Connect with us

ದಿನದ ಸುದ್ದಿ

ದೆಹಲಿ‌ ಸಿಎಂ ಅರವಿಂದ್ ಕೇಜ್ರಿವಾಲರನ್ನು ಅವಹೇಳಿಸಿ ಶೂ ಖರೀದಿಸಲು ಹಣ ಕಳಿಸಿದ ಇಂಜಿನಿಯರ್ ಗೆ ಅವರು ಕೊಟ್ಟ ಉತ್ತರ..! : ಮಿಸ್ ಮಾಡ್ದೆ ಓದಿ

Published

on

  • ಮೂಲ : ಮಲಯಾಳ, ಕನ್ನಡಕ್ಕೆ: ರಶೀದ್ ಅಬ್ದುಲ್ ಹಮೀದ್ (HA ) ಕಕ್ಕಿಂಜೆ

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರನ್ನು ಅವಹೇಳಿಸಿ ಅವರಿಗೆ ಶೂ ಖರೀದಿಸಲು 364 ರೂ ಕಳಿಸಿ ಫೇಸ್ಬುಕ್ ಪೋಸ್ಟ್ ಮಾಡಿದ ಇಂಜಿನಿಯರ್ ಗೆ ಕೇಜ್ರಿವಾಲರು ನೀಡಿದ ಉತ್ತರ.

ಪ್ರಿಯ ಇಂಜಿನಿಯರ್ ಗೆಳೆಯಾ,

“ತಾವು ಕಳಿಸಿದ ಹಣ ತಲುಪಿದೆ. ಅದರಲ್ಲಿ ಒಂದು ಜೊತೆ ಶೂ ಖರೀದಿಸಿದೆ. ನಿಮಗೆ ತಿಳಿದಿರುವ ಹಾಗೆ ನಮ್ಮ ರೂಪಾಯಿ ಮೌಲ್ಯವು ಪಾತಾಳಕ್ಕೆ ಇಳಿದಿರುವೂದರಿಂದ 364 ರುಪಾಯಿಗೆ ಅಷ್ಟೇನೂ ಉತ್ತಮ ಶೂ ಸಿಗಲಿಲ್ಲ. ನಾನು ಆಫೀಸಿಗೆ ಶೂ ಉಪಯೋಗಿಸುವುದಿಲ್ಲ. ಹಾಗಾಗಿ ಬೆಳಗ್ಗೆ ಜಾಗಿಂಗ್ ಹೋಗುವಾಗ ಇದನ್ನು ಉಪಯೋಗಿಸುವೆ. ನಿಮ್ಮ ಸಹೃದಯಿ ಮನಸ್ಸಿಗೆ ಕೃತಜ್ಞತೆಗಳು.

ನಿಮ್ಮಂತಹ ರಾಷ್ಟ್ರದ ಬಗ್ಗೆ ಚಿಂತಿಸುವ ಯುವಜನತೆ ನಮ್ಮ ರಾಷ್ಟ್ರದ ಬಲು ದೊಡ್ಡ ಶಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ನಮ್ಮ ರಾಷ್ಟ್ರದ ಪ್ರಧಾನಿ ವಿದೇಶಗಳಿಗೆ ತೆರಳಿ ಭಾರತದಲ್ಲಿ ಜನಿಸಿದ್ದು ಕೂಡ ಅಪಮಾನವಾಯಿತು ಎನ್ನುