ದಿನದ ಸುದ್ದಿ
ಹೆಣ್ಣಿಲ್ಲದೆ ಜಗ ಬದುಕುವುದುಂಟೆ..?
- ವಿನಯಕುಮಾರ್ ಎಚ್ ಸಿ, ಕನ್ನಡ ಉಪನ್ಯಾಸಕ,ಎಸ್ ಪಿ ಎಸ್ ಎಸ್ ಸೈನ್ಸ್ ಪಿಯು ಕಾಲೇಜು,ದಾವಣಗೆರೆ
ಆತ್ಮೀಯರೆ ನಮಸ್ತೆ. ಹಾಗೆ ಅಂತರಾಷ್ರ್ಟೀಯ ಮಹಿಳಾದಿನದ ಶುಭಕಾಮನೆ. ಗೌರವಾನ್ವಿತರೆ ನಾವು ನೀವೆಲ್ಲಾ ಈ ಭೂಮಿ ಇರೋದಕ್ಕೆ ಜೀವಂತವಾಗಿ ಖುಷಿಯಾಗಿ ಆನಂದವಾಗಿ ಬಾಳ್ವೆ ಮಾಡ್ತಿರೋದು. ಭೂಮಿ ಇಲ್ಲದೆ ಜೀವಸಂಕುಲಗಳ ಇರುವಿಕೆಯ ಊಹಿಸಲು ಸಾಧ್ಯವೆ ಯೋಚಿಸಿ.ಅದರ ಉದರದಲ್ಲೇ ಜಗದ ಎಲ್ಲಾ ದೇವರು ಅವರ ವಾಸಸ್ಥಾನ ಇರೋದು.ಅದಲ್ಲದೆ ಮತ್ತೆಲ್ಲೂ ಇಲ್ಲ.
ಎಲ್ಲಾ ಧರ್ಮದ ದೇವರುಗಳು ನೆಲೆಯಾಗಿರೋದು ಈ ಭೂಮಿ ಮೇಲೆ ಅಲ್ವೇ?ಆದರೆ ಅಜ್ಞಾನದ ಅಂಧತ್ವ ಮನುಜರಲ್ಲಿ ತುಂಬಿ ತುಳುಕುತ್ತಿರುವುದರಿಂದ ಶೀತಲ ಸಮರ ಶುರುವಾಗಿ ಇಂದು ಬೀದಿಗೆ ಬಂದು ಬಿದ್ದಿದೆ.ವಿವೇಕಿಗಳು ಪ್ರಜ್ಞಾವಂತರು ಯೋಗಿಗಳು ಮೌನವಾಗಿಯೇ ಭೂಮಿಯನ್ನು ಪೂಜ್ಯ ಭಾವನೆಯಿಂದ ನೋಡುತ್ತಿದ್ದಾರೆ.ಅವರು ಅಂದಿನಿಂದ ಇಂದಿನವರೆಗು ಶ್ರೇಷ್ಟರೆನಿಸಿಕೊಂಡೇ ಇದ್ದಾರೆ.
ಇಷ್ಟೆಲ್ಲಾ ಪೀಠಿಕೆ ಏಕೆ ಅಂದ್ರೆ 8/3/22 “ಅಂತರಾಷ್ರ್ಟೀಯ ಮಹಿಳಾದಿನ” ಆದ ಕಾರಣ ಮನುಷ್ಯನಿಗೆ ಅಷ್ಟೇ ಅಲ್ಲದೆ ಜಗದ ಜೀವಗಳಿಗೆ ಭೂಮಿಯೇ ಆಧಾರ.ಈ ಭೂಮಿಯನ್ನು ನಮ್ಮ ಪೂರ್ವಜರು ಅದರಲ್ಲೂ ಬುದ್ಧಿವಂತರು ಮನುಷ್ಯತ್ವ ಉಳ್ಳವರು ಮಾತ್ರ ಹೆಣ್ಣು ದೇವತೆ ಅಂತ ನೋಡ್ತಿದ್ದಾರೆ.ಆದರೆ ಹಲವು ಅವಿವೇಕಿಗಳು ಅದ್ಯಾರೊ ಮನು ಎಂಬುವವನು ಬರೆದ ಬರಹವೇ ಅತೀ ಶ್ರೇಷ್ಟ ಎಂಬಂತೆ ಅದರಂತೆ ಅವಿವೇಕಿಗಳಾಗಿ ಜೀವಿಸುತ್ತಿದ್ದಾರೆ.ಹೆಣ್ಣನ್ನ ತುಂಬಾ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ.
ಆ ರೀತಿ ನಡೆಸಿಕೊಳ್ಳುವವರ ಬದುಕು ಅಕ್ಷರ ಸಹ ಪಾತಾಳ ಹಿಡಿದಿದೆ.ಇದರೆ ಅದನ್ನ ಹೊರಗೆ ಹೇಳುತ್ತಿಲ್ಲ.ಯಾಕೆಂದರೆ ಗಂಡೆಂಬ ದರ್ಪ.ಈ ಮೂರ್ಖ ಮಂದಿಗಳು ಈಶ್ವರನನ್ನ ಬಹಳ ಭಕ್ತಿಯಿಂದ ಪೂಜಿಸುತ್ತಾರೆ ಅನ್ನೋಣ. ಆದರೆ ಆತ ಅರ್ಧನಾರೀಶ್ವರ ಆಗಿರೋದು ತಿಳಿಯದಷ್ಟು ಅಧಮರಾಗಿದ್ದಾರೆ ಅಲ್ಲವೆ? ಹೆಣ್ಣೆಂದರೆ ಏನು ಅವಳ ಶಕ್ತಿ ಏನು ಯೋಗ್ಯತೆ ಏನು ಹೇಗೆ ಗೌರವಿಸಬೇಕು ಎಂಬುದನ್ನು ಇಡೀ ಜಗತ್ತನ್ನೇ ಕಾಯುತ್ತಿರುವ ಈಶ್ವರನನ್ನು ನೋಡಿದರೆ ತಿಳಿಯುತ್ತೆ.ಇವರು ಕೇವಲ ತೋರಿಕೆಯ ಜನ.
