Connect with us

ಲೈಫ್ ಸ್ಟೈಲ್

ಹಾಲು ಸಸ್ಯಾಹಾರವೇ !? ಮಾಂಸಾಹಾರವೇ!? : ಮಿಸ್ ಮಾಡ್ದೆ ಈ ಲೇಖನ ಓದಿ

Published

on

  • ಡಾ: ಎನ್.ಬಿ.ಶ್ರೀಧರ

ಹಾಲು ಕುಡಿಯುವವರು ಈ ಶಿರ್ಷಿಕೆ ನೋಡಿ ನಮಗ್ಯಾಕೆ ಈ ಪ್ರಶ್ನೆ? ಎಂದು ಹೌಹಾರುವುದು ಸಹಜ. ಹಾಲನ್ನು ಅಹಾರವಾಗಿ ಸೇವಿಸುವವರು ತಲೆ ಕೆಟ್ಟಿದೆ ಈ ಮನುಷ್ಯನಿಗೆ ಎಂದುಕೊಂಡರೆ ಮಾಂಸಾಹಾರಿಗಳು ಹಾಲು ಸಸ್ಯಾಹಾರ ಅಂದು ಕೊಂಡು ಸೇವಿಸುತ್ತಿದ್ದೀರಲ್ಲಾ !! ಬನ್ನಿ ನಮ್ಮ ಸಾಲಿಗೆ ಅಂದು ಒಳಗೊಳಗೇ ಖುಷಿ ಪಡುತ್ತಾರೆ..

ವೃತ್ತಿಯಲ್ಲಿ ಪಶುವೈದ್ಯನಾದರೂ ಸಹ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿರುವುದರಿಂದ ಪಾಠ ಮಾಡುವುದು ನನ್ನ ದೈನಂದಿನ ಚಟುವಟಿಕೆ. ಮೊನ್ನೆ ತರಗತಿಯಲ್ಲಿ ಪಾಠ ಮಾಡುತ್ತಾ ಸಾಂಧರ್ಭಿಕವಾಗಿ ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಹಾಕಿದೆ. ಸ್ವಲ್ಪ ಹೊತ್ತು ಗಲಿಬಿಲಿಗೊಂಡ ಅವರಲ್ಲಿ ಕೆಲವರು ಸಸ್ಯಾಹಾರವೇ ಸಾರ್..!! ಸಂಶಯವೇಕೆ? ಅಂದರು.

ಸಸ್ಯಾಹಾರವೆಂದರೆ ಸಸ್ಯಮೂಲದಿಂದ ಬಂದ ವಸ್ತುವಲ್ಲವೇ !? ಇದು ಕ್ಯಾರೇಟ್, ಟೊಮ್ಯಾಟೋ.. ಮೂಲಂಗಿ, ಮಾವು, ಬೇವು, ಸೊಪ್ಪು ಈ ರೀತಿ ಭೂಮಿಯಿಂದ ಬೆಳೆದ ವಸ್ತುಗಳೇ? ಎಂದು ಕೇಳಿದೆ. ಹೌದಲ್ಲ ಸಾರ್. ಸಸ್ಯಾಹಾರ ಅಲ್ಲ.!! ಹಾಗಿದ್ರೆ ಮಾಂಸಾಹಾರವೇ? ಎಂದು ಮುಂದುವರೆದೆ. ವಿದ್ಯಾರ್ಥಿಗಳು ಒಕ್ಕೊರಳಿನಿಂದ ಅಲ್ಲ. ಎಲ್ಲಾ….. ಸಾರ್ ಅಂದ್ರು. ಅಲ್ಲಪ್ಪಾ!!.. ಹಾಲು ಸಸ್ಯಾಹಾರ ಅಲ್ಲ.

