Connect with us

ಲೈಫ್ ಸ್ಟೈಲ್

ಹಲ್ಲುಗಳನ್ನು ಕಪ್ಪುಗೊಳಿಸುವ ಹಲ್ಲಿಟ್ಟು ಗಿಲಾವು ಎಂಬ ಸಾಂಪ್ರದಾಯಿಕ ಕಲೆ..!

Published

on

 

“Some pains are physical,
And some are mental,
But the one that is both Is dental.”

-Ogden Nash.

“ಕೆಲವು ನೋವುಗಳು ದೈಹಿಕ. ಹಾಗೂ ಕೆಲವು ಮಾನಸಿಕ. ಎರಡೂ ಆಗಿರುವ ನೋವೇ ದಾಂತಿಕ!”

– ಆಗ್ಡನ್ ನ್ಯಾಶ್

ದೈಹಿಕವಾಗಿಯೂ ಮಾನಸಿಕವಾಗಿಯೂ ಬಾಧಿಸುವ ದಂತ ನೋವಿಗೆ ನಮ್ಮ ಪೂರ್ವಿಕರು ಅನೇಕ ರೀತಿಯ ಪರಿಹಾರೋಪಾಯಗಳನ್ನು ಕಂಡುಕೊಂಡಿದ್ದರು. ಅಂತಹ ಉಪಾಯಗಳಲ್ಲಿ ಹಲ್ಲಿಟ್ಟು ಎಂಬ ಪುಡಿಯಿಂದ ಹಲ್ಲುಗಳಿಗೆ ಕಪ್ಪು ಗಿಲಾವು ಮಾಡಿಕೊಳ್ಳುವ ಕಲೆಯೂ ಒಂದು. ನನ್ನ ಅಪ್ಪನ ಚಿಕ್ಕಮ್ಮನ ಹೆಸರು ಬುಡ್ಡಕದರಮ್ಮಜ್ಜಿ. ಸುಮಾರು ನಾಲ್ಕೂವರೆ ಅಡಿಗಳಷ್ಟು ಎತ್ತರದ ಮಟ್ಟಸವಾದ ಆಳ್ತನದ ಅವಳು ಕೆಂಪನೆ ಮೈಬಣ್ಣದ ಚೆಲುವೆ. ನಮ್ಮ ಪಕ್ಕದ ಮನೆಯಲ್ಲಿ ತುಂಬು ಸಂಸಾರವಂದಿಗಳಾಗಿ ವಾಸವಿದ್ದಳು. ನನ್ನ ಬಾಲ್ಯದ ದಿನಗಳಲ್ಲಿ ಅವಳು ನಮ್ಮ ಮನೆಗೆ ಬಂದಾಗಲೆಲ್ಲಾ ಕೆಂಪು ವಸಡಿಗೆ ಸಾಲಾಗಿ ಜೋಡಿಸಿದ ಕಪ್ಪು ಮುತ್ತಿನ ಮಣಿಗಳಂತಹ ಅವಳ ಹಲ್ಲುಗಳನ್ನು ತದೇಕ ಚಿತ್ತನಾಗಿ ನೋಡುತ್ತಿದ್ದೆ. “ಏನ್ಮಾಡ್ತಾ ಇದ್ದೀಯೇ…ಗ್ಗೇ.. ಕದರಿ… ಒಂದು ತಾಳೆ ಇಳೆದೆಲೆ ಕೊಡೆ” ಎಂದು ಬುಡ್ಡಕದರಮ್ಮಜ್ಜಿ ನನ್ನ ಅಮ್ಮನನ್ನು ಮಾತಾಡಿಸಿಕೊಂಡು ನಮ್ಮ ಪಕ್ಕದ ಮನೆಯಿಂದ ಗೋಡೆ ತಡವಿಕೊಂಡು ನಮ್ಮ ಮನೆಗೆ ಬರುತ್ತಿದ್ದಳು. ಕೇವಲ ಗೋಟಡಿಕೆ ಚೂರುಗಳನ್ನು ಬಾಯೊಳಗೆ ಅತ್ತಲಿತ್ತ ನಾಗೆಯಿಂದ ಹೊರಳಾಡಿಸುತ್ತಾ ಯಾವುದೋ ಗಂಧರ್ವ ಲೋಕದಿಂದ ಇಳಿದು ಬಂದ ಕನ್ಯೆಯಂತೆ ತರಕು ವಿಳೆದೆಲೆಗಾಗಿ ಬರುತ್ತಿದ್ದಳು. ಕಟವಾಯಿಯಲ್ಲಿ ಸೋರುತ್ತಿದ್ದ ತೊಂಬುಲವನ್ನು ಸೊರ್ರನೆ ಒಳಗೆಳೆದುಕೊಂಡು ಬಾಯಲ್ಲಿ ತೊಂಬುಲ ತುಂಬಿಕೊಂಡೇ ಮಾತಾಡುತ್ತಿದ್ದ ಅವಳ ಮಾತನ್ನು ಆಲಿಸುವುದೊಂದು ಚೆಂದವಾಗಿತ್ತು. ಬಾಯೊಳಗಿನ ತೊಂಬುಲವನ್ನು ಆಚೆಗೆ ಉಗುಳಿ ಬಂದು, ಗಳಾಗಂಟೆ ಬಿಟ್ಟುಕೊಂಡು ನಿಂತುಕೊಂಡಿದ್ದ ನನ್ನ ಕಡೆಗೆ ನೋಡಿ ಕರ್ರಗೆ ನಗುತ್ತಾ, ನನ್ನ ಕೆನ್ನೆ ಸವರಿ ನೆಟಿಗಿಕೊಂಡು, ನನ್ನ ಬುಲಕಾಯಿ ಹಿಡಿದು ಸವರಿ ತನ್ನ ಬೆರಳುಗಳಿಗೆ ತಾನೇ ಮುತ್ತು ಕೊಟ್ಟುಕೊಳ್ಳುತ್ತಿದ್ದಳು.