ನಿಜವಾದ ಭಕ್ತರಂತೆ ನಟಿಸುತ್ತಿದ್ದಾರೆ.ಅಂಥವರೆ ಮನೆಯಲ್ಲಿ ಹೆಣ್ಣನ್ನ ಬಹಳ ಶೋಷಣೆ ಮಾಡ್ತಿರೋದು.ಆ ಅಜ್ಞಾನಿಗಳಿಗೆ ಮದುವೆ ಆಗುವಾಗ ಮಾತ್ರ ಹೆಣ್ಣೇ ಬೇಕು.ಆದರೆ ಅವರಿಗೆ ಹುಟ್ಟುವ ಮಗು ಮಾತ್ರ ಗಂಡೇ ಆಗಿರ್ಬೇಕು.ಇವರ ಅಮ್ಮನು ಗಂಡೇ ಆಗಿದ್ರೆ ಇವನು ಎಲ್ಲಿ ಬರ್ತಿದ್ದ? ಪೈಶಾಚಿಕ ಮನಸ್ಸುಳ್ಳವರಿಗೆ ಹೆಣ್ಣಿನ ಮಹಿಮೆ ಒಂದೇ ಒಂದು ಭಾಗವು ತಿಳಿದಿಲ್ಲ.ಇಡೀ ಜಗತ್ತು ಇಂದು ಜೀವಂತವಾಗಿರಲು ಒಂದು ಹೆಣ್ಣೇ ಹೊರತು ಗಂಡಲ್ಲ.ಈ ಭೂಮಿ ಜಗತ್ತಿನ ಸಕಲ ಜೀವ ರಾಶಿಗಳಿಗೆ ಹೆಣ್ಣಾಗಿ ಪ್ರೀತಿಯಿಂದ ಆಶ್ರಯ ಕೊಟ್ಟು ಸಲಹುತ್ತಿರೋದು.
ಇಷ್ಟೆಲ್ಲಾ ಹಾರಾಡುತ್ತಿರುವ ಗಂಡು ಎರಡೇ ಎರಡು ದಿನ ಮನೆ ಮಕ್ಕಳ ನೋಡ್ಕೊಂಡು ನಿಭಾಯಿಸಲಿ ಗೊತ್ತಾಗುತ್ತೆ.ಹೆಣ್ಣಿನ ಮಹತ್ವ ಏನು ಹೆಣ್ಣಿಲ್ಲದ ಮನೆ ಹೇಗಿರುತ್ತೆ ಎನ್ನುವುದು ತಿಳಿಯುತ್ತೆ.ಒಂದು ಸಣ್ಣ ಉದಾಹರಣೆ ಎಂದರೆ ಒಂದು ಕುಟುಂಬ.ಅದರಲ್ಲಿ ಆ ದಂಪತಿಗಳಿಗೆ ಮೂರು ಅಥವಾ ಐದು ಗಂಡು ಒಂದೇ ಒಂದು ಹೆಣ್ಣುಮಗಳು.ಅವಳ ಮದುವೆ ಮಾಡಿ ಗಂಡನ ಮನೆಗೆ ಕಳಿಸಿರ್ತಾರೆ. ಗಂಡು ಮಕ್ಕಳೆಲ್ಲರೂ.ಯಾವುದೊ ಒಂದು ಸಣ್ಣ ಮಾತಿಗೆ ಈ ನಾಲ್ವರು ಅಣ್ಣ ತಮ್ಮರು ಮಾತು ಬಿಟ್ಟಿರ್ತರೆ.
ಹೀಗಿರುವಾಗ ಒಮ್ಮೆ ಈ ಅವರ ತಾಯಿಗೆ ಖಾಯಿಲೆ ಬಂದಿರುತ್ತೆ .ಆಗ ಮಕ್ಕಳು ಅವರ ತಾಯಿಗೆ ಆಸ್ಪತ್ರೆಗೆ ಕರೆದ್ಹೋಗಿ ಬರ್ತರೆ.ವೈದ್ಯರು ಹೇಳಿದಂತೆ ಹೊತ್ತು ಹೊತ್ತಿಗೆ ಗಂಜಿ ಹಾಲು ಅನ್ನ ತಿಳಿಸಾರು ಕೊಡ್ಬೇಕು ಅಂತ ತಿಳಿಸಿರ್ತಾರೆ.ಆಸ್ಪತ್ರೆಯಿಂದ ಮನೆಗೆ ಬರ್ತಾರೆ.ಅನ್ನ ಮಾಡಿ ತಿಳಿ ಸಾಂಬಾರ್ ಮಾಡ್ಬೇಕು ಅನ್ನುವಾಗ ಇವರಿಗೆ ಅಡುಗೆ ಕೆಲಸವೇ ಗೊತ್ತಿಲ್ಲ.ಮತ್ತೆ ತಂದೆ ವಯಸ್ಸಾದವರು. ಮನೆಯಲ್ಲಿ ಬೇರೆ ಹೆಣ್ಣಿಲ್ಲ.ಜೊತೆಗೆ ಹಿರಿಯವಳೆ ಹೆಣ್ಣು ಮಗಳು.ಎಲ್ಲರೂ ವಿದ್ಯಾವಂತರೆ.ಇನ್ನೂ ಮದುವೆ ಆಗಿರ್ಲಿಲ್ಲ.ಆದರೆ ಅಡುಗೆ ವಿದ್ಯೆ ಕಲಿತ್ತಿಲ್ಲ.ಅವರ ತಾಯಿಯೇ ಅಡುಗೆ ಮಾಡಿ ಬಡಿಸುತ್ತಿದ್ದದ್ದು.