ಅಂದರೆ ಅದು ಪ್ರಾಣಿಯ ಜೀವಂತ ಜೀವಕೋಶಗಳು ಅದರಲ್ಲಿ ಇಲ್ಲವೇ? . ಪ್ರಾಣಿಯ ದೇಹದ ಕೆಚ್ಚಲಿನಲ್ಲಿ ಉತ್ಪನ್ನವಾದ ಮತ್ತು ಪ್ರಾಣಿಯ ದೇಹದಿಂದ ಬಂದಿದ್ದು ಅಂದರೆ ಅದು ಮಾಂಸಾಹಾರ! ಅಲ್ಲವೇ ? ಎಂದು ಪ್ರಶ್ನಿಸಿದೆ. ತಲ ತಲಾಂತರದಿಂದ ಬಂದ ನಂಬಿಕೆಯ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದ ಹಾಗೇ ಕೆಲವು “ಹಾಲಾಹಾರಿಗಳು” ಹೌಹಾರಿ ಬಿದ್ದರು.

ಮೂಲತ: ಮಾಂಸಾಹಾರಿಯಾದ ಮತ್ತು ಮನೆಯಲ್ಲಿ ಸಸ್ಯಾಹಾರಿಯಾಗಿದ್ದು ಹಾಸ್ಟೆಲ್ನಲ್ಲಿ ಕಾಲಕಾಲಕ್ಕೆ ತಕ್ಕಂತೆ “ಸೀಸನಲ್” ಮಾಂಸಾಹಾರಿಯಾದ ಕೆಲವು ವಿದ್ಯಾರ್ಥಿಗಳು ಈ “ಹಾಲಾಹಾರಿ” ಗಳನ್ನು ಮನಸ್ಸಿಗೆ ಬಂದಂತೆ ಟೀಕಿಸತೊಡಗಿದರು.

ನಮ್ಮ ಸಮಾಜದಲ್ಲೂ ಸಹ ಮನೆಯವರಿಗೆ, ಸಂಪ್ರದಾಯಕ್ಕೆ, ಹೆಂಡತಿಗೆ ಹೆದರಿ ಸಭೆ ಸಮ್ಮೇಳನದಲ್ಲಿ ಗುಟ್ಟಾಗಿ “ಸೀಸನಲ್” ಮಾಂಸಾಹಾರಿಯಾಗುವ ಮತ್ತು ಅಲ್ಕೋಹಾಲ್ ಸಹವಾಸ ಮಾಡುವ ಎಲ್ಲರಿಗೂ ಸಹ ಈ ಮಾತು ಅನ್ವಯ. ಹಾಗಿದ್ರೆ ಹಾಲು ಸಸ್ಯಾಹಾರವೂ ಅಲ್ಲಾ.. ಮಾಂಸಾಹಾರವೂ ಅಲ್ಲ. ಮತ್ತೇನು ಇದು? ಎಂದು ಪ್ರಶ್ನೆ ಹಾಕಿದೆ.

ಮಾಂಸವೆಂದರೆ ಬಹುಜೀವಕೋಶಗಳ ಗುಚ್ಚವನ್ನು ಹೊಂದಿದ, ಅಸ್ಥಿಪಂಜರಕ್ಕೆ ಅಂಟಿಕೊಂಡ ಒಂದು ಅಂಗಾಂಶ. ಅದನ್ನು ಪ್ರಾಣಿಗಳಿಂದ ತೆಗೆದು ತಿಂದರೆ ಅದು ಮಾಂಸಾಹಾರ. ಹಾಲು ಅಂತಹ ವಸ್ತುವೇ? ಎಂದು ಪ್ರಶ್ನಿಸಿದೆ. ಖಂಡಿತಾ ಅಲ್ಲ ಸಾರ್ ಎಂದು ಒಕ್ಕೊರಳ ಉತ್ತರ ಬಂದಿತು.

