Connect with us

ದಿನದ ಸುದ್ದಿ

ಹೆಣ್ಣಿಲ್ಲದೆ ಜಗ ಬದುಕುವುದುಂಟೆ..?

Published

on

  • ವಿನಯಕುಮಾರ್ ಎಚ್ ಸಿ, ಕನ್ನಡ ಉಪನ್ಯಾಸಕ,ಎಸ್ ಪಿ ಎಸ್ ಎಸ್ ಸೈನ್ಸ್ ಪಿಯು ಕಾಲೇಜು,ದಾವಣಗೆರೆ

ತ್ಮೀಯರೆ ನಮಸ್ತೆ. ಹಾಗೆ ಅಂತರಾಷ್ರ್ಟೀಯ ಮಹಿಳಾದಿನದ ಶುಭಕಾಮನೆ. ಗೌರವಾನ್ವಿತರೆ ನಾವು ನೀವೆಲ್ಲಾ ಈ ಭೂಮಿ ಇರೋದಕ್ಕೆ ಜೀವಂತವಾಗಿ ಖುಷಿಯಾಗಿ ಆನಂದವಾಗಿ ಬಾಳ್ವೆ ಮಾಡ್ತಿರೋದು. ಭೂಮಿ ಇಲ್ಲದೆ ಜೀವಸಂಕುಲಗಳ ಇರುವಿಕೆಯ ಊಹಿಸಲು ಸಾಧ್ಯವೆ ಯೋಚಿಸಿ.ಅದರ ಉದರದಲ್ಲೇ ಜಗದ ಎಲ್ಲಾ ದೇವರು ಅವರ ವಾಸಸ್ಥಾನ ಇರೋದು.ಅದಲ್ಲದೆ ಮತ್ತೆಲ್ಲೂ ಇಲ್ಲ.

ಎಲ್ಲಾ ಧರ್ಮದ ದೇವರುಗಳು ನೆಲೆಯಾಗಿರೋದು ಈ ಭೂಮಿ ಮೇಲೆ ಅಲ್ವೇ?ಆದರೆ ಅಜ್ಞಾನದ ಅಂಧತ್ವ ಮನುಜರಲ್ಲಿ ತುಂಬಿ ತುಳುಕುತ್ತಿರುವುದರಿಂದ ಶೀತಲ ಸಮರ ಶುರುವಾಗಿ ಇಂದು ಬೀದಿಗೆ ಬಂದು ಬಿದ್ದಿದೆ.ವಿವೇಕಿಗಳು ಪ್ರಜ್ಞಾವಂತರು ಯೋಗಿಗಳು ಮೌನವಾಗಿಯೇ ಭೂಮಿಯನ್ನು ಪೂಜ್ಯ ಭಾವನೆಯಿಂದ ನೋಡುತ್ತಿದ್ದಾರೆ.ಅವರು ಅಂದಿನಿಂದ ಇಂದಿನವರೆಗು ಶ್ರೇಷ್ಟರೆನಿಸಿಕೊಂಡೇ ಇದ್ದಾರೆ.

ಇಷ್ಟೆಲ್ಲಾ ಪೀಠಿಕೆ ಏಕೆ ಅಂದ್ರೆ 8/3/22 “ಅಂತರಾಷ್ರ್ಟೀಯ ಮಹಿಳಾದಿನ” ಆದ ಕಾರಣ ಮನುಷ್ಯನಿಗೆ ಅಷ್ಟೇ ಅಲ್ಲದೆ ಜಗದ ಜೀವಗಳಿಗೆ ಭೂಮಿಯೇ ಆಧಾರ.ಈ ಭೂಮಿಯನ್ನು ನಮ್ಮ ಪೂರ್ವಜರು ಅದರಲ್ಲೂ ಬುದ್ಧಿವಂತರು ಮನುಷ್ಯತ್ವ ಉಳ್ಳವರು ಮಾತ್ರ ಹೆಣ್ಣು ದೇವತೆ ಅಂತ ನೋಡ್ತಿದ್ದಾರೆ.ಆದರೆ ಹಲವು ಅವಿವೇಕಿಗಳು ಅದ್ಯಾರೊ ಮನು ಎಂಬುವವನು ಬರೆದ ಬರಹವೇ ಅತೀ ಶ್ರೇಷ್ಟ ಎಂಬಂತೆ ಅದರಂತೆ ಅವಿವೇಕಿಗಳಾಗಿ ಜೀವಿಸುತ್ತಿದ್ದಾರೆ.ಹೆಣ್ಣನ್ನ ತುಂಬಾ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ.

ಆ ರೀತಿ ನಡೆಸಿಕೊಳ್ಳುವವರ ಬದುಕು ಅಕ್ಷರ ಸಹ ಪಾತಾಳ ಹಿಡಿದಿದೆ.ಇದರೆ ಅದನ್ನ ಹೊರಗೆ ಹೇಳುತ್ತಿಲ್ಲ.ಯಾಕೆಂದರೆ ಗಂಡೆಂಬ ದರ್ಪ.ಈ ಮೂರ್ಖ ಮಂದಿಗಳು ಈಶ್ವರನನ್ನ ಬಹಳ ಭಕ್ತಿಯಿಂದ ಪೂಜಿಸುತ್ತಾರೆ ಅನ್ನೋಣ. ಆದರೆ ಆತ ಅರ್ಧನಾರೀಶ್ವರ ಆಗಿರೋದು ತಿಳಿಯದಷ್ಟು ಅಧಮರಾಗಿದ್ದಾರೆ ಅಲ್ಲವೆ? ಹೆಣ್ಣೆಂದರೆ ಏನು ಅವಳ ಶಕ್ತಿ ಏನು ಯೋಗ್ಯತೆ ಏನು ಹೇಗೆ ಗೌರವಿಸಬೇಕು ಎಂಬುದನ್ನು ಇಡೀ ಜಗತ್ತನ್ನೇ ಕಾಯುತ್ತಿರುವ ಈಶ್ವರನನ್ನು ನೋಡಿದರೆ ತಿಳಿಯುತ್ತೆ.ಇವರು ಕೇವಲ ತೋರಿಕೆಯ ಜನ.

ನಿಜವಾದ ಭಕ್ತರಂತೆ ನಟಿಸುತ್ತಿದ್ದಾರೆ.ಅಂಥವರೆ ಮನೆಯಲ್ಲಿ ಹೆಣ್ಣನ್ನ ಬಹಳ ಶೋಷಣೆ ಮಾಡ್ತಿರೋದು.ಆ ಅಜ್ಞಾನಿಗಳಿಗೆ ಮದುವೆ ಆಗುವಾಗ ಮಾತ್ರ ಹೆಣ್ಣೇ ಬೇಕು.ಆದರೆ ಅವರಿಗೆ ಹುಟ್ಟುವ ಮಗು ಮಾತ್ರ ಗಂಡೇ ಆಗಿರ್ಬೇಕು.ಇವರ ಅಮ್ಮನು ಗಂಡೇ ಆಗಿದ್ರೆ ಇವನು ಎಲ್ಲಿ ಬರ್ತಿದ್ದ? ಪೈಶಾಚಿಕ ಮನಸ್ಸುಳ್ಳವರಿಗೆ ಹೆಣ್ಣಿನ ಮಹಿಮೆ ಒಂದೇ ಒಂದು ಭಾಗವು ತಿಳಿದಿಲ್ಲ.ಇಡೀ ಜಗತ್ತು ಇಂದು ಜೀವಂತವಾಗಿರಲು ಒಂದು ಹೆಣ್ಣೇ ಹೊರತು ಗಂಡಲ್ಲ.ಈ ಭೂಮಿ ಜಗತ್ತಿನ ಸಕಲ ಜೀವ ರಾಶಿಗಳಿಗೆ ಹೆಣ್ಣಾಗಿ ಪ್ರೀತಿಯಿಂದ ಆಶ್ರಯ ಕೊಟ್ಟು ಸಲಹುತ್ತಿರೋದು.

ಇಷ್ಟೆಲ್ಲಾ ಹಾರಾಡುತ್ತಿರುವ ಗಂಡು ಎರಡೇ ಎರಡು ದಿನ ಮನೆ ಮಕ್ಕಳ ನೋಡ್ಕೊಂಡು ನಿಭಾಯಿಸಲಿ ಗೊತ್ತಾಗುತ್ತೆ.ಹೆಣ್ಣಿನ ಮಹತ್ವ ಏನು ಹೆಣ್ಣಿಲ್ಲದ ಮನೆ ಹೇಗಿರುತ್ತೆ ಎನ್ನುವುದು ತಿಳಿಯುತ್ತೆ.ಒಂದು ಸಣ್ಣ ಉದಾಹರಣೆ ಎಂದರೆ ಒಂದು ಕುಟುಂಬ.ಅದರಲ್ಲಿ ಆ ದಂಪತಿಗಳಿಗೆ ಮೂರು ಅಥವಾ ಐದು ಗಂಡು ಒಂದೇ ಒಂದು ಹೆಣ್ಣುಮಗಳು.ಅವಳ ಮದುವೆ ಮಾಡಿ ಗಂಡನ ಮನೆಗೆ ಕಳಿಸಿರ್ತಾರೆ. ಗಂಡು ಮಕ್ಕಳೆಲ್ಲರೂ.ಯಾವುದೊ ಒಂದು ಸಣ್ಣ ಮಾತಿಗೆ ಈ ನಾಲ್ವರು ಅಣ್ಣ ತಮ್ಮರು ಮಾತು ಬಿಟ್ಟಿರ್ತರೆ.

ಹೀಗಿರುವಾಗ ಒಮ್ಮೆ ಈ ಅವರ ತಾಯಿಗೆ ಖಾಯಿಲೆ ಬಂದಿರುತ್ತೆ .ಆಗ ಮಕ್ಕಳು ಅವರ ತಾಯಿಗೆ ಆಸ್ಪತ್ರೆಗೆ ಕರೆದ್ಹೋಗಿ ಬರ್ತರೆ.ವೈದ್ಯರು ಹೇಳಿದಂತೆ ಹೊತ್ತು ಹೊತ್ತಿಗೆ ಗಂಜಿ ಹಾಲು ಅನ್ನ ತಿಳಿಸಾರು ಕೊಡ್ಬೇಕು ಅಂತ ತಿಳಿಸಿರ್ತಾರೆ.ಆಸ್ಪತ್ರೆಯಿಂದ ಮನೆಗೆ ಬರ್ತಾರೆ.ಅನ್ನ ಮಾಡಿ ತಿಳಿ ಸಾಂಬಾರ್ ಮಾಡ್ಬೇಕು ಅನ್ನುವಾಗ ಇವರಿಗೆ ಅಡುಗೆ ಕೆಲಸವೇ ಗೊತ್ತಿಲ್ಲ.ಮತ್ತೆ ತಂದೆ ವಯಸ್ಸಾದವರು. ಮನೆಯಲ್ಲಿ ಬೇರೆ ಹೆಣ್ಣಿಲ್ಲ.ಜೊತೆಗೆ ಹಿರಿಯವಳೆ ಹೆಣ್ಣು ಮಗಳು.ಎಲ್ಲರೂ ವಿದ್ಯಾವಂತರೆ.ಇನ್ನೂ ಮದುವೆ ಆಗಿರ್ಲಿಲ್ಲ.ಆದರೆ ಅಡುಗೆ ವಿದ್ಯೆ ಕಲಿತ್ತಿಲ್ಲ.ಅವರ ತಾಯಿಯೇ ಅಡುಗೆ ಮಾಡಿ ಬಡಿಸುತ್ತಿದ್ದದ್ದು.

ಅಡುಗೆ ಹೇಗ್ಮಾಡ್ತರೆ ಹೇಳಿ?ಅಕ್ಕ ನಿಗೆ ಕರೆಯಲು ಮಾತು ಬಿಟ್ಟಿದ್ದಾರೆ.ಹೇಗೆ ಕರಿತಾರೆ ಹೇಳಿ?ಅಕ್ಕ ಪಕ್ಕದವರು ಎಷ್ಟು ದಿನ ಇವರಿಗೆ ಸಹಾಯ ಮಾಡ್ತರೆ?ಅವರು ಹೇಳಿದ್ರು “ಮೊಗ ನಮಗು ನೂರಾರು ಕೆಲ್ಸ ಇವೆ ನಿಮ್ಮ ಅಕ್ಕನ ಕರಿಸ್ಕಳ್ಳಿ”ಅಂತೇಳಿ ಬರದಾದರು.ಇವರಿಗೆ ಮದುವೆ ಆಗಿ ಆಗಿ ಅಂತೇಳಿ ಅವರ ತಾಯಿ ಸಾಕಾಗಿದ್ದಳು.ಅವರೆಲ್ಲ ಹೆಣ್ಣಿನ ವಿರೋಧಿಯಾಗಿದ್ದರು.

ಯಾರೂ ಅನ್ನ ಮಾಡಲು ಬಾರದಿದ್ದಾಗ ಪಾಪ ಇವರ ತಾಯಾಯೆ ತೂರಾಡಿಕೊಂಡು ಅಡುಗೆ ಮಾಡಲು ಹೋಗುವಾಗ ಮಕ್ಕಳಿಗೆ ಹೇಳಿದಳು.”ಹೇ ಮಕ್ಳ ನಿಮಗೆ ಕಾಯಿಲೆ ಕಸಾಲೆ ಬಂದಾಗ ನಾನು ಓಡಾಡಿ ನಿಮಗಾಗಿ ನಿಮ್ಮನ್ನು ನನ್ನ ಕಂಕಳಲ್ಲಿ ಎತ್ಕೊಂಡು ಆಸ್ಪತ್ರೆಗೆ ಓಡಾಡಿ ಟೈಂ ಟೈಂಗೆ ಸರಿಯಾಗಿ ಊಟ ತಿಂಡಿ ಮಾಡಿ ಜೋಪಾನ ಮಾಡಿದೆ.ಯಾವುದೊ ಸಣ್ಣ ಮಾತಿಗೆ ನನ್ನ ಮಗಳ ಮನೆಗೆ ಬರುಕ್ಕಿಲ್ಲದಂಗೆ ಮಾಡಿದ್ರಿ.

ಈಗ ನನಗೆ ಒಂದು ತುತ್ತು ಅನ್ನ ಬೇಯಿಸಿಕೊಡೋಕೆ ಆಗದೆ ನಿಂತಿದ್ದೀರಲ್ಲ.ನಿಮ್ಮಂತವರು ನೂರು ಜನ ಇದ್ರು ಏನ್ಬಂತ್ರೋ ಭಾಗ್ಯ?ಹೆಣ್ಣನ್ನ ಆಗಿನಿಂದಲೂ ಕೀಳಾಗೆ ನೋಡ್ತಾ ಬಂದ್ರಿ.ಈಗ ನಿಮಗೆ ಯಾರೂ ಹೆಣ್ಣು ಕೊಡ್ತಿಲ್ಲ.ಈಗ ನನಗೆ ಮಕ್ಳಿದ್ದೂ ಇಲ್ಲದಂತಾಗಿದೆ.ಮೊದಲು ಹೆಣ್ಣು ಅಂದ್ರೆ ಏನು ಅಂತ ಮೊದಲು ತಿಳಿರಿ.ನಿಮ್ಮ ಓದಿಗೆ ಬೆಂಕಿ ಹಾಕ್ತು.ಅದ ತಿಪ್ಪೆಗೆ ಬಿಸಾಕಿ.ಹೆತ್ತೋರಿಗೆ ಅನ್ನ ಕೊಡದ ನೀವು ಯಾವ ಹೆಣ್ಣನ್ನ ಪ್ರೀತಿಯಿಂದ ನೋಡ್ಕೊತಿರಿ?ಏನೇ ಆಗಲಿ ಒಂದು ಮನೆಗೆ ಗಂಡಿನ ಸುಳಿ ಇಲ್ಲದೇ ಇದ್ರು ಪರ್ವಾಗಿಲ್ಲ ಹೆಣ್ಣಿರ್ಬೇಕು.

ಅವಳಿಗೆ ಮಾತ್ರ ಗೊತ್ತು ಹೆಣ್ಣಿನ ನೋವು.ನನ್ನ ಕಣ್ಮುಂದೆ ನೀವ್ಯಾರು ಇರ್ಬೇಡಿ ಹೋಗಿ ಎಂದು ಸ್ವಲ್ಪ ಸಿಟ್ಟಾದಳು.ನಂತರ ಓಡೋಗಿ ತಮ್ಮ ಅಕ್ಕನ ಕಾಲ್ಹಿಡಿದು ಕ್ಷಮೆ ಕೇಳಿ ತೌರಿಗೆ ಕರೆ ತಂದು ತಾಯಿಯ ಸೇವೆ ಮಾಡಿಸಿ ಪ್ರೀತಿಯಿಂದ ಬೀಳ್ಕೊಟ್ಟರು.ನೋಡಿ ಹೆಣ್ಣಿಲ್ಲದ ಮನೆ ಅಂದ್ರೆ ದೇವರಿಲ್ಲದ ಗುಡಿಯೆ ಸರಿ.ಆಕೆ ಕೇವಲ ಭೋಗದ ವಸ್ತುವಾಗಲಿ ಮಕ್ಕಳ ಹಡೆವ ಯಂತ್ರವಾಗಲಿ ಅಲ್ಲ.ಅಷ್ಟೇ ಅಲ್ಲ ಅವಳು ಎಂದಿಗೂ ಗಂಡಿನ ಗುಲಾಮಳಲ್ಲ.ಅವಳು ಬದುಕಿನ ಹಾದಿ ಮನೆಯ ಬೆಳಕು ಮತ್ತೊಂದು ಜೀವಕ್ಕೆ ಜೀವ ಕೊಡೊ ಜೀವದಾತೆ.ಹೆತ್ತ ತಾಯಿಯ ನಂತರದ ಎರಡನೇ ತಾಯಿˌ ಗುರುˌ ಗೆಳತಿˌ ಪ್ರೇಮಮಯಿ ಸಕಲವೂ ಕೂಡ.

ಇಂದು ವಿದ್ಯಾವಂತರು ಹೆಚ್ಚು ಓದಿರೋರು ಹೆಣ್ಣು ಮಕ್ಕಳೆ.ಹಾಗೆ ಉನ್ನತ ಉದ್ಯೋಗದಲ್ಲಿರೋರು ಹೆಣ್ಣುಗಳೆ.ದೇಶದ ಯಾವುದೇ ನದಿಗಳ ಹೆಸರು ಕೇಳಿ ನೋಡಿ.ಅವುಗಳಿಗೆಲ್ಲಾ ಹೆಣ್ಣಿನ ಹೆಸರನ್ನೇ ಇಟ್ಟಿರೋದು.ಇಂದಿನ ಹಲವು ಮಾನವ ರೂಪದ ಮನುಷ್ಯರು ಹೆಣ್ಣನ್ನು ಬಹಳ ನಿಕೃಷ್ಟವಾಗಿ ನೋಡುತ್ತಿದ್ದಾರೆ. ಅದಕ್ಕೆ ತಕ್ಕ ಹಾಗೆ ಹಲವಾರು ರೋಗಗಳಿಂದ ನರಳುತ್ತಿದ್ದಾರೆ.ಹೆಣ್ಣಿಲ್ಲದ ಬದುಕು ಮರುಭೂಮಿಯಿದ್ದಂತೆ. ಹೆಣ್ಣನ್ನ ದೈವ ಸ್ವರೂಪಿಯಾಗಿ ಕಂಡು ದೇವರ ಗುಡಿಯಲ್ಲಿ ಕೂರಿಸಿ ದೇವಿ ˌತಾಯಿˌ ಮಾತೆ ಅಂತ ಪೂಜಿಸಿದ ಶ್ರೇಷ್ಟರೆಂದರೆ ಶ್ರೀರಾಮಕೃಷ್ಣ ಪರಮಹಂಸರು ಮಾತ್ರ.

ಅದಕ್ಕಾಗೆ ಅವರು ಅಂದಿನಿಂದ ಇಂದಿಗು ಮುಂದೆಂದೂ ಅತೀ ಶ್ರೇಷ್ಟದಂಪತಿಯಾಗಿದ್ರೂ ಸಂತರಾಗೆ ಉಳಿದು ದೈವ ಸಂಭೂತರಾದರು. ಗಂಡಸರೇ ಇಂದು ಯಾರು ಹೆಚ್ಚಲ್ಲ ಕಡಿಮೆ ಇಲ್ಲ.ಸರ್ವರೂ ಸಮಾನರೆ.ಮೊದಲು ನಿಮ್ಮ ಮನದಲ್ಲಿರುವ ಹೆಣ್ಣು ಅನ್ನೋ ಕೀಳಾದ ಕೊಳೆ ತೊಳೆದು ನೋಡಿ.

ಅಲ್ಲೇ ಹೆಣ್ಣು ದೇವತೆಯಾಗಿ ಕಾಣ್ತಳೆ ಅಲ್ವೇ? ನೋಡಿ ನೀವು ಹೆಣ್ಣನ್ನ ಕೀಳಾಗಿ ನೋಡುವವರು ಹೆಣ್ಣು ದೇವತೆಗಳಾದ ಪಾರ್ವತಿ ಸರಸ್ವತಿ ಆದಿಶಕ್ತಿ ಮಾರಿ ಚಾಮುಂಡಿ ಉಚ್ಚಮ್ಮ ಬೋರಮ್ಮ ಕಾಳಮ್ಮ ಚೌಡೇಶ್ಪರಿ ಹೀಗೆ ಹಲವಾರು ಹೆಸರಿನಿಂದ ಪೂಜಿಸಲ್ಪಡುವ ದೇವತೆಗಳನ್ಯಾಕೆ ಪೂಜಿಸುತ್ತೀರಿ ಹೇಳಿ?ಆದಿಶಕ್ತಿಗೆ ತ್ರಿಮೂರ್ತಿಗಳೆ ವಂದಿಸಿದ್ದಾರೆ ಅಂದಮೇಲೆ ಕೇವಲ ಮಾನವರಾದ ನಾವು ಹೆಣ್ಣನ್ನ ಪೂಜ್ಯ ಭಾವನೆ ಬೇಡ ಪ್ರೀತಿ ಸ್ನೇಹದಿಂದ ನೋಡಿಕೊಳ್ಳಲು ಏನು ರೋಗ ಹೇಳಿ? ಮೊದಲು ನಿಮ್ಮ ಒಳ ಮನಸ್ಸನ್ನ ಕೇಳಿ.

ನೀವು ಹೇಗಿದ್ದೀರಿ ಹೇಗೆ ನಡ್ಕೊತಾ ಇದ್ದೀರಿ.ಒಳಮನಸ್ಸೇನು? ಹೊರ ಮನಸ್ಸೇನು ಎಂಬುದನ್ನ.ಆಗ ನಿಮಗೆ ಸತ್ಯದ ಅರಿವಾಗುತ್ತದೆ.ಇಲ್ಲದಿರೆ ಜೀವನ ಬರಡಾಗಿ ಎಲ್ಲಾ ಇದ್ದೂ ಏನು ಇಲ್ಲದಂತಾಗುತ್ತದೆ.ಹೆಣ್ಣೇ ಪ್ರೀತಿ ಹೆಣ್ಣೇ ಜಗತ್ತು.ಹಾಗಾಗಿ ಹೆಣ್ಣನ್ನು ಯಾರೂ ಎಂದಿಗೂ ಕೀಳಾಗಿ ನೋಡಬೇಡಿ ಎಂದು ಹೇಳುತ್ತಾ ಅವರ ಸುದಿನದ ಸುಸಂದರ್ಭದಲ್ಲಿ ಅವರಿಗೆ ಮತ್ತೊಮ್ಮೆ ಶುಭ ಕೋರುತ್ತೇನೆ.ಮನ ಅರಳಲಿ ಮನದ ಮಲೀನ ಅಳಿಯಲಿ.ಎಲ್ಲರಿಗು ಶುಭವಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

EV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ

Published

on

ಕರ್ನಾಟಕ – ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ

ಸುದ್ದಿದಿನ,ಬೆಂಗಳೂರು: ರಾಜ್ಯವು ಇವಿ ನೋಂದಣಿಯಲ್ಲಿ ದೇಶದಲ್ಲೇ ಪ್ರಮುಖ ಸ್ಥಾನ ಪಡೆದಿದ್ದು, ಶುದ್ಧ ಚಲನೆಗೆ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಶ್ವ ಇವಿ ದಿನದ ಸಂದರ್ಭದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.

http://Visit : www.suddidina.com

ಕರ್ನಾಟಕವು ಒಟ್ಟು ಇವಿ ನೋಂದಣಿಯಲ್ಲಿ 3ನೇ ಸ್ಥಾನ ಪಡೆದಿದ್ದು, e-2W (ಎಲೆಕ್ಟ್ರಿಕ್ ಎರಡು ಚಕ್ರ ವಾಹನ) ಮತ್ತು e-4W (ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ) ನೋಂದಣಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದು ರಾಜ್ಯದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಸ್ವೀಕರಿಸುವ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2027 ಹಣಕಾಸು ವರ್ಷದಲ್ಲಿ EV ಪ್ರವೇಶ ಪ್ರಮಾಣ 14.67% ಆಗಿದ್ದು, ಇದು ದೇಶದ ಮಟ್ಟದಲ್ಲಿ ಗಮನಾರ್ಹ ಸಾಧನೆಯಾಗಿದೆ.

ರಾಜ್ಯದ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಬೆಸ್ಕಾಂ ನೊಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಸೌಲಭ್ಯ, ಹಾಗೂ ಶುದ್ಧ ಚಲನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಬೆಸ್ಕಾಂ ಪ್ರಮುಖ ಪಾತ್ರವಹಿಸಿದೆ.

ಕರ್ನಾಟಕ ಸರ್ಕಾರವು ಶುದ್ಧ ಚಲನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಿ ಖರೀದಿಗೆ ಪ್ರೋತ್ಸಾಹಕ ಯೋಜನೆಗಳು, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ, ಹಾಗೂ ಹಸಿರು ತಂತ್ರಜ್ಞಾನವನ್ನು ಉತ್ತೇಜಿಸುವ ಕ್ರಮಗಳು ಇವಿ ಕ್ರಾಂತಿಗೆ ಬಲ ನೀಡಿವೆ.

ಇವಿ ಬಳಕೆಯ ಹೆಚ್ಚಳದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದು, ಇಂಧನ ಅವಲಂಬನೆ ಕಡಿಮೆಯಾಗುವುದು ಹಾಗೂ ಶುದ್ಧ ಶಕ್ತಿಯ ಬಳಕೆ ಹೆಚ್ಚಾಗುವುದು. ಇದು ಕರ್ನಾಟಕವನ್ನು ಹಸಿರು ರಾಜ್ಯವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.

ವಿಶ್ವ ಇವಿ ದಿನದ ಅಂಗವಾಗಿ, ಕರ್ನಾಟಕವು ತನ್ನ ಸಾಧನೆಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಶುದ್ಧ ಚಲನೆಗೆ ಇನ್ನಷ್ಟು ಬಲ ನೀಡಲು ಬದ್ಧವಾಗಿದೆ. ಇವಿ ಕ್ರಾಂತಿಯ ಮೂಲಕ ಕರ್ನಾಟಕವು ಭಾರತದ ಭವಿಷ್ಯವನ್ನು ಹಸಿರು ಮತ್ತು ಶಾಶ್ವತ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.

Continue Reading

ದಿನದ ಸುದ್ದಿ

ಬೆಂಗಳೂರು ಸೆಪ್ಟೆಂಬರ್‌ನಲ್ಲಿ 31.9 ಡಿ.ಸೆ. ದಾಖಲೆ – ಹವಾಮಾನ ಇಲಾಖೆ ಎಚ್ಚರಿಕೆ

Published

on

75 ವರ್ಷಗಳ ಬಳಿಕ ಸೆಪ್ಟೆಂಬರ್‌ನಲ್ಲಿ ಗರಿಷ್ಠ ಉಷ್ಣಾಂಶ – ಮಳೆ ನಿರೀಕ್ಷೆ ಮುಂದಿನ ದಿನಗಳಲ್ಲಿ

ಸುದ್ದಿದಿನ,ಬೆಂಗಳೂರು: ಪ್ರತಿ ವರ್ಷ ಮಳೆಗಾಲದ ಅಂತ್ಯದಲ್ಲಿ ನೈಋತ್ಯ ಮಾನ್ಸೂನ್ ಶೀತವಾಗಿರುತ್ತದೆ. ಆದರೆ ಈ ಬಾರಿ, 75 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. 2026ರ ಸೆಪ್ಟೆಂಬರ್ 8ರಂದು ನಗರದಲ್ಲಿ 31.9 ಡಿ.ಸೆ. ತಾಪಮಾನ ದಾಖಲಾಗಿದ್ದು, ಇದು ಕಳೆದ ಹಲವು ದಶಕಗಳ ಬಳಿಕ ಕಂಡುಬಂದ ಅತಿ ಹೆಚ್ಚು ಮಟ್ಟವಾಗಿದೆ.

http://Visit : www.suddidina.com

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿರುವ ಮಾಹಿತಿಯ ಪ್ರಕಾರ, 1951ರಿಂದ ಇಂದಿನವರೆಗಿನ ದಾಖಲೆಗಳಲ್ಲಿ 33.3 ಡಿ.ಸೆ. ಗರಿಷ್ಠ ತಾಪಮಾನವು ದಾಖಲಾಗಿತ್ತು. ಈ ಬಾರಿ 31.9 ಡಿ.ಸೆ. ತಾಪಮಾನವು ಆ ದಾಖಲೆಗಳಿಗೆ ಸಮೀಪವಾಗಿದೆ. ಇದೇ ದಿನ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 33.4 ಡಿ.ಸೆ. ತಾಪಮಾನ ದಾಖಲಾಗಿದ್ದು, ಇದು ನಗರದ ಉಷ್ಣಾಂಶ ಏರಿಕೆಯನ್ನು ಸ್ಪಷ್ಟಪಡಿಸುತ್ತದೆ.

ಹಿಂದಿನ ವರ್ಷಗಳ ದಾಖಲೆಗಳನ್ನು ನೋಡಿದರೆ, 2025ರಲ್ಲಿ 29.9 ಡಿ.ಸೆ., 2024ರಲ್ಲಿ 31.6 ಡಿ.ಸೆ., 2023ರಲ್ಲಿ 30.8 ಡಿ.ಸೆ., 2022ರಲ್ಲಿ 31 ಡಿ.ಸೆ., 2021ರಲ್ಲಿ 31.3 ಡಿ.ಸೆ., 2020ರಲ್ಲಿ 30.6 ಡಿ.ಸೆ., 2019ರಲ್ಲಿ 30.8 ಡಿ.ಸೆ., 2018ರಲ್ಲಿ 31.7 ಡಿ.ಸೆ., 2017ರಲ್ಲಿ 31.1 ಡಿ.ಸೆ., 2016ರಲ್ಲಿ 30.6 ಡಿ.ಸೆ. ದಾಖಲಾಗಿತ್ತು. ಈ ಹೋಲಿಕೆಯಿಂದ, 2026ರ ಸೆಪ್ಟೆಂಬರ್‌ನಲ್ಲಿ ದಾಖಲಾಗಿರುವ ಉಷ್ಣಾಂಶವು ಅತಿ ಹೆಚ್ಚು ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.

ಹವಾಮಾನ ತಜ್ಞರ ಪ್ರಕಾರ, ಎಲ್‌ನಿನೋ ಒತ್ತಡ ಮುಂದುವರಿದಿರುವುದರಿಂದ ಉಷ್ಣಾಂಶ ಏರಿಕೆಗೆ ಕಾರಣವಾಗಿದೆ. ಆದರೆ, ಇದು ತಾತ್ಕಾಲಿಕವಾಗಿರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ ತಿಂಗಳುಗಳಲ್ಲಿ ಶೀತಮಾನ್ಸೂನ್ ಬಲಿಷ್ಠವಾಗುವ ಸಾಧ್ಯತೆ ಇದೆ. ಅಂದಾಜು 1 ರಿಂದ 3 ಡಿ.ಸೆ. ಅಂತರದಲ್ಲಿ ಶಾಖದ ಮಟ್ಟ ಹೆಚ್ಚಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಮಳೆ ಆಗದಿರುವುದರಿಂದ ಕಾವೇರಿ ನದಿಯ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಹವಾಮಾನ ಇಲಾಖೆ ಪ್ರಕಾರ, ಸೆಪ್ಟೆಂಬರ್ 16ರ ನಂತರ ಮಳೆಯಾಗುವ ಸಾಧ್ಯತೆಗಳಿವೆ. ಇದರಿಂದ ನೀರಿನ ಮಟ್ಟ ಸುಧಾರಿಸಬಹುದು ಎಂಬ ನಿರೀಕ್ಷೆ ಇದೆ.

ಒಟ್ಟಿನಲ್ಲಿ, ಬೆಂಗಳೂರಿನಲ್ಲಿ ದಾಖಲಾಗಿರುವ ಉಷ್ಣಾಂಶ ಏರಿಕೆ ಹವಾಮಾನ ಬದಲಾವಣೆಯ ಗಂಭೀರತೆಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಮಳೆಯ ನಿರೀಕ್ಷೆ ಇದ್ದರೂ, ತಾತ್ಕಾಲಿಕವಾಗಿ ಉಷ್ಣಾಂಶ ಏರಿಕೆ ಸಾರ್ವಜನಿಕ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Continue Reading

ದಿನದ ಸುದ್ದಿ

KPSCExam: ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ವೈದ್ಯರ ಕೊರತೆ – ತಕ್ಷಣ ನೇಮಕಾತಿ ಅಗತ್ಯ

Published

on

ವೈದ್ಯಾಧಿಕಾರಿ ಹುದ್ದೆಗಳ ಖಾಲಿ – ಆಸ್ಪತ್ರೆಗಳಲ್ಲಿ ಸೇವೆಗೆ ತೊಂದರೆ

ಸುದ್ದಿದಿನ,ಕಲಬುರ್ಗಿ: ಕರ್ನಾಟಕದಲ್ಲಿ ವೈದ್ಯಾಧಿಕಾರಿ ಹುದ್ದೆಗಳ ಖಾಲಿತನವು ದಿನದಿಂದ ದಿನಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ, ರಾಜ್ಯದ ಅನೇಕ ಆಸ್ಪತ್ರೆಗಳು ವೈದ್ಯರ ಕೊರತೆಯಿಂದ ಬಳಲುತ್ತಿವೆ. ವಿಶೇಷವಾಗಿ ಬೆಂಗಳೂರು ಹಾಗೂ ಇತರ ನಗರ ಪ್ರದೇಶಗಳಲ್ಲಿ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಲು ತೊಂದರೆ ಉಂಟಾಗಿದೆ.

http://Visit : www.suddidina.com

ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದಾಗಿ ರೋಗಿಗಳ ಆರೈಕೆ ವಿಳಂಬವಾಗುತ್ತಿದೆ. ತುರ್ತು ಚಿಕಿತ್ಸೆಗೆ ಬರುವವರು ಸಮಯಕ್ಕೆ ಚಿಕಿತ್ಸೆ ಪಡೆಯಲು ಕಷ್ಟ ಅನುಭವಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಆಸ್ಪತ್ರೆಗಳ ಕಾರ್ಯಾಚರಣೆ ಹಿನ್ನಡೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ಅಲ್ಲಿ ವೈದ್ಯರ ಕೊರತೆಯಿಂದ ಮೂಲಭೂತ ಆರೋಗ್ಯ ಸೇವೆಗಳೇ ಕುಂಠಿತವಾಗಿವೆ.

ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುವ ಅಗತ್ಯವಿದೆ. ಆರೋಗ್ಯ ಸೇವೆ ಜನಜೀವನಕ್ಕೆ ನೇರವಾಗಿ ಸಂಬಂಧಿಸಿದುದರಿಂದ, ವೈದ್ಯರ ಕೊರತೆಯು ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಆಸ್ಪತ್ರೆಗಳು ವೈದ್ಯರ ಕೊರತೆಯಿಂದಾಗಿ ನಿರ್ವಹಣಾ ತೊಂದರೆ ಎದುರಿಸುತ್ತಿವೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ವೈದ್ಯರ ಕೊರತೆ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ. ತುರ್ತು ಸೇವೆ, ಶಸ್ತ್ರಚಿಕಿತ್ಸೆ ಹಾಗೂ ದಿನನಿತ್ಯದ ಚಿಕಿತ್ಸಾ ಕಾರ್ಯಗಳಲ್ಲಿ ವಿಳಂಬ ಉಂಟಾಗುತ್ತಿದೆ.

ಸರ್ಕಾರದ ಯೋಜನೆಯ ಪ್ರಕಾರ, ಶೀಘ್ರದಲ್ಲೇ ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಇದರಿಂದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆ ಇದೆ. ಆದರೆ, ಪ್ರಕ್ರಿಯೆ ವಿಳಂಬವಾದರೆ ಆರೋಗ್ಯ ಸೇವೆಯ ಮೇಲೆ ಇನ್ನಷ್ಟು ಹಾನಿ ಉಂಟಾಗುವ ಸಾಧ್ಯತೆ ಇದೆ.

ರೋಗಿ ಆರೈಕೆ, ಆಸ್ಪತ್ರೆಗಳ ಕಾರ್ಯಾಚರಣೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ವೈದ್ಯರ ನೇಮಕಾತಿ ತುರ್ತು ಅಗತ್ಯವಾಗಿದೆ. ವೈದ್ಯರ ಕೊರತೆಯಿಂದಾಗಿ ಚಿಕಿತ್ಸೆ ವಿಳಂಬವಾಗುವುದು, ರೋಗಿಗಳ ತೃಪ್ತಿ ಕಡಿಮೆಯಾಗುವುದು ಹಾಗೂ ಆರೋಗ್ಯ ಸೇವೆಯ ಗುಣಮಟ್ಟ ಕುಸಿಯುವುದು ಸಾಮಾನ್ಯ.

ಒಟ್ಟಿನಲ್ಲಿ, ಕರ್ನಾಟಕದಲ್ಲಿ ವೈದ್ಯಾಧಿಕಾರಿ ಹುದ್ದೆಗಳ ಖಾಲಿತನವು ಆರೋಗ್ಯ ಸೇವೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಿದರೆ, ಆಸ್ಪತ್ರೆಗಳಲ್ಲಿ ಸೇವೆ ಸುಧಾರಿಸಿ, ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ.

Continue Reading

Trending