ನನ್ನ ಅಮ್ಮನ ಹಲ್ಲುಗಳು ಬೆಳ್ಳಗಿದ್ದರೆ ಬುಡ್ಡಕದರಮ್ಮಜ್ಜಿಯ ಹಲ್ಲುಗಳು ಮಾತ್ರ ಕರ್ರಗಿದ್ದವು. ದಿನವೆಲ್ಲಾ ಎಲೆಅಡಕೆ ನಮುಲಿ ನಮುಲಿ ಹಲ್ಲುಗಳು ಹೀಗೆ ಕರ್ರಗಾಗಿರಬಹುದೆಂದೂ, ಮುಂದೊಂದು ದಿನ ನನ್ನ ಅಮ್ಮನು ಮುದುಕಿಯಾಗುವ ಹೊತ್ತಿಗೆ ಅವಳ ಹಲ್ಲುಗಳೂ ಬುಡ್ಡಕದರಮ್ಮಜ್ಜಿಯ ಹಲ್ಲುಗಳಂತೆ ಕರ್ರಗಾಗಬಹುದೆಂದು ನಾನು ಯೋಚಿಸುತ್ತಿದ್ದೆ. ಆದರೆ ನಂತರದ ದಿನಗಳಲ್ಲಿ ಕರಿಹಲ್ಲುಗಳ ಹಿಂದಿನ ಸೀಕ್ರೆಟ್ ಏನೆಂಬುದನ್ನು ನಾನು ಕಂಡುಕೊಂಡೆ. ನಮ್ಮೂರಿನ ಹತ್ತಿರದ ಯಾದಗೆರೆ ಗ್ರಾಮದ ಅಲೆಮಾರಿ ಕೊರಮ ಸಮುದಾಯದ ಹೆಂಗಸರಿಂದ ನಮ್ಮೂರಿನ ಕೆಲವು ಮಧ್ಯ ವಯಸ್ಕ ಹೆಂಗಸರು ಹಲ್ಲಿಟ್ಟು ಎಂಬ ಗಿಡಮೂಲಿಕೆಯ ಪುಡಿಯನ್ನು ತಮ್ಮ ಹಲ್ಲುಗಳಿಗೆ ತಿಕ್ಕಿಸಿಕೊಂಡು ಬಾಯೊಳಗಿದ್ದ ಎಲ್ಲಾ ಹಲ್ಲುಗಳನ್ನು ಕರ್ರಗೆ ಹೊಳೆಯುವಂತೆ ಗಿಲಾವು ಮಾಡಿಕೊಳ್ಳುತ್ತಿದ್ದ ದೃಶ್ಯ ನನ್ನ ಕಣ್ಣಿಗೆ ಬಿತ್ತು. ಬುಡ್ಡಕದರಮ್ಮಜ್ಜಿಯೂ ಕೂಡಾ ಬಲು ಹಿಂದೆ ಇದೇ ಅಲೆಮಾರಿಗಳಿಂದ ತನ್ನ ಹಲ್ಲುಗಳಿಗೆ ಹಲ್ಲಿಟ್ಟು ಹಾಕಿಸಿ ಗಿಲಾವು ಮಾಡಿಸಿಕೊಂಡಿದ್ದಳು.