ಮಾಂಸವೆಂದರೆ ಪ್ರಾಣಿ ಸತ್ತ ಮೇಲೆ ಅಥವಾ ಪ್ರಾಣಿಯನ್ನು ಸಾಯಿಸಿ ಅದರ ಅಂಗಗಳನ್ನು ಉಪ್ಪು ಕಾರ ಹಾಕಿ ಬೇಯಿಸಿ ತಿನ್ನುವುದಲ್ಲವೇ? ಸತ್ತ ಮೇಲೆ ಪ್ರಾಣಿಯು ಶರೀರವನ್ನು ಶವ ಅಥವಾ ಕಳೆಬರಹ ಅಥವಾ ಹೆಣ ಅಂತ ಕರೆಯಬಹುದಲ್ಲವೇ? ಹಾಗಿದ್ದರೆ ಮಾಂಸಾಹಾರಿಗಳು “ಶವ ಮಾಂಸ ಭಕ್ಷಕರೆ ? ಹೆಣ ತಿನ್ನುವವರೆ? ಕಳೆಬರಹ ಬೇಯಿಸಿ ತಿನ್ನುವವರೇ? ಇತ್ಯಾದಿ ತರಲೆ ಪ್ರಶ್ನೆಗಳು ತೂರಿ ಬಂದವು.

ಮಾಂಸಾಹಾರಿಗಳನ್ನು ಈವತ್ತಿನ ” ಕೋಳಿ ಶವ ಮಾಂಸ ಭಕ್ಷಣೆ” ಕಾರ್ಯ ಸಸೂತ್ರವಾಗಿ ಮುಗಿಯಿತೆ!? ಎಂದು ಕೇಳಿದರೆ ಗೂಸಾ ಖಚಿತ. ಅಥವಾ ಚಿಕನ್ ಮಂಚೂರಿಯನ್ನು “ಮಸಾಲೆ ಪೂರಿತ ಕೋಳಿ ಶವ ಮಾಂಸದ ಖಾದ್ಯ” ಎನ್ನಬಹುದಾದರೆ ಮಟನ್ ಬಿರ್ಯಾನಿಯನ್ನು “ ಬೇಯಿಸಿದ ಕುರಿ ಶವ ಮಾಂಸದ ಅನ್ನ ಖಾದ್ಯ” ಅನ್ನಬಹುದೇನೋ? ಇತ್ಯಾದಿ ಸಲಹೆಗಳು “ಸಸ್ಯಾಹಾರಿ” ವಿದ್ಯಾರ್ಥಿಗಳಿಂದ ಬಂದು “ಮಾಂಸಾಹಾರಿ” ವಿದ್ಯಾರ್ಥಿಗಳನ್ನು ಕೆರಳಿಸಿದವು.

ಮೊಟ್ಟೆ ಸಸ್ಯಾಹಾರವೇ? ಮಾಂಸಾಹಾರವೇ? ಎಂದು ಇನ್ನೂ ಗಲಿಬಿಲಿಗೊಳಿಸಿದೆ. ಹೌದಲ್ಲ !!. ಮೊಟ್ಟೆಯೂ ಸಹ ಸಸ್ಯಾಹಾರಿ ಅಥವಾ ಮಾಂಸಾಹಾರಿ ವಸ್ತು ಅಲ್ಲ.. ಮತ್ತೇನಿದು? ಸ್ವಲ್ಪ ಹೊತ್ತು ತರಗತಿಯಲ್ಲಿ ನೀರವ ಮೌನ. ಅವರಲ್ಲೇ ಗುಜು..ಗುಜು.. ಚರ್ಚೆ ಪ್ರಾರಂಭವಾಯ್ತು.

ಹಾಲು ಮತ್ತು ಮೊಟ್ಟೆ ಸಸ್ಯಾಹಾರವೂ ಅಲ್ಲ.. ಮಾಂಸಾಹಾರವೂ ಅಲ್ಲ.. “ಪ್ರಾಣಿಜನ್ಯ ಶಾಖಾಹಾರಿ” ವಸ್ತು ಅನ್ನಬಹುದೇ? ಅಂದೆ. ಇದು ಸರಿ ಸಾರ್ ಅಂದ್ರು. ಎರಡೂ ಪಾರ್ಟಿಗಳಿಗೂ ತಾತ್ಕಾಲಿಕ ಮಾತಿನ ಸಮರ ನಿಂತು ತರಗತಿ ತಹಬಂದಿಗೆ ಬಂತು.

ಸ್ವಲ್ಪ ವೈಜ್ಞಾನಿಕ ವಿಚಾರಕ್ಕೆ ಬರೋಣ. ಒಂದು ಲೀಟರ್ ಹಾಲಿನಲ್ಲಿ ಸರಾಸರಿ 850 ಗ್ರಾಂ ನೀರು, 50 ಗ್ರಾಂ ಲ್ಯಾಕ್ಟೋಸ್, 50 ಗ್ರಾಮ್ ಕೊಬ್ಬು, 40 ಗ್ರಾಂ ಪ್ರೋಟೀನ್, 10 ಗ್ರಾಂ ಖನಿಜಗಳು, ಜೀವಸತ್ವಗಳು ಮತ್ತಿತರ ಘನ ವಸ್ತುಗಳಿರುತ್ತವೆ. ಈ ಒಂದು ಲೀಟರ್ ಹಾಲನ್ನು ಉತ್ಪಾದಿಸಲು ಕೆಚ್ಚಲಿನ ಹಾಲು ಉತ್ಪಾದಿಸಲೆಂದೇ ಇರುವ ವಿಶೇಷ ಜೀವಕೋಶದ ಮೂಲಕ ಸುಮಾರು 400 ಲೀಟರ್ ರಕ್ತದ ಪರಿಚಲನೆಯಾಗಿ ಈ ಎಲ್ಲ ವಸ್ತುಗಳನ್ನು ಪೂರೈಸಬೇಕಾಗುತ್ತದೆ.

ಅಂದರೆ ಪ್ರತಿದಿನ ಸುಮಾರು 20ಲೀಟರ್ ಹಾಲು ಉತ್ಪಾದಿಸುವ ಹಸುವಿನ ಕೆಚ್ಚಲಿನಲ್ಲಿ 8000 ಲೀಟರ್ ರಕ್ತದ ಪರಿಚಲನೆಯಾಗುತ್ತದೆ. ಪ್ರತಿ ಮಿಲಿ ಹಾಲಿನಲ್ಲಿ ಸುಮಾರು 2 ಲಕ್ಷ ಕೆಚ್ಚಲಿನ ಪದರದ ಜೀವಂತ ಜೀವಕೋಶಗಳು ಬರುತ್ತವೆ ಎಂದರೆ ಕೆಲವರಿಗೆ ಆಶ್ಚರ್ಯವಾದರೂ ಸಹ ಸತ್ಯ. ಇವುಗಳಿಗೆ ಸೊಮ್ಯಾಟಿಕ್ ಸೆಲ್ ಗಳೆಂದೂ ಕರೆಯುತ್ತಾರೆ.

ಕೆಚ್ಚಲು ಬಾವಿನಂತಹ ಖಾಯಿಲೆಗಳನ್ನು ಪತ್ತೆ ಮಾಡುವಾಗ ಇವುಗಳ ಸಂಖ್ಯೆ 10 ಪಟ್ಟು ಜಾಸ್ತಿಯಾಗುವುದರಿಂದ ಇವುಗಳನ್ನು ಮಾಪಕವಾಗಿಯೂ ಸಹ ಬಳಸುತ್ತಾರೆ.ಹಾಲನ್ನು ಸೇವಿಸಿದಾಗ ಇವುಗಳ ಸೇವನೆಯೂ ಅನಿವಾರ್ಯ. ಭಾರತದಲ್ಲಿ ಹಾಲನ್ನು ಬಿಸಿಮಾಡಿ ಅಥವಾ ಕುದಿಸಿ ಕುಡಿಯುವುದರಿಂದ ಇದನ್ನು “ಶಾಖಾಹಾರ” ಅಂದರೆ ಬೇಯಿಸಿ ತಿನ್ನುವ ಅಹಾರವೆನ್ನಬಹುದು. ಅಂದರೆ ಹಾಲಿಗೆ “ಪ್ರಾಣಿಜನ್ಯ ಶಾಖಾಹಾರ”ವೆನ್ನಬಹುದೇ ಹೊರತು ಸಸ್ಯಾಹಾರವಾಗಲು ಸಾಧ್ಯವೇ ಇಲ್ಲ!!.

