ದಿನದ ಸುದ್ದಿ
ಸ್ವಗತ : ಇದು ಸೂಳೆಕೆರೆ ಕೂಗು !
ಭಾಗ -1 : ‘ನಮ್ಮ ಸೂಳೆಕೆರೆ ಉಳಿಸಿ ಅಭಿಯಾನ’
ನಾನು ಶಾಂತಿಸಾಗರ. ನನ್ನ ಸೂಳಕೆರೆ ಎಂತಲೂ ಕೆರೆಯುತ್ತಾರೆ. ಶತಮಾನಗಳ ಕಾಲ ಜೀವ ಕುಲದ ದಾಹ ನೀಗಿಸಿದ ನಾನು ಇಂದು ಕುಬ್ಜವಾಗಿದ್ದೇನೆ. ನನ್ನ ಸಂಕಟ ಅದುವಲ್ಲ. ಬದುಕಿನ ಭವಿಷ್ಯ ಅರಿಯದ ಮಾನವ ಯಾವುದೋ ಆಸೆಗೆ ಬಲಿಯಾಗಿ ಒತ್ತುವರಿ ಮಾಡಿದ್ದಾನೆ. ಜೀವ ಜಲ ನೀಡಿದ ನನ್ನ ರಕ್ಷಣೆ ಕುರಿತು ತೀರಾ ನಿರ್ಲಕ್ಷ್ಯ ವಹಿಸಿದ್ದಾನೆ. ಅದು ಆತನ ಅಜ್ಞಾನ ಎಂದು ನಾನು ಕ್ಷಮಿಸಿ ಬಿಡುವ ಉದಾರತೆ ನನ್ನೊಳೆಗೆ ಇದೆ. ಆದರೆ ಭವಿಷ್ಯ ಆತನನ್ನು ಕ್ಷಮಿಸುವುದಿಲ್ಲ. ಹಲವು ದಾಳಿಯಿಂದ ಸೊರಗಿರುವ ನಾನು ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿದ್ದೇನೆ. ಆದರೆ ಅದರ ಪರಿವೇ ಇಲ್ಲದ ಮಾನವ ಮಾತ್ರ ತನ್ನ ಅಜ್ಞಾನ ಮುಂದುವರಿಸಿದ್ದಾನೆ. ಇದರಿಂದ ಕೇವಲ ಆತನಿಗಲ್ಲ, ಇಡೀ ಜೀವಕುಲ ಸಂಕಷ್ಟ ಅನುಭವಿಸುವ ದಿನಗಳು ಎದುರಾಗುತ್ತಿವೆ. ಇದು ನನ್ನನ್ನು ಅಕ್ಷರಶಃ ನೋವಿಸುತ್ತಿವೆ.
ನನ್ನ ಉದ್ದ – 8 ಕಿಲೋ ಮೀಟರ್ ಗಳಿಗೂ ಹೆಚ್ಚು, ನನ್ನ ಅಗಲ – ಸರಾಸರಿ 4 ಕಿಲೋ ಮೀಟರ್ . ಹಿಂದೆ ನನ್ನ ವಿಸ್ತಾರ 6650 ಎಕರೆ. ಇದು ನಾನು ಈ ಭೂಮಿ ಮೇಲೆ ಜನ್ಮ ತಾಳಿದಾಗ ಇದ್ದ ನನ್ನ ದೇಹದ ವಿಸ್ತಾರ. ಆದರೆ ಇಂದಿನ ವಿಸ್ತಾರ – 5000 ಎಕರೆ ಮಾತ್ರ. ಕೆಲವರ ಆಸೆಗೆ ಬಲಿಯಾದ ನಾನು ನನ್ನ ಹಲವು ಭಾಗ ಕಳೆದುಕೊಂಡಿದ್ದೇನೆ. ಮುಂದಿನ ಅಪಾಯ ಅರಿಯದೇ ಕೆಲವರು 1500 ಎಕರೆ ನನ್ನ ದೇಹವನ್ನು ಭಾಗ ಮಾಡಿದ್ದಾರೆ.
ಜೀವ ಕುಲಕ್ಕೆ ಬದುಕಲು ರಕ್ತದಂತೆ ನೀರು ಕೂಡ ಅಷ್ಟೇ ಮುಖ್ಯ. ಹಿಂದೆ ನಾನು 3 ರಿಂದ 4 ಅಡಿ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಇಂದು ಒಂದು ಟಿಎಂಸಿ ಅಡಿ ನೀರು ಸಂಗ್ರಹಿಸುವ ಕಸುವು ಹೊಂದಿದ್ದೇನೆ. ನನ್ನ ನಂಬಿ ಬದುಕುತ್ತಿರುವ ಅಸಂಖ್ಯಾತ ಜೀವಕುಲದ ದಾಹವನ್ನು ನಿರಂತರವಾಗಿ ನೀಗಿಸಬೇಕು ಎಂಬುದು ನನ್ನ ಆಸೆ. ಇದಕ್ಕೆ ಪ್ರಜ್ಞಾವಂತರಾದ ನಿಮ್ಮ ಸಹಕಾರ ಬೇಕು. ನಾನು ಪರಿ ಪರಿಯಾಗಿ ಬೇಡಿಕೊಳ್ಳುವೆ. ನನ್ನ ರಕ್ಷಣೆಗೆ ನೀನು ಧ್ವನಿ ಎತ್ತು ನಿನ್ನ ಕೊನೆಗಾಲದವರಿಗೂ ನಾನು ದಾಹ ನೀಗಿಸುತ್ತೇನೆ. ಅರಿತೋ, ಅರಿಯದೆಯೋ ನನ್ನ ಮೇಲೆ ಅಕ್ರಮಣ ಮಾಡಿದವರ ಅಜ್ಞಾನವನ್ನು ದೂರ ಮಾಡು. ಇಗೋ ಮಾನವ ನಾನು ಬದುಕಬೇಕು. ಏಕೆಂದರೆ ನನ್ನ ನಂಬಿ ಜೀವಕೋಟಿ ಇದೆ. ಅದಕ್ಕಾಗಿ….
ನನ್ನ ರಕ್ಷಣೆಯ ನಿರೀಕ್ಷೆಯಲ್ಲಿ
ಇಂತಿ
ಸೂಳಕೆರೆ (ಶಾಂತಿಸಾಗರ)
ಈ ನಿಟ್ಟಿನಲ್ಲಿ ‘ಸುದ್ದಿದಿನ.ಕಾಂ’ ಕೂಡಾ ‘ನಮ್ಮ ಸೂಳೆಕೆರೆ ಉಳಿಸಿ ಅಭಿಯಾನ’ವನ್ನು ಆರಂಭಿಸಿದೆ. ಇದಕ್ಕೆ ಯುವಸಮೂಹ, ಪರಿಸರ ಪ್ರೇಮಿಗಳು, ನಾಗರೀಕರು ಸೂಳೆಕೆರೆಯ ಬಗೆಗಿನ ಅನಿಸಿಕೆ, ಮಾಹಿತಿಯನ್ನು ಸುದ್ದಿದಿನದ | 9986715401 ಈ ವಾಟ್ಸಾಪ್ ನಂಬರ್ ಇಲ್ಲಿ ಹಂಚಿಕೊಳ್ಳಬಹುದು.
ಹಾಗೇ ‘ಖಡ್ಗ ಸ್ವಯಂ ಸೇವಕರ ಸಂಘ(ರಿ)- ಕರ್ನಾಟಕ’ ದ
ರಘು.ಬಿ.ಆರ್ ಹೊನ್ನೆಮರದಳ್ಳಿ|997241414251
ಕೆ.ಸಿ.ಬಸವರಾಜ್ ಬೆಳ್ಳೂಡಿ| 9606781310
ಬಿ. ಕುಬೇಂದ್ರ ಚನ್ನಗಿರಿ | 9900437357 ಗೆ
ಇವರನ್ನು ಸಂಪರ್ಕಿಸುವುದರ ಮೂಲಕ ಹೋರಾಟದ ಬಗೆಗಿನ ಮಾಹಿತಿಯನ್ನು ಪಡೆಯಬಹುದು.

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್ಪಿಯನ್ನು ಕ್ವಿಂಟಲ್ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್ಆರ್ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ4 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ2 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ


