ದಿನದ ಸುದ್ದಿ
ಕವಿತೆ | ಕಾರಣಿಕ
- ಪ್ರಕಾಶ ಕೋನಾಪುರ
ಊರ ನಡು ಮಧ್ಯೆ
ನಗರದ ನಾಗರೀಕರು ಓಡಾಡುವ
ವರ್ತುಲದ ಕೇಂದ್ರ ಬಿಂದುವಿನಲ್ಲಿ
ಯಾವುದೋ ಮಹಾನುಭಾವರ ಮೂರ್ತಿ
ಪ್ರತಿಷ್ಟಾಪಿಸಲು ಕಟ್ಟಿದ ಕಟ್ಟೆಯ ಮೇಲೆ ನಿಂತು
ಎಲ್ಲರಿಗೂ ಕೇಳುವಂತೆ ಜೋರು ದನಿಯಲ್ಲಿ
ಕಾರಣಿಕ ನುಡಿದಿತ್ತು ತಾನೆ
‘ಎಲ್ಲಾ ಮಾರತಾನಲೇ ಪರಾಕ್ ‘
‘ ದಾರದ ಮಹಿಮೆ ನಂಬಬ್ಯಾಡ್ರಲೇ ಪರಾಕ್ ‘
ಎಲ್ಲಾ ಕೇಳಿಯೂ ಕೇಳದಂತೆ
ಮುಖ ತಿರುವಿಕೊಂಡು ಹೋದವರು ನೀವೇ ತಾನೇ
ವೇಷಗಾರನ ನಕಲೀ ಮಾತಿನ ಮೋಡಿಗೆ
ಮರುಳಾದವರು ನೀವೇ ಅಲ್ಲವೇ?
ತಿಂಗಳಿಗೊಮ್ಮೆ ಬಂದು ಮನದ ಮಾತು
ಮಾತಾಡುವವನ ಕಿಸೆಯ
ಬೆಂಡು ಬತ್ತಾಸು ಖಾಲಿಯಾಗಿದೆ
ಜಾತ್ರೆಯಲ್ಲಿ ಸಿಕ್ಕಷ್ಟು ಸೀರಿ ಹಿರಿದಷ್ಟು ಹೀರಿ
ಎಲ್ಲ ಮಾರಿಯಾದ ಮೇಲೆ
ಜಾಗರಗೊಂಡ ಜನವೇ ಈಗ ಬನ್ನೀ
ಪುರವಂತನ ಅಟ್ಟಣಗೆಯಿಂದ ಕೆಳಗಿಳಿಸೋಣ
ತೆರೆಯ ಹಿಂದಿರುವ ದಾರ ಕಿತ್ತೊಗೆದು
ದೇಶದ ಸಿರಿ ಹಿರಿಮೆ ಉಳಿಸೋಣ
ಕಳ್ಳರ ಜಾತ್ರೆಯಲ್ಲಿ
ಬಡವನ ಕಾರಣಿಕ
‘ನಕಲಿ ಸಂತ ಮೋಡಿ ಆಟಗಾರನ
ಒದ್ದೋಡಿಸಲಿಕ್ಕರ ದೇಶ ಮಾಯಕ್ಕಾತ್ರಲೇ ಪರಾಕ್’.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243