ಇನ್ನೂ ಮುಂದಕ್ಕೆ ಹೋಗಿ ಹೇಳಬೇಕೆಂದರೆ, ಹಾಲಿನಲ್ಲಿ ಲಕ್ಷಾಂತರ ಪ್ರಾಣಿ ಜೀವಕೋಶಗಳಿದ್ದರೆ, ಕೋಳಿಯಿಂದ ಸಿಗುವ ಮೊಟ್ಟೆ ಏಕಜೀವಕೋಶದಿಂದ ಬಂದಿರುವ ವಸ್ತು. ಮೊಟ್ಟೆಯನ್ನು ಗಂಡುಕೋಳಿಯ ಸಂಪರ್ಕವಿಲ್ಲದೇ ಪಡೆಯುವುದರಿಂದ ಈ ಏಕಜೀವಕೋಶದ ವಸ್ತುವನ್ನು “ಪಕ್ಷಿಜನ್ಯ ಶಾಖಾಹಾರ” ವೆಂದು ಕರೆಯಬಹುದೇನೋ? ಇದು ವಿಚಾರ ಮಾಡುವ ವಿಷಯ.

ತಿನ್ನುವ ವಸ್ತುವಿನ ಆಯ್ಕೆ ಆಯಾ ಮನುಜನ ಹಕ್ಕು ಮತ್ತು ಆತನ ಸಂಪ್ರದಾಯದಂತೆ ಇಚ್ಚೆ ಕೂಡಾ. ಹಾಲನ್ನು ಸಸ್ಯಾಹಾರಿ ಪದಾರ್ಥ ಎನ್ನುವವರು ಅದೇ ಅರ್ಥದಲ್ಲಿ ಮೊಟ್ಟೆಯನ್ನೂ ಸಹ ಸಸ್ಯಾಹಾರ ಎಂದು ಅನಿವಾರ್ಯವಾಗಿ ಒಪ್ಪಲೇ ಬೇಕು.

ಹೊಟೇಲುಗಳಲ್ಲಿ ಗೋಬಿ ಮಂಚೂರಿಯನ್ನು ಇಷ್ಟ ಪಟ್ಟು ಚಪ್ಪರಿಸಿಕೊಂಡು ತಿನ್ನುವ ಅನೇಕರು ಅಣಬೆಯಿಂದ ಮಾಡಿದ “ಮಶ್ರೂಮ್ ಮಂಚೂರಿ”ಯನ್ನು ಸಸ್ಯಾಹಾರವಲ್ಲ ಎಂದು ತಿನ್ನುವುದಿಲ್ಲ. ಅಣಬೆ ತಿಂದರೆ ಮಾಂಸ ತಿಂದಂತೆ ಎಂದು ಅವರ ಅಂಬೋಣ. ಅಣಬೆ ಒಂದು ಶಿಲೀಂದ್ರ ವರ್ಗಕ್ಕೆ ಸೇರಿದ ವಸ್ತು. ಶಿಲೀಂದ್ರ ಸಸ್ಯವಲ್ಲ. ಹಾಗೆಯೇ ಅದು ಪ್ರಾಣಿಣಿಜನ್ಯವೂ ಅಲ್ಲ ಅಥವಾ ಈ ಮೊದಲು ತಿಳಿಸಿದಂತೆ ಮಾಂಸಾಹಾರವೂ ಅಲ್ಲ. ಇದನ್ನು “ಶಾಖಾಹಾರ” ಎಂದು ಕರೆಯಬಹುದು.

ಮುಂದಿನ ಪ್ರಶ್ನೆ ಜೇನುತುಪ್ಪ ಸಸ್ಯಾಹಾರಿಯೇ? ಮೇಲ್ನೋಟಕ್ಕೆ ಇದು ಸಸ್ಯಗಳ ಮಕರಂದದ ಮೂಲದ ವಸ್ತುವಾಗಿ ನಿಜ ಅನ್ನಿಸಿದರೂ ಸಹ, ಜೇನು ತುಪ್ಪ ಜೇನುಹುಳಗಳು ಕಷ್ಠಪಟ್ಟು ಹೂವಿನ ಮಕರಂದವನ್ನು ಅವುಗಳ ಬಾಯಿಯಲ್ಲಿ ಹೀರಿಕೊಂಡು ಬಂದು ಜೇನುಗೂಡಿನಲ್ಲಿ ಇರುವ ಇದಕ್ಕೆಂದೇ ಸಿದ್ಧ ಪಡಿಸಿರುವ ಕೋಶದಲ್ಲಿ ಹಾಕುತ್ತವೆ.

