago

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ

ಸುದ್ದಿದಿನ,ದಾವಣಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದು ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹತ್ವದ...

ದಿನದ ಸುದ್ದಿ2 weeks ago

ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್

ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO)...

ದಿನದ ಸುದ್ದಿ2 weeks ago

ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ

ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು...

ದಿನದ ಸುದ್ದಿ2 weeks ago

ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ‌.ಕೆ.ಎ.ಓಬಳಪ್ಪ ಲೋಕಾಗೆ ದೂರು

ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7...

ದಿನದ ಸುದ್ದಿ2 weeks ago

ಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಇವರಿಗೆ ರಾಜ್ಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಬಿಡುಗಡೆಯಾದ ರೂ. 695 ಲಕ್ಷಗಳ ಅನುದಾನದ ಖರ್ಚು ವೆಚ್ಚವನ್ನು ಇಲಾಖಾ...

ದಿನದ ಸುದ್ದಿ3 weeks ago

ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ

ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,...

Trending