ಅಡುಗೆ ಹೇಗ್ಮಾಡ್ತರೆ ಹೇಳಿ?ಅಕ್ಕ ನಿಗೆ ಕರೆಯಲು ಮಾತು ಬಿಟ್ಟಿದ್ದಾರೆ.ಹೇಗೆ ಕರಿತಾರೆ ಹೇಳಿ?ಅಕ್ಕ ಪಕ್ಕದವರು ಎಷ್ಟು ದಿನ ಇವರಿಗೆ ಸಹಾಯ ಮಾಡ್ತರೆ?ಅವರು ಹೇಳಿದ್ರು “ಮೊಗ ನಮಗು ನೂರಾರು ಕೆಲ್ಸ ಇವೆ ನಿಮ್ಮ ಅಕ್ಕನ ಕರಿಸ್ಕಳ್ಳಿ”ಅಂತೇಳಿ ಬರದಾದರು.ಇವರಿಗೆ ಮದುವೆ ಆಗಿ ಆಗಿ ಅಂತೇಳಿ ಅವರ ತಾಯಿ ಸಾಕಾಗಿದ್ದಳು.ಅವರೆಲ್ಲ ಹೆಣ್ಣಿನ ವಿರೋಧಿಯಾಗಿದ್ದರು.
ಯಾರೂ ಅನ್ನ ಮಾಡಲು ಬಾರದಿದ್ದಾಗ ಪಾಪ ಇವರ ತಾಯಾಯೆ ತೂರಾಡಿಕೊಂಡು ಅಡುಗೆ ಮಾಡಲು ಹೋಗುವಾಗ ಮಕ್ಕಳಿಗೆ ಹೇಳಿದಳು.”ಹೇ ಮಕ್ಳ ನಿಮಗೆ ಕಾಯಿಲೆ ಕಸಾಲೆ ಬಂದಾಗ ನಾನು ಓಡಾಡಿ ನಿಮಗಾಗಿ ನಿಮ್ಮನ್ನು ನನ್ನ ಕಂಕಳಲ್ಲಿ ಎತ್ಕೊಂಡು ಆಸ್ಪತ್ರೆಗೆ ಓಡಾಡಿ ಟೈಂ ಟೈಂಗೆ ಸರಿಯಾಗಿ ಊಟ ತಿಂಡಿ ಮಾಡಿ ಜೋಪಾನ ಮಾಡಿದೆ.ಯಾವುದೊ ಸಣ್ಣ ಮಾತಿಗೆ ನನ್ನ ಮಗಳ ಮನೆಗೆ ಬರುಕ್ಕಿಲ್ಲದಂಗೆ ಮಾಡಿದ್ರಿ.
ಈಗ ನನಗೆ ಒಂದು ತುತ್ತು ಅನ್ನ ಬೇಯಿಸಿಕೊಡೋಕೆ ಆಗದೆ ನಿಂತಿದ್ದೀರಲ್ಲ.ನಿಮ್ಮಂತವರು ನೂರು ಜನ ಇದ್ರು ಏನ್ಬಂತ್ರೋ ಭಾಗ್ಯ?ಹೆಣ್ಣನ್ನ ಆಗಿನಿಂದಲೂ ಕೀಳಾಗೆ ನೋಡ್ತಾ ಬಂದ್ರಿ.ಈಗ ನಿಮಗೆ ಯಾರೂ ಹೆಣ್ಣು ಕೊಡ್ತಿಲ್ಲ.ಈಗ ನನಗೆ ಮಕ್ಳಿದ್ದೂ ಇಲ್ಲದಂತಾಗಿದೆ.ಮೊದಲು ಹೆಣ್ಣು ಅಂದ್ರೆ ಏನು ಅಂತ ಮೊದಲು ತಿಳಿರಿ.ನಿಮ್ಮ ಓದಿಗೆ ಬೆಂಕಿ ಹಾಕ್ತು.ಅದ ತಿಪ್ಪೆಗೆ ಬಿಸಾಕಿ.ಹೆತ್ತೋರಿಗೆ ಅನ್ನ ಕೊಡದ ನೀವು ಯಾವ ಹೆಣ್ಣನ್ನ ಪ್ರೀತಿಯಿಂದ ನೋಡ್ಕೊತಿರಿ?ಏನೇ ಆಗಲಿ ಒಂದು ಮನೆಗೆ ಗಂಡಿನ ಸುಳಿ ಇಲ್ಲದೇ ಇದ್ರು ಪರ್ವಾಗಿಲ್ಲ ಹೆಣ್ಣಿರ್ಬೇಕು.
ಅವಳಿಗೆ ಮಾತ್ರ ಗೊತ್ತು ಹೆಣ್ಣಿನ ನೋವು.ನನ್ನ ಕಣ್ಮುಂದೆ ನೀವ್ಯಾರು ಇರ್ಬೇಡಿ ಹೋಗಿ ಎಂದು ಸ್ವಲ್ಪ ಸಿಟ್ಟಾದಳು.ನಂತರ ಓಡೋಗಿ ತಮ್ಮ ಅಕ್ಕನ ಕಾಲ್ಹಿಡಿದು ಕ್ಷಮೆ ಕೇಳಿ ತೌರಿಗೆ ಕರೆ ತಂದು ತಾಯಿಯ ಸೇವೆ ಮಾಡಿಸಿ ಪ್ರೀತಿಯಿಂದ ಬೀಳ್ಕೊಟ್ಟರು.ನೋಡಿ ಹೆಣ್ಣಿಲ್ಲದ ಮನೆ ಅಂದ್ರೆ ದೇವರಿಲ್ಲದ ಗುಡಿಯೆ ಸರಿ.ಆಕೆ ಕೇವಲ ಭೋಗದ ವಸ್ತುವಾಗಲಿ ಮಕ್ಕಳ ಹಡೆವ ಯಂತ್ರವಾಗಲಿ ಅಲ್ಲ.ಅಷ್ಟೇ ಅಲ್ಲ ಅವಳು ಎಂದಿಗೂ ಗಂಡಿನ ಗುಲಾಮಳಲ್ಲ.ಅವಳು ಬದುಕಿನ ಹಾದಿ ಮನೆಯ ಬೆಳಕು ಮತ್ತೊಂದು ಜೀವಕ್ಕೆ ಜೀವ ಕೊಡೊ ಜೀವದಾತೆ.ಹೆತ್ತ ತಾಯಿಯ ನಂತರದ ಎರಡನೇ ತಾಯಿˌ ಗುರುˌ ಗೆಳತಿˌ ಪ್ರೇಮಮಯಿ ಸಕಲವೂ ಕೂಡ.
ಇಂದು ವಿದ್ಯಾವಂತರು ಹೆಚ್ಚು ಓದಿರೋರು ಹೆಣ್ಣು ಮಕ್ಕಳೆ.ಹಾಗೆ ಉನ್ನತ ಉದ್ಯೋಗದಲ್ಲಿರೋರು ಹೆಣ್ಣುಗಳೆ.ದೇಶದ ಯಾವುದೇ ನದಿಗಳ ಹೆಸರು ಕೇಳಿ ನೋಡಿ.ಅವುಗಳಿಗೆಲ್ಲಾ ಹೆಣ್ಣಿನ ಹೆಸರನ್ನೇ ಇಟ್ಟಿರೋದು.ಇಂದಿನ ಹಲವು ಮಾನವ ರೂಪದ ಮನುಷ್ಯರು ಹೆಣ್ಣನ್ನು ಬಹಳ ನಿಕೃಷ್ಟವಾಗಿ ನೋಡುತ್ತಿದ್ದಾರೆ. ಅದಕ್ಕೆ ತಕ್ಕ ಹಾಗೆ ಹಲವಾರು ರೋಗಗಳಿಂದ ನರಳುತ್ತಿದ್ದಾರೆ.ಹೆಣ್ಣಿಲ್ಲದ ಬದುಕು ಮರುಭೂಮಿಯಿದ್ದಂತೆ. ಹೆಣ್ಣನ್ನ ದೈವ ಸ್ವರೂಪಿಯಾಗಿ ಕಂಡು ದೇವರ ಗುಡಿಯಲ್ಲಿ ಕೂರಿಸಿ ದೇವಿ ˌತಾಯಿˌ ಮಾತೆ ಅಂತ ಪೂಜಿಸಿದ ಶ್ರೇಷ್ಟರೆಂದರೆ ಶ್ರೀರಾಮಕೃಷ್ಣ ಪರಮಹಂಸರು ಮಾತ್ರ.
ಅದಕ್ಕಾಗೆ ಅವರು ಅಂದಿನಿಂದ ಇಂದಿಗು ಮುಂದೆಂದೂ ಅತೀ ಶ್ರೇಷ್ಟದಂಪತಿಯಾಗಿದ್ರೂ ಸಂತರಾಗೆ ಉಳಿದು ದೈವ ಸಂಭೂತರಾದರು. ಗಂಡಸರೇ ಇಂದು ಯಾರು ಹೆಚ್ಚಲ್ಲ ಕಡಿಮೆ ಇಲ್ಲ.ಸರ್ವರೂ ಸಮಾನರೆ.ಮೊದಲು ನಿಮ್ಮ ಮನದಲ್ಲಿರುವ ಹೆಣ್ಣು ಅನ್ನೋ ಕೀಳಾದ ಕೊಳೆ ತೊಳೆದು ನೋಡಿ.
ಅಲ್ಲೇ ಹೆಣ್ಣು ದೇವತೆಯಾಗಿ ಕಾಣ್ತಳೆ ಅಲ್ವೇ? ನೋಡಿ ನೀವು ಹೆಣ್ಣನ್ನ ಕೀಳಾಗಿ ನೋಡುವವರು ಹೆಣ್ಣು ದೇವತೆಗಳಾದ ಪಾರ್ವತಿ ಸರಸ್ವತಿ ಆದಿಶಕ್ತಿ ಮಾರಿ ಚಾಮುಂಡಿ ಉಚ್ಚಮ್ಮ ಬೋರಮ್ಮ ಕಾಳಮ್ಮ ಚೌಡೇಶ್ಪರಿ ಹೀಗೆ ಹಲವಾರು ಹೆಸರಿನಿಂದ ಪೂಜಿಸಲ್ಪಡುವ ದೇವತೆಗಳನ್ಯಾಕೆ ಪೂಜಿಸುತ್ತೀರಿ ಹೇಳಿ?ಆದಿಶಕ್ತಿಗೆ ತ್ರಿಮೂರ್ತಿಗಳೆ ವಂದಿಸಿದ್ದಾರೆ ಅಂದಮೇಲೆ ಕೇವಲ ಮಾನವರಾದ ನಾವು ಹೆಣ್ಣನ್ನ ಪೂಜ್ಯ ಭಾವನೆ ಬೇಡ ಪ್ರೀತಿ ಸ್ನೇಹದಿಂದ ನೋಡಿಕೊಳ್ಳಲು ಏನು ರೋಗ ಹೇಳಿ? ಮೊದಲು ನಿಮ್ಮ ಒಳ ಮನಸ್ಸನ್ನ ಕೇಳಿ.
ನೀವು ಹೇಗಿದ್ದೀರಿ ಹೇಗೆ ನಡ್ಕೊತಾ ಇದ್ದೀರಿ.ಒಳಮನಸ್ಸೇನು? ಹೊರ ಮನಸ್ಸೇನು ಎಂಬುದನ್ನ.ಆಗ ನಿಮಗೆ ಸತ್ಯದ ಅರಿವಾಗುತ್ತದೆ.ಇಲ್ಲದಿರೆ ಜೀವನ ಬರಡಾಗಿ ಎಲ್ಲಾ ಇದ್ದೂ ಏನು ಇಲ್ಲದಂತಾಗುತ್ತದೆ.ಹೆಣ್ಣೇ ಪ್ರೀತಿ ಹೆಣ್ಣೇ ಜಗತ್ತು.ಹಾಗಾಗಿ ಹೆಣ್ಣನ್ನು ಯಾರೂ ಎಂದಿಗೂ ಕೀಳಾಗಿ ನೋಡಬೇಡಿ ಎಂದು ಹೇಳುತ್ತಾ ಅವರ ಸುದಿನದ ಸುಸಂದರ್ಭದಲ್ಲಿ ಅವರಿಗೆ ಮತ್ತೊಮ್ಮೆ ಶುಭ ಕೋರುತ್ತೇನೆ.ಮನ ಅರಳಲಿ ಮನದ ಮಲೀನ ಅಳಿಯಲಿ.ಎಲ್ಲರಿಗು ಶುಭವಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ನಿಂದ ವಿದ್ಯಾರ್ಥಿ ವೇತನ ವಿತರಣೆ
ಸುದ್ದಿದಿನ,ದಾವಣಗೆರೆ:ಗುರಿ ಸಾಧಿಸಲು ಕಾರಣಗಳು ನೆಪವಾಗಬಾರದು. ಗುರಿಯನ್ನು ಬೆನ್ನು ಹತ್ತಿ ಗುರಿಮುಟ್ಟುವ ಕಡೆ ಗಮನ ಹರಿಸಿದರೆ ಯಶಸ್ಸು ತಾನಾಗಿ ದೊರೆಯುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಜನತೆ ಮೊಬೈಲ್ ಬಳಸುವುದರಿಂದ ಆಗುವ ಅನಾನುಕೂಲಗಳು ಮತ್ತು ಹಿಂದಿನ ಯುವಜನತೆ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಮುಖಾಂತರ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಿದೆ. ಪೋಷಕರು ಮಕ್ಕಳ ನಡವಳಿಕೆ ಮೇಲೆ ನಿಗಾ ವಹಿಸುವ ಅವಶ್ಯಕತೆ ಇದೆ ಎಂದ ಅವರು, ಇತ್ತೀಚಿಗೆ ನಡೆಯುತ್ತಿರುವ ಸೈಬರ್ ಕ್ರೈಂಗಳ ಬಗ್ಗೆ ಯುವಜನತೆಗೆ ಸಭೆಯಲ್ಲಿ ಮನವರಿಕೆ ಮಾಡಿದರು.
ಈ ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾದ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಸಿಓಓ ಎಸ್. ಪಂಚಾಕ್ಷರಿ ಮಾತನಾಡಿ, ಬಿ.ಎಸ್.ಎಸ್ ಸಂಸ್ಥೆಯು ತನ್ನ ಸಿಎಸ್ಆರ್ ಇಂಟಿಗ್ರೇಟಡ್ ಅಡಿಯಲ್ಲಿ ಆರೋಗ್ಯ, ಶಿಕ್ಷಣ, ಹೈನುಗಾರಿಕೆಗಳಲ್ಲಿ ಸಮಾಜಸೇವಾ ಕಾರ್ಯ ಮಾಡುತ್ತಿದ್ದು, ಅಗತ್ಯ ಪೂರಕ ವಸ್ತುಗಳ ವಿತರಣೆ ಮತ್ತು ಸಹಾಯ ಹಸ್ತದ ನೆರವು ನೀಡಲಾಗುತ್ತಿದೆ. ಸಮಜಾಮುಖಿ ಕೆಲಸಗಳಲ್ಲಿ ಒಂದಾದ ವಿದ್ಯಾರ್ಥಿ ವೇತನ ವಿತರಣೆ ಮುಖೇನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವು ನೀಡಲಾಗುತ್ತಿದೆ ಎಂದರು.
ಮಹಿಳೆಯರು ಅವಶ್ಯಕತೆಗೆ ತಕ್ಕಷ್ಟು ಸಾಲವನ್ನು ಪಡೆದು ಮರುಪಾವತಿ ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಕೇವಲ ಸಾಲ ಸೌಲಭ್ಯವನ್ನು ಮಾತ್ರವಲ್ಲದೆ ಸಂಸ್ಥೆಯು ಎಲ್ಲಾ ಕಡೆಗೂ ಸಮಾಜಮುಖಿ ಕಾರ್ಯಗಳಾದ ಶಾಲಾ ಅಭಿವೃದ್ಧಿ ಕಾರ್ಯಕ್ರಮಗಳು, ಪ್ರವಾಹ ಪರಿಸ್ಥಿತಿಗಳು, ಬರಗಾಲ ಪರಿಸ್ಥಿತಿಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ, ಪೀಟೋಪಕರಣಗಳ ವ್ಯವಸ್ಥೆ, ಆಧುನಿಕ ಶಿಕ್ಷಣ ನೀಡಲು ಕಂಪ್ಯೂಟರ್ ಒದಗಿಸುವುದು ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಎಸ್ಎಸ್ ಸಂಸ್ಥೆಯ ಸಿಇಓ ಕುಮಾರ್, ಸಿಫ್ ಓ ಸುರತ್ ಬಚ್ಚು, ರಘು ಎನ್.ಸಿ., ಕೆ. ಸಿದ್ದು, ತಿಮ್ಮಾರಾಯಸ್ವಾಮಿ, ಎಸ್. ಗಿರೀಶ್, ಪಂಡಿತ್, ದೇವರಾಜ್ ಎಸ್., ಸತೀಶ ಡಿ.ಎಸ್., ಕಿರಣ್, ಪ್ರಶಾಂತ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ದಾವಣಗೆರೆ| ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ : ಜಾನಪದರನ್ನು ಅನಕ್ಷರಸ್ಥರೆನ್ನುವುದು ತಪ್ಪು : ಸಾಹಿತಿ ಕೃಷ್ಣಮೂರ್ತಿ ಹನೂರು
ಸುದ್ದಿದಿನ,ದಾವಣಗೆರೆ:ಜನಪದರು ನಿಜವಾದ ಇತಿಹಾಸವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ್ದಾರೆ.‘ಒಡಲ ಕಿಚ್ಚಿಗೆ ಈ ಕಿಚ್ಚು ಕಿರಿದು’ ಎಂಬುದಾಗಿ ಸತಿ ಸಹಗಮನ ಪದ್ಧತಿಯನ್ನೂ ಸಿರಿಯಜ್ಜಿ ವಿರೋಧಿಸಿದ್ದಳು ಹಾಗಾಗಿ ಜಾನಪದರನ್ನು ನಾವು ಅಕ್ಷರ ಬಾರದವರು ಅನಕ್ಷಸ್ಥರು ಎಂಬುದಾಗಿ ಹೇಳುವುದು ತಪ್ಪು ಎಂದು ಹಿರಿಯ ವಿದ್ವಾಂಸರಾದ ಕೃಷ್ಣಮೂರ್ತಿ ಹನೂರು ವಿಷಾದವ್ಯಕ್ತಪಡಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಯಜ್ಜಿ ಪ್ರತಿಷ್ಠಾನ, ಮಾನವ ಬಂಧುತ್ವ ವೇದಿಕೆ ಹಾಗೂ ಅಮಿತ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಾಂಶುಪಾಲ ಎಂ.ಮಂಜಣ್ಣ ಅವರ ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ ಮಾಡಿ ಅವರು ಮಾತನಾಡಿದರು.
ಸಿರಿಯಜ್ಜಿ ಭೇಟಿ ಮಾಡಿ ಸುಮಾರು 50ವರ್ಷ ಆಯಿತು.ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಜೊತೆಗೆ ಮೊದಲ ಬಾರಿಗೆ ಗುಡಿಸಲಿನ ಭೇಟಿ ಮಾಡಿದ್ದೆ. ಆಡಿನ ಹಾಲು ಕರೆದು ಜತೆಗೆ ಮುದ್ದೆ ಕೊಡುತ್ತಿದ್ದರು. ಅದು 76ರ ಈ ಇಳಿವಯಸ್ಸಿನಲ್ಲೂ ನನಗೆ ಶಕ್ತಿ ಕೊಟ್ಟಿದೆ. ಪಾಶ್ಚಾತ್ಯ ವಿದ್ವಾಂಸರು 1800 ಸಂದರ್ಭದಲ್ಲಿ ದೇಶದಲ್ಲಿ ಹುಡುಕಿ ಹೊತ್ತೊಯ್ಯುವ ಕೆಲಸ ಮಾಡಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ಅವರಿಗೆ ಅಭಿಮಾನ ಇತ್ತು. ಬುಡಕಟ್ಟು ಹಟ್ಟಿಯ ಸಿರಿಯಜ್ಜಿ ದೊಡ್ಡ ವಿದ್ವಾಂಸರು. ಅರೆ ಬರ ಕನ್ನಡ ಓದಿ ಎಲ್ಲವೂ ಗೊತ್ತದೆ ಎನ್ನುತ್ತೇವೆ. ಆದರೆ, ಸಿರಿಯಜ್ಜಿ ತನ್ನ ಬೌದ್ಧಿಕ ಶಕ್ತಿಯನ್ನು ಏನೂ ಅಲ್ಲ ಎಂದು ಹೇಳುತ್ತಿದ್ದರು. ‘ಹತ್ತ ಮಕ್ಕಳ ಹೆತ್ತು ಕತ್ತಿಗೆ ಬಲಿಕೊಟ್ಟೆ’ ಎಂಬ ಮಾತು ದೊಡ್ಡದು. ಇದರಲ್ಲಿ ದೊಡ್ಡ ಸಂದೇಶ ಇತ್ತು ಎಂದು ಸ್ಮರಿಸಿದರು.
ಅವಳ ಹಾಡುಗಾರಿಕೆಯ ಕ್ರಮ ವಿಸ್ಮಯ ಮೂಡಿಸುತ್ತಿತ್ತು. ನೋವಿನ ವಾಕ್ಯದಲ್ಲಿ ಇರುವ ಅರ್ಥ ಬಹಳ ದೊಡ್ಡದು. ಚರಿತ್ರೆಯನ್ನು ನಾಲ್ಕು ಪದಗಳಲ್ಲಿ ವಿಶ್ಲೇಷಣೆ ಮಾಡಿದಳು. . 100ಕ್ಕೂ ಹೆಚ್ಚು ತ್ರಿಪದಿಯಲ್ಲಿ ಸಿರಿಯಜ್ಜಿ ಹಾಡಿದ್ದಾಳೆ. ಸಮಾಜಿಕ, ಐತಿಹಾಸಿಕ, ಸಂತೋಷದ ಸಂಗತಿ, ಮಳೆರಾಯನ ಕುರಿತು ಹಾಡು ಹೇಳಿದ್ದಾಳೆ. ಮದುವೆ ಸಂಭ್ರದ ಸಾವಿರಾರು ತ್ರಿಪದಿ ಅವಳಲ್ಲಿದ್ದವು.ಶಿಷ್ಟ ಮತ್ತು ಜಾನಪದ ಸಾಹಿತ್ಯ ಈ ಎರಡರಲ್ಲೂ ಕೆಟ್ಟದ್ದು ಒಳ್ಳೆಯದು ಇದೆ. ಇದರ ಬಗೆಗೆ ಇನ್ನೂಹೆಚ್ಚಿನ ಅಧ್ಯಯನ ನಡೆಸಿ ಪ್ರಾಧ್ಯಾಪಕರು ಚರ್ಚಿಸಬೇಕಿದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.
ಅನಕ್ಷರಸ್ಥರಲ್ಲಿ ಕೂಡ ವಿದ್ವಾಂಸರು ಇದ್ದಾರೆ. ಸಿರಿಯಜ್ಜಿ ರೀತಿಯವರು ಅಸಂಖ್ಯಾತರಷ್ಟು ಇದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ಮಾನವನನ್ನೇ ನಾಶ ಮಾಡುತ್ತಿದೆ. ಜನಪದರ, ಗ್ರಾಮೀಣ ಪ್ರದೇಶದ ಒಳಿತನ್ನು ಸ್ವೀಕರಿಸುವ ಮನೋಭಾವ ಉಳಿಸಿಕೊಳ್ಳೋಣ’.ಎ.ಕೆ.ರಾಮಾನುಜನ್, ಎಸ್.ಎಲ್.ಭೈರಪ್ಪ, ಗುಂಡೂರಾವ್, ಎಚ್.ಕೆ.ರಂಗನಾಥ್ ಸೇರಿ ಅನೇಕರು ಸಿರಿಯಜ್ಜಿ ಹುಡುಕಿಕೊಂಡು ಬಂದಿದ್ದರು. ಪ್ರಾಧ್ಯಾಪಕರು ಇದನ್ನು ಗುರುತಿಸಿ ಹೇಳಬೇಕು. ಮಕ್ಕಳಿಗೆ ಪಾಠ ಮಾಡಿದರೆ ಪ್ರಾಧ್ಯಾಪಕರ ಕಾರ್ಯ ಮುಗಿಯುದಿಲ್ಲ ಎಂದು ಕಿವಿಮಾತು ಹೇಳಿದರು.
ಅನಕ್ಷರಸ್ಥರು ಎಂದು ಹೇಳುವುದು ನಮ್ಮ ಅಜ್ಞಾನ ತೋರಿಸುತ್ತದೆ. ವಿಶ್ವವಿದ್ಯಾಲಯದ್ದು ಸೀಮಿತ ಪಠ್ಯ, ಜಾನಪದದ್ದು ಅಲಿಖಿತ ಸಂವಿಧಾನ, ಅಪರಿಮಿತ ಪಠ್ಯ ಇದು ಕೂಡ ಮುಖ್ಯ.‘ಸಾವಿರದ ಸಿರಿ ಬೆಳಕು’ ಹಂಪಿ ವಿಶ್ವವಿದ್ಯಾಲಯ ಹೊರತಂದಿದೆ. ಅಪ್ರಕಟಿತ ಗೀತೆಗಳು ಇನ್ನೂ ಇವೆ. ಅಕ್ಷರಕ್ಕೆ ಅಳಿವಿಲ್ಲ. ದೇಶದ ಉತ್ತಮ ಸಂಗತಿ, ಪಳಯುಳಿಕೆ ಅಮೆರಿಕಾ, ಇಂಗ್ಲೆಂಡ್ ನಲ್ಲಿವೆ.ಎಚ್ಚರಿಕೆ, ಗಮನ ಹರಿಸಬೇಕು ಪ್ರಾಧ್ಯಾಪಕರು. ಮಕ್ಕಳ ಆಸ್ತಿ ಯಾವುದು ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ಹಂಪಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಸ್.ಎಂ.ಮುತ್ತಯ್ಯ ಅಭಿಪ್ರಾಯಪಟ್ಟರು.
ಮನುಷ್ಯರೆಂಬಂತೆ ಸಮಾಜ ಕಾಣದ ಸಮುದಾಯದ ಮಹಿಳೆ ಬಗ್ಗೆ ನಡೆಸಿದ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಚಿಕ್ಕ ಸಂಗತಿಗೂ ನಿರ್ಬಂಧ ಹೇರುವ ಸಮುದಾಯದಲ್ಲಿ ದೊಡ್ಡ ಕಲಾವಿದೆಯೊಬ್ಬರೂ ಹೊರಹೊಮ್ಮಿದ ರೀತಿ ವಿಸ್ಮಯ ಮೂಡಿಸುತ್ತದೆ.ಸಿರಿಯಜ್ಜಿ ಸೃಷ್ಟಿಸಿದ್ದು ಸಾಹಿತ್ಯ ಅಲ್ಲ. ಇದು ಸಮುದಾಯಕ್ಕೆ ಪರಂಪರಾಗತವಾಗಿ ಬಂದದ್ದು. ಇದು ಕಾಡುಗೊಲ್ಲ ಮಾತ್ರವಲ್ಲ ಪಶುಪಾಲನಾ ಸಮುದಾಯದ ಅಸ್ಮಿತೆ ಕೂಡ ಹೌದು. ಕಾಡಲ್ಲಿ ಕುರಿ, ಜಾನುವಾರು ಕಾಯುತ್ತ ಬದುಕುತ್ತಿದ್ದ ಸಮುದಾಯದ ಕಲೆಗಳಿಗೆ ಮಾನ್ಯತೆ ಸಿಕ್ಕಿರಲಿಲ್ಲ. ಸಾಹಿತ್ಯ ಪರಂಪರೆಯಲ್ಲಿ ಜಾನಪದಕ್ಕೆ ಮಾನ್ಯತೆ ಸಿಕ್ಕಿದ್ದು ಜಿ.ಶಂ.ಪರಮಶಿವಯ್ಯ ಹಾಗೂ ಹಾ.ಮಾ.ನಾಯಕ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಾನಪದ ಸಾಹಿತ್ಯ ಕೂಡ ಸಂಶೋಧನೆಗೆ ಯೋಗ್ಯ ಕ್ಷೇತ್ರ ಮತ್ತು ವಸ್ತು ಎಂಬುದನ್ನು ಒಪ್ಪಿಸಲು ಸಾಕಷ್ಟು ಶ್ರಮಿಸಬೇಕಾಯಿತು ಎಂದು ಮೆಲುಕುಹಾಕಿದರು.
ಜಾನಪದ ಅಧ್ಯಯನ ವಿಸ್ತರಣೆ ಕಂಡ, ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆದುಕೊಂಡ ಮೂರನೇ ಘಟ್ಟವಾಗಿ ಈ ಕೃತಿ ನೋಡಬೇಕು. ಶೈಕ್ಷಣಿಕ ಅಧ್ಯಯನದ ವಸ್ತವಾಗಿ ಸಿರಿಯಜ್ಜಿ ಪರಿಣಿಸಿ ಸಂಶೋಧನೆಗೆ ಒಳಪಡಿಸಿದ್ದಕ್ಕೆ ಹೆಮ್ಮೆ ಪಡಬೇಕು. ಜಾನಪದ ಅಧ್ಯಯನದ ಇತಿಹಾಸದಲ್ಲಿ ಹೊಸದೊಂದು ಪರ್ವ ಶುರು ಆಗಿದೆ.ಕಾಡು ಗೊಲ್ಲರಂತಹ ನಿರ್ಬಂಧಿತ ಸಮುದಾಯದ ಮಹಿಳೆಯೊಬ್ಬರು ಇಷ್ಟು ಎತ್ತರಕ್ಕೆ ಬೆಳೆಯುವ ಅವಕಾಶ ಸಿಕ್ಕಿದ್ದು ವಿಸ್ಮಯ. ಅವರ ಒಳಗಿನ ಆಸಕ್ತಿ, ಪ್ರಯತ್ನ ಹಾಗೂ ಕುಟುಂಬದ ಬೆಂಬಲದ ಕಾರಣಕ್ಕೆ ಅವಳಿಗೆ ಇದು ಸಾಧ್ಯ ಆಯಿತು. ಕಾಡಗೊಲ್ಲರ, ಸಾಂಸ್ಕೃತಿಕ ವೀರರ ಆರಾಧ್ಯ ದೈವ, ಬೇರೆ ಸಮುದಾಯದ ದೈವಗಳ ಬಗ್ಗೆ ಸಿರಿಯಜ್ಜಿ ಹಾಡಿದ್ದಾರೆ. ಹಾಡುವ ಸಾಹಿತ್ಯದಲ್ಲಿ ಭೇದ ಮಾಡಿಲ್ಲ. ಸಾಹಿತ್ಯದ ಪದ-ಪದದ ವಿವರಗಳನ್ನು ಅವಳು ನೀಡುತ್ತಿದ್ದಳು. ಕಾವ್ಯ ಅವಳ ಬದುಕಿನ ಭಾಗ ಆಗಿತ್ತು. ಹೀಗಾಗಿ ಅವಳು ನಿರರ್ಗಳವಾಗಿ ಹಾಡುತ್ತದ್ದಳು. ಆದರೆ, ಒಬ್ಬ ವ್ಯಕ್ತಿ ಇಷ್ಟು ಪದಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ್ ಕಲಮರಹಳ್ಳಿ, ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ, ಕಲಾವಿದೆ ಸಿರಿಯಮ್ಮ, ಜಿ.ಕೆ.ಪ್ರೇಮಾ, ಅಮಿತ ಪ್ರಕಾಶನದ ಶಾರದಮ್ಮ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ
ಸುದ್ದಿದಿನಡೆಸ್ಕ್:ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ, ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243