ನನ್ನ ಅಪ್ಪನ ಅಕ್ಕ ಅಂದರೆ ನನ್ನ ಸೋದರತ್ತೆಯ ಬೆಲ್ಲದಹಳ್ಳಿ ಎಂಬ ಊರಿನಲ್ಲಿಯೂ ಎಲ್ಲಕ್ಕ ಎಂಬ ಕೆಂಪನೆ ಅಜ್ಜಿಯೊಬ್ಬಳು ತನ್ನ ಹಲ್ಲುಗಳನ್ನು ಹಲ್ಲಿಟ್ಟಿನಿಂದ ತಿಕ್ಕಿಕೊಂಡು ಹೊಳೆಯುವ ಕರಿ ಇದ್ದಿಲಿನಂತೆ ಮೆರಗು ಮಾಡಿಕೊಂಡಿದ್ದಳು. ಎಲ್ಲಕ್ಕಜ್ಜಿಯು ವಾರಕ್ಕೊಮ್ಮೆ ಹಲ್ಲಿಟ್ಟಿನ ಪುಡಿಯಿಂದ ಹಲ್ಲುಗಳನ್ನು ಉಜ್ಜಿಕೊಳ್ಳುತ್ತಿದ್ದಳು. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿದ್ದ ಆ ಬೆನ್ನು ಬಾಗಿದ ಅಜ್ಜಿಯ ಬಳಿ ನಾನೊಂದು ದಿನ ಅದೂ ಇದೂ ಮಾತಾಡುತ್ತಾ ಹಲ್ಲಿಟ್ಟು ಹಾಕಿಸಿಕೊಳ್ಳುವ ಉದ್ದೇಶ ಕುರಿತು ಕೇಳಿದೆ. “ನಾವು ಸದಾ ಕಾಲ ಬದುಕಿನ ಮ್ಯಾಲಿರೋರು…. ಕೆಲಸ ಮಾಡುವಾಗ ಆಸರಿಕೆ ಬ್ಯಾಸರಿಕೆ ಕಳೆಯೋದಕ್ಕೆ ಎಲೆಅಡಕೆ ಹಾಕ್ತೀವಿ… ಸದಾ ಎಲೆಅಡಕೆ ಹಾಕಿ ಹಲ್ಲುಜ್ಕಂಡ್ ಬೆಳ್ಳಗೆ ಮಾಡ್ಕಂಡ್ ಕೂತ್ಕಮಾಕೆ ಸಾಧ್ಯನಾ ನಮಗೆ? ಒಂದೊಂದ್ ಸಲಿ ಬದುಕಿನ ಯಾಳ್ಯದಾಗೆ ನಮ್ಮ ತಿಕ ಕೆರ್ಕಳಕೂ ಸಡುವಿರಾದಿಲ್ಲ. ಅದುಕ್ಕೆ ಇಂಗೆ ಹಲ್ಲಿಟ್ಟು ಹಾಕಸ್ಕಮ್ತೀವಿ” ಅಂದಳು.

ಈಗಿನ ನಾವು ಬಿಳಿಕೂದಲಿಗೆ ಕಪ್ಪು ಡೈ ಹಾಕುವ ರೀತಿಯಲ್ಲಿಯೇ ಆಗಿನ ಕೆಲವು ಮುದುಕ ಮುದುಕಿಯರು ಹಲ್ಲಿಟ್ಟಿನಿಂದ ಹಲ್ಲುಜ್ಜುವುದನ್ನು ನಾನು ನೋಡಿದ್ದೆ. ಈಗಲೂ ನನ್ನ ನೆನಪಿನಿಂದ ಆ ದೃಶ್ಯಗಳು ಮಾಸಿಲ್ಲ. ಆಗಿನ ದಿನಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಎದ್ದು ಮುಖ ತೊಳೆಯುವಾಗ ಮನೆಗಳ ಮಣ್ಣೆಂಟೆಯ ಗೋಡೆಗೆ ನೀರು ಚಿಮುಕಿಸಿ ಬೆರಳಿನಿಂದ ಮಣ್ಣನ್ನು ನಾದಿಕೊಂಡು ಹಲ್ಲುಜ್ಜುವುದು ಅಥವಾ ತೆಂಗಿನ ಕುರಂಬಳೆಯ ಇದ್ದಿಲನ್ನು ಕರಕರನೆ ಜಗಿದು ಬೆರಳಿನಿಂದ ಹಲ್ಲುಜ್ಜುವುದು ಸಾಮಾನ್ಯ ದೃಶ್ಯಗಳಾಗಿದ್ದವು. ಬೇವಿನ ಕಡ್ಡಿಯಿಂದ, ನಂಜನಗೂಡು ಹಲ್ಲುಪುಡಿ ಅಥವಾ ಚಂಪಕಾ ದಂತಚೂರ್ಣದಿಂದ ಹಲ್ಲುಜ್ಜುವುದನ್ನು ಮೇಲ್ವರ್ಗದ ಕಲಿತ ಜನರಲ್ಲಿ ಮಾತ್ರ ನೋಡಬಹುದಾಗಿತ್ತು. ಈಗಿನಂತೆ ಆಗಿನ ಕಾಲದಲ್ಲಿ ದುಬಾರಿ ಬೆಲೆಯ ತರಹೇವಾರಿ ಟೂತ್ ಪೇಸ್ಟು ಬ್ರಶ್ ಗಳು ಹಾಗೂ ದಂತ ಚಿಕಿತ್ಸಾಲಯಗಳು ಮಾರುಕಟ್ಟೆ ಪ್ರವೇಶಿಸಿರಲಿಲ್ಲ. ಆಗಿನ ಜನ ಹಲ್ಲುಗಳ ಬಗ್ಗೆಯಾಗಲೀ ತಲೆಕೂದಲಿನ ಬಗ್ಗೆಯಾಗಲೀ ಅತಿಯಾದ ಎಚ್ಚರಿಕೆ ಮತ್ತು ಆಸಕ್ತಿ ತೋರಿಸುವಂತೆ ಕಾಣಿಸದಿದ್ದರೂ ಅವರು ಮುಪ್ಪಾನು ಮುಪ್ಪಾಗಿ ಸಾಯುವ ದಿನಗಳವರೆಗೂ ತಲೆಕೂದಲು ಕಡುಕಪ್ಪಗೆ ಮತ್ತು ಹಲ್ಲುಗಳು ಸುಭದ್ರವಾಗಿರುವುದನ್ನು ನಾವು ಕಾಣುತ್ತಿದ್ದೆವು.

ಮುದುಕರಿಗಿಂತಲೂ ಹೆಚ್ಚಾಗಿ ಮುದುಕಿಯರು ಮಾತ್ರ ಹಲ್ಲಿಟ್ಟು ತಿಕ್ಕಿಕೊಂಡು ಹಲ್ಲುಗಳನ್ನು ಕರ್ರಗೆ ಮೆರಗುಗೊಳಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆಗಿನ ಅಜ್ಜಿಯರಿಗೆ ಹಲ್ಲುಗಳನ್ನು ಕಪ್ಪುಗೊಳಿಸಿಕೊಳ್ಳುವುದು ಬಹುಶಃ ಫ್ಯಾಷನ್ ಆಗಿರಲಿಲ್ಲ. ವಯೋವೃದ್ಧರಾಗುವತನಕ ಎಲೆಅಡಕೆ ಜಗಿಯಲು ಎಮಕೆ- ಕಾಳುಕಡ್ಡಿ ಮುಂತಾದ ಗಟ್ಟಿ ಪದಾರ್ಥಗಳನ್ನು ಜಗಿಯಲು ಅನುಕೂಲವಾಗುವಂತೆ ಹಲ್ಲುಗಳನ್ನು ಸುಭದ್ರಪಡಿಸಿಕೊಳ್ಳುವುದೇ ಅವರಿಗಿದ್ದ ಮುಖ್ಯ ಉದ್ದೇಶವೆನ್ನಿಸುತ್ತದೆ. ಹಲ್ಲಿಟ್ಟು ಹಾಕಿಸಿಕೊಂಡವರಿಗೆ ಎಂದಿಗೂ ಹುಳುಕುಹಲ್ಲು, ಹಲ್ಲು ಕುಳಿ ಬೀಳುವುದು, ಹಲ್ಲುಗಳ ನಡುವೆ ಸದುವುಗಳಾಗುವುದು ಮುಂತಾದ ಸಮಸ್ಯೆ ಎದುರಾಗುತ್ತಿರಲಿಲ್ಲ. ಫ್ಲೋರೈಡ್ ಯುಕ್ತ ಉಪ್ಪುನೀರು ಸೇವನೆಯ ಪರಿಣಾಮದಿಂದ ಹಲ್ಲುಗಳು ಹಳದಿಗಟ್ಟುವ ಸಮಸ್ಯೆಯೂ ಕಾಣಿಸುತ್ತಿರಲಿಲ್ಲ.

ಇಂದಿಗೂ ನಮ್ಮ ಹಳ್ಳಿಗಳಲ್ಲಿ ಇಂತಹ ಕಪ್ಪು ಹಲ್ಲುಗಳ ಮುದುಕಿಯರು ವಿರಳವಾಗಿ ಕಾಣಸಿಗುತ್ತಾರೆ. ಕೆಲವು ಜನ ತಮ್ಮ ನೆನಪಿಗಾಗಿ ಹಚ್ಚೆ ಹಾಕಿಸುವುದು ಮತ್ತು ಹಲ್ಲಿಗೆ ಹಲ್ಲಿಟ್ಟು ಹಾಕಿಸುವುದು ರೂಢಿಗತ ವಿದ್ಯಮಾನವಾಗಿತ್ತು. “ಸತ್ತಾಗ ನಮ್ಮ ಜೊತೆಗೆ ಯಾರೂ ಬರಲ್ಲ… ಬರೋದೊಂದೇ ಹಚ್ಚೆ ಹಲ್ಲಿಟ್ಟು” ಎಂಬ ಲೋಕರೂಢಿಯ ಮಾತು ಜನಜನಿತವಾಗಿತ್ತು. ಇವತ್ತಿನ ಹೊಸ ತಲೆಮಾರಿನ ಜನರಿಗೆ ಹಲ್ಲಿಟ್ಟು ಅಂದ್ರೆ ಗೊತ್ತೇ ಇಲ್ಲ. ಹಲ್ಲಿಟ್ಟು ಕಣ್ಮರೆಯಾಗಿ ರಾಕ್ಷಸ ಸ್ವರೂಪಿಯಾದ ಟ್ಯಾಟೂ ಸಂಸ್ಕೃತಿ ಎಲ್ಲೆಲ್ಲೂ ರಾರಾಜಿಸುತ್ತಿದೆ. ಕವಿಗಳು ಹೆಣ್ಣಿನ ಚಿತ್ತಾಕರ್ಷಕ ಹಲ್ಲುಗಳನ್ನು ದಾಳಿಂಬೆ ಬೀಜಗಳಿಗೆ ಹೋಲಿಸಿದ್ದಾರೆ. ಕೆಂಪು ದಾಳಿಂಬೆ ಬೀಜಗಳನ್ನು ಮತ್ತು ಬಿಳಿಯ ಹಲ್ಲುಗಳನ್ನು ಹೇಗೆ ಒಂದನ್ನೊಂದು ಹೋಲಿಸಿದರೋ ಕಾಣೆ. ಹಲ್ಲಿಟ್ಟು ಹಾಕಿಸಿಕೊಂಡು ಕರ್ರಗೆ ಗಿಲಾವು ಮಾಡಿಕೊಂಡ ಹಲ್ಲುಗಳಂತೂ ಸೀತಾಫಲ ಅಥವಾ ಕಲ್ಲಂಗಡಿ ಹಣ್ಣಿನ ಬೀಜಗಳಂತೆ ಕರ್ರಗೆ ಕಾಣಿಸುತ್ತವೆ.

ಹಿಂದೆ ಪರಕೀಯರು ಮತ್ತು ಕುಲೀನ ರಾಜಮಹಾರಾಜರು ಆಳ್ವಿಕೆ ಮಾಡುತ್ತಿದ್ದ ಕಾಲದಲ್ಲಿ ತಳಸ್ತರ ಸಾಮಾಜಿಕ ವಲಯಗಳ ಹೆಣ್ಣಿನ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ತಡೆಗಟ್ಟಲು ಹಲ್ಲಿಟ್ಟಿನ ಗಿಲಾವು ಮಾಡಿಸಿಕೊಳ್ಳುವ ಉಪಾಯವನ್ನು ಮಹಿಳೆಯರು ಕಂಡುಕೊಂಡಿದ್ದರೆಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಈ ಅಭಿಪ್ರಾಯವನ್ನು ಅಷ್ಟಾಗಿ ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಹಲ್ಲಿಟ್ಟು ಹಾಕಿಕೊಳ್ಳುವುದು ವಿಶ್ವಾದ್ಯಂತ ರೂಢಿಯಲ್ಲಿದ್ದ ಪದ್ದತಿಯಾಗಿತ್ತು. ಕೆಲವು ಆದಿವಾಸಿಗಳು ಮತ್ತು ದುಡಿಯುವ ವರ್ಗಗಳ ಮಹಿಳೆಯರಲ್ಲಿ ಈ ಪದ್ದತಿ ಹೆಚ್ಚು ಚಾಲ್ತಿಯಲ್ಲಿತ್ತು. ಹಲ್ಲಿಟ್ಟನ್ನು ಹಾಕಿಸಿಕೊಂಡು ಹಲ್ಲು ಸವಕಳಿ, ಹುಳುಕಲ್ಲು, ದಂತಕುಳಿ, ಸದುವಲ್ಲು, ವಸಡು ಬಾಧೆ, ಹಲ್ಲು ಕೀಸುಗಟ್ಟುವಿಕೆ ಆಗದಂತೆ ಶಾಶ್ವತವಾಗಿ ದಂತ ರಕ್ಷಣೆ ಮಾಡಿಕೊಳ್ಳುವ ಹಾಗೂ ಮಿರುಗುವ ಕಡುಕಪ್ಪು ದಂತಕಾಂತಿಯನ್ನು ಹೊಂದುವ ಸಾಂಪ್ರದಾಯಿಕತೆ ಮತ್ತು ವೈಜ್ಞಾನಿಕತೆಗಳೇ ಹಲ್ಲಿಟ್ಟು ಹಾಕಿಸಿಕೊಳ್ಳುವುದರ ಹಿಂದಿನ ಅಸಲಿ ಕಾರಣವಿರಬೇಕು ಅನ್ನಿಸುತ್ತಿದೆ. ಹಲ್ಲಿಟ್ಟು ಬಳಸಿ ತೊಳೆದ ಬಾಯಿಯು ಸ್ವಚ್ಛವಾಗಿಯೂ ತಾಜಾತನದಿಂದಲೂ ಇರುವುದರಿಂದ ದುರ್ವಾಸನೆಯಿಂದ ಮುಕ್ತವಾಗಿ ಒಳ್ಳೆಯ ಪರಿಮಳ ತುಂಬಿಕೊಳ್ಳುತ್ತದೆಂಬುದು ಹಲ್ಲಿಟ್ಟು ಹಾಕಿಸಿಕೊಂಡವರ ಅನುಭವದ ಮಾತು. ಹಲ್ಲಿಟ್ಟಿನ ಅತಿಯಾದ ಬಳಕೆಯು ಆರೋಗ್ಯದ ಮೇಲೆ ಅಡ್ಡಪರಿಣಾಮವನ್ನು ಬೀರುತ್ತದೆಂದು ಹೇಳುತ್ತಾರೆ.

ಈಗಿನ ಆಧುನಿಕ ತರುಣಿಯರಿಗೆ ಬಣ್ಣಗುರುಡುತನ ಜಾಸ್ತಿ. ಸಹಜ ರೂಪವತಿಯರೂ ಕೂಡ ತಮ್ಮ ತುಟಿಗಳಿಗೆ ಬಣ್ಣ ಹಚ್ಚಿಕೊಳ್ಳದೆ ಮನೆಯಿಂದಾಚೆಗೆ ಹೋಗಲು ನಿರಾಕರಿಸುತ್ತಾರೆ. ಅವರಿಗೆ ಬಿಳಿ ಹಲ್ಲುಗಳ ಮೇಲೆಯೇ ಹೆಚ್ಚು ವ್ಯಾಮೋಹ. ಹಲ್ಲಿಟ್ಟಾಕಿ ಹಲ್ಲು ಕಪ್ಪಾಗಿಸಿಕೊಳ್ಳಲು ಇವರು ಒಪ್ಪುವುದಿಲ್ಲ. ಹಲ್ಲು ಮತ್ತು ವಸಡಿನ ಆರೋಗ್ಯಕ್ಕಿಂತಲೂ ಹಲ್ಲು ಬೆಳ್ಳಗಿರೋದು ಮುಖ್ಯ. ಆದುದರಿಂದಲೇ ಈಗಿನವರು ಹಲ್ಲುಗಳು ಥಳಥಳಿಸುವಂತೆ ಬ್ಲೀಚ್ ಮಾಡಿಸಿಕೊಳ್ಳುತ್ತಾರೆ. ಇಂತಹ ಸೌಂದರ್ಯ ವ್ಯಸನದಿಂದ ಸನ್ಯಾಸಿಗಳೂ ಕೂಡಾ ಮುಕ್ತರಾಗಿಲ್ಲವೆಂಬುದಕ್ಕೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರಾವಧೂತ ಮಠದ ಶ್ರೀ ನಂಜಾವಧೂತ ಸ್ವಾಮೀಜಿಯು ತನ್ನ ಹಲ್ಲುಗಳಿಗೆ ಬ್ಲೀಚ್ ಮಾಡಿಸಿಕೊಂಡಿದ್ದಾರೆ. ಆಗಿಂದಾಗ್ಗೆ ಪುರುಷರ ಪಾರ್ಲರ್ ಗೆ ಹೋಗುವ ಪಾರ್ಲರ್ ಸ್ವಾಮೀಜಿಯಾಗಿ ಹೆಸರುವಾಸಿಯಾಗಿದ್ದಾರೆ. ಕೆಲವರಂತೂ ತಮ್ಮ ಹಲ್ಲುಗಳಿಗೆ ಗೋಲ್ಡನ್ ಓವರ್ ಕೋಟ್ ಮಾಡಿಸಿಕೊಂಡಿದ್ದಾರೆ. ಅದು ಅವರವರ ವಯಕ್ತಿಕ ಅಭಿರುಚಿಯೂ ಸ್ವಾತಂತ್ರ್ಯವೂ ಆಗಿರುತ್ತದೆ.

ಹಲ್ಲಿಟ್ಟನ್ನು ದಾಲ್ಚುಣ್ಣ- ಕಾಚು – ಹಸಿರೆಲೆಗಳ ರಸ- ಗಿಡಮೂಲಿಕೆಯ ಪುಡಿಗಳಿಂದ ತಯಾರಿಸುತ್ತಾರೆಂದು ನನ್ನ ಅಪ್ಪ ಹೇಳುತ್ತಿದ್ದದ್ದು ನನಗಿಂದಿಗೂ ನೆನಪಿಗಿದೆ. ನೈಸರ್ಗಿಕ ಸಸ್ಯ ಮೂಲಿಕಾಂಶಗಳಿಂದ ತಯಾರಿಸಲಾದ ಹಲ್ಲಿಟ್ಟು ಹಲ್ಲುಗಳಿಗೆ ಸುರಕ್ಷಿತವೂ ಉಪಯುಕ್ತವೂ ಆಗಿದೆ. ಅದು ಹಲ್ಲುಗಳನ್ನು ಆಳವಾಗಿ ಕಪ್ಪುಗೊಳಿಸುವುದು ಮಾತ್ರವಲ್ಲದೆ ಹಲ್ಲುಗಳ ಕಲೆಗಳು ಮತ್ತೆ ರೂಪುಗೊಳ್ಳುವುದನ್ನು ತಡೆಗಟ್ಟುತ್ತದೆ. ಹಲ್ಲು ಕಪ್ಪು ಮಾಡುವಿಕೆಯು ಧೂಮಪಾನ ಮತ್ತು ಚಹಾ ಅಥವಾ ಕಾಫಿಯನ್ನು ಕುಡಿಯುವುದರಿಂದ ಉಂಟಾದ ಕಲೆಗಳನ್ನು ಕಾಣದ ರೀತಿಯಲ್ಲಿ ಮರೆಮಾಚುತ್ತದೆ, ಹಳದಿ ಹಲ್ಲುಗಳನ್ನು ಹಲ್ಲಿಟ್ಟು ಸಂಪೂರ್ಣವಾಗಿ ಕಪ್ಪುಗೊಳಿಸುತ್ತದೆ. ಈ ಪುಡಿಯು ಕಪ್ಪು ಬಣ್ಣದ ಪರಿಣಾಮವನ್ನು ವ್ಯಕ್ತಿಯ ಜೀವಿತಾಂತ್ಯದವರೆಗೂ ಕಾಪಾಡಿಕೊಳ್ಳುವಂತಹ ಉತ್ತಮ ಗುಣಮಟ್ಟವನ್ನು ಹೊಂದಿದ್ದು ಸರಳ ದೇಶಿ ತಂತ್ರಜ್ಞಾನದಿಂದ ರೂಪಿಸಲಾಗಿರುತ್ತದೆ. ಅದು ಯಾವುದೇ ಹೊಸ ಬಣ್ಣದ ವರ್ಣದ್ರವ್ಯವನ್ನು ಹಲ್ಲುಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ.

ಹಲ್ಲುಗಳನ್ನು ಕಪ್ಪಾಗಿಸಿಕೊಳ್ಳುವುದು ಚೀನಾ, ಪೆಸಿಫಿಕ್ ದ್ವೀಪಗಳು ಮತ್ತು ಆಗ್ನೇಯ ಏಷ್ಯಾದ ಜನರಲ್ಲಿ ಇಂದಿಗೂ ವಿರಳವಾಗಿ ರೂಢಿಗಿದೆ. ದಕ್ಷಿಣ ಚೀನಾದಲ್ಲಿ ಮತ್ತು ಜಪಾನ್ ದೇಶದಲ್ಲಿ ಹಲ್ಲು ಕಪ್ಪಾಗಿಸಿಕೊಳ್ಳುವ ಸಂಪ್ರದಾಯಬದ್ಧ ಆಚರಣೆಗಳಿವೆ. ಹಲ್ಲು ಗಿಲಾವು ಮಾಡಿಕೊಳ್ಳುವುದನ್ನು ಪ್ರಬುದ್ಧತೆ, ಸೌಂದರ್ಯ ವರ್ಧನೆ ಮತ್ತು ನಾಗರಿಕತೆಯ ಸಂಕೇತವೆಂದು ನಂಬಲಾಗಿದೆ. ಕಪ್ಪಾದ ಹಲ್ಲುಗಳು ಮನುಷ್ಯರನ್ನು ಪ್ರಾಣಿಗಳಿಂದ ಪ್ರತ್ಯೇಕಿಸುತ್ತವೆಂಬುದು ಮತ್ತೊಂದು ಸಾಮಾನ್ಯ ನಂಬಿಕೆ. ಇದು ಮುಖ್ಯವಾಗಿ ವಯಸ್ಸಾದ ಮಹಿಳೆಯರಲ್ಲಿ ಪ್ರಚಲಿತದಲ್ಲಿದೆ. 1938 ರಲ್ಲಿ ನಡೆದ ಫ್ರೆಂಚ್ ಸಮೀಕ್ಷೆಯೊಂದರ ಪ್ರಕಾರ ವಿಯೆಟ್ನಾಂ ದೇಶದ 80% ಗ್ರಾಮಾಂತರ ಜನಪದರು ಹಲ್ಲುಗಳನ್ನು ಕಪ್ಪಾಗಿಸಿಕೊಂಡಿದ್ದಾರೆ. ವಿಯೆಟ್ನಾಂ ಮತ್ತು ಇತರ ಆಗ್ನೇಯ ಏಷ್ಯಾದ ಮಧ್ಯಕಾಲೀನ ರಾಜರು ಸಹ ಹಲ್ಲುಗಳನ್ನು ಕಪ್ಪಾಗಿಸಿಕೊಂಡಿದ್ದರು. ವಸಾಹತುಶಾಹಿ ಯುಗದಲ್ಲಿ ಪಾಶ್ಚಾತ್ಯ ಸೌಂದರ್ಯದ ಮಾನದಂಡಗಳು ಪರಿಚಯವಾದ ನಂತರದ ಕಾಲದಲ್ಲಿ ಹಲ್ಲಿಟ್ಟು ಗಿಲಾವು ಸಂಸ್ಕೃತಿಯು ಕಣ್ಮರೆಯಾಗುತ್ತಾ ಬಂತು.

ದಕ್ಷಿಣ ಭಾರತದಲ್ಲಿ ಹಲ್ಲುಗಳನ್ನು ಕಪ್ಪಾಗಿಸುವಿಕೆಯು ಲೈಂಗಿಕ ಪರಿಪಕ್ವತೆಗೆ ಸಂಬಂಧಿಸಿದ ಜೀವನ ಚಕ್ರ ಘಟನೆಯಾಗಿ ಮತ್ತು ಲೈಂಗಿಕ ಪ್ರಚೋದಕವಾಗಿ ದೇವದಾಸಿ ಮಹಿಳೆಯರಲ್ಲಿ ಹೆಚ್ಚಾಗಿ ಅಭ್ಯಾಸಕ್ಕೆ ಬಂದಂತಿದೆ. ತಾಂಬೂಲ ಸೇವನೆ ಮತ್ತು ಹಲ್ಲಿಟ್ಟು ಮೆರುಗು ಆರೋಗ್ಯಕರವಾದ ಹಲ್ಲುಗಳನ್ನು ಕಾಪಾಡಿಕೊಳ್ಳುವುದರ ಜೊತೆಗೆ ಲೈಂಗಿಕ ಆಕರ್ಷಣೆಯನ್ನು ಹೆಚ್ಚಿಸಲು ಸಹಕಾರಿ ಎಂದು ನಂಬಲಾಗಿದೆ. ಏಷ್ಯಾದ ಇತಿಹಾಸದುದ್ದಕ್ಕೂ ಹಲ್ಲು ಕಪ್ಪಾಗಿಸುವ ಸಾಂಪ್ರದಾಯಿಕ ಜನಪದ ಸಂಸ್ಕೃತಿಯು ಸಾಕಷ್ಟು ಜನಪ್ರಿಯವಾಗಿದೆ.

ಫೋಟೋ : ಅಂತರ್ಜಾಲ
ವಿಡಿಯೋ ನೆರವು : ಅಂಬಿಕಾ ವಾಸುದೇವ್
ಪ್ರಸ್ತುತ ಪೋಸ್ಟ್ ನ ವಿಡಿಯೋ ವಕ್ತೃ : ಸಾವಂತಮ್ಮ (ಸು.70), ಹೆರಗು ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು, ಹಾಸನ ಜಿಲ್ಲೆ.

ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್‍ ಆಹ್ವಾನ

Published

on

ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್‍ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್‍ ಸಂಜೀವ್‍ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್‍ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.

ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್‍, ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಒಂದು ಮೊಬೈಲ್‍ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್‍ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ24 hours ago

ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ...

ದಿನದ ಸುದ್ದಿ3 days ago

ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು

ಮುಖ್ಯಾಂಶಗಳು ​ ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ ​ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್ ಸುದ್ದಿದಿನ,​ದಾವಣಗೆರೆ:...

ದಿನದ ಸುದ್ದಿ4 days ago

ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ 

ಸುದ್ದಿದಿನ,ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ...

ದಿನದ ಸುದ್ದಿ5 days ago

ಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ

ಸುದ್ದಿದಿನ,ದಾವಣಗೆರೆ: ಪ್ರೀತಿಸಿ ವಿವಾಹವಾಗಿದ್ದ ದಂಪತಿ ಜೀವಭಯದಿಂದ ಪೊಲೀಸ್ ರಕ್ಷಣೆ ಕೋರಿ ಠಾಣೆಗೆ ಬಂದಿದ್ದ ವೇಳೆ, ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ...

ಅಂಕಣ1 week ago

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ....

ದಿನದ ಸುದ್ದಿ1 week ago

ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್‍ಒಗಳ ಭೇಟಿ ಪ್ರಾರಂಭ

ಸುದ್ದಿದಿನ,ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಾದ್ಯಂತ ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಸ್.ಐ.ಆರ್. ಪ್ರಕ್ರಿಯೆ ಅತ್ಯಂತ ಚುರುಕಿನಿಂದ ಸಾಗುತ್ತಿದೆ. ಜಿಲ್ಲೆಯ ಒಟ್ಟು 7 ವಿಧಾನಸಭಾ...

ದಿನದ ಸುದ್ದಿ1 week ago

ಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾದಿಂದ ನಿರ್ಮಾಣ ಮಾಡಲು ಹೊರಟಿರುವ ವಸತಿ(ಹೊಸ ಲೇ ಔಟ್) ಯೋಜನೆಯನ್ನ ಈ ಕೂಡಲೇ ಕೈ ಬಿಡಬೇಕು ಎಂದು ರೈತರು ನಗರಾಭಿವೃದ್ದಿ...

ದಿನದ ಸುದ್ದಿ2 weeks ago

ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’

ಸುದ್ದಿದಿನ,ದಾವಣಗೆರೆ: ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಶ್ಮಿ ....

ದಿನದ ಸುದ್ದಿ2 weeks ago

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ...

ದಿನದ ಸುದ್ದಿ2 weeks ago

ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್‍ ಆಹ್ವಾನ

ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್‍ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್‍ ಸಂಜೀವ್‍ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ. ಈ...

Trending