ಇದಕ್ಕೆ ಸತತವಾಗಿ ಅವುಗಳ ರೆಕ್ಕೆಗಳ ಮೂಲಕ ಹಾಕುವ ಗಾಳಿಯ ಮೂಲಕ ಮಕರಂದವನ್ನು ಸಿಹಿಯಾದ ಸುವಾಸನಾ ಯುಕ್ತ ಜೇನುತುಪ್ಪವಾಗಿ ಪರಿವರ್ತಿಸುತ್ತವೆ. ಜೇನುಹುಳಗಳ ಎಂಜಲಿನಿಂದ ಕಲುಷಿತವಾದ ವಸ್ತು ಸಸ್ಯಾಹಾರಿ ಆಗಲು ಸಾಧ್ಯವೇ? ಸಾಧ್ಯವಿಲ್ಲ ಅಲ್ಲವೇ?.

ಇತ್ತೀಚೆಗೆ ಕೆಲವರಲ್ಲಿ “ವೆಗಾನ್” ಪದ್ದತಿಯ ಅಹಾರ ಪದ್ಧತಿ ರೂಢಿಯಲ್ಲಿದೆ. ವೆಗಾನ್ ಅಂದರೆ ಪ್ರಾಣಿ ಅಥವಾ ಕೀಟಮೂಲದ ಯಾವುದೇ ವಸ್ತುಗಳನ್ನು ಹಿಂಸಿಸಿ ಪಡೆಯುವ ಅಹಾರವನ್ನು ತಿನ್ನದೇ ಇರುವುದು. ಇದರಲ್ಲಿ ಹಾಲು, ಮೊಟ್ಟೆ, ಮಾಂಸ, ಜೇನು ತುಪ್ಪ ಇತ್ಯಾದಿ ಅನೇಕ ವಸ್ತುಗಳು ಸೇರುತ್ತವೆ. ಕಠಿಣ ಸಸ್ಯಾಹಾರಿಗಳಾದ ದಿಗಂಬರ ಜೈನ ಮುನಿಗಳು ಸಹ ಈ ರೀತಿಯ ಆಹಾರ ಪದ್ಧತಿ ಅನುಸರಿಸುತ್ತಾರೆ ಎನ್ನುತ್ತಾರೆ.

ಅಹಾರ ಪದ್ದತಿ ಅವರವರ ಪರಂಪರೆ, ಜಾತಿ, ಕುಲ ಇನ್ನೂ ಅನೇಕ ಸಂಕಿರಣ ಸಾಮಾಜಿಕ ಹಿನ್ನೆಲೆಯಲ್ಲಿ ಜೀವನದಲ್ಲಿ ಅಡಕವಾಗಿರುವ ಅಂಶ ಮತ್ತು ತೀರಾ ವೈಯಕ್ತಿಕ ವಿಷಯ. ಯಾವ ಅಹಾರ ಪದ್ದತಿಯಾದರೇನು? ಸರಿಯಾದ ಸಮಯದಲ್ಲಿ, ಶುಚಿಯಾದ, ರುಚಿಯಾದ, ಕಡಿಮೆ ಮಸಾಲೆ, ಕಡಿಮೆ ಕೊಬ್ಬು ಇರುವ ಆರೋಗ್ಯಕಾರಿ ಅಹಾರವನ್ನೇ ಹಿತಮಿತವಾಗಿ ಸೇವಿಸಿ ಆರೋಗ್ಯವಂತರಾಗಿರುವುದೇ ಮುಖ್ಯ. ಏನಂತೀರಿ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂಕಣ

Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?

Published

on

indian birthwort, Aristolochia tagala

‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.

ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:

ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?

ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.

‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?

ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.

ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.

ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Continue Reading

ದಿನದ ಸುದ್ದಿ

ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ

Published

on

ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.

ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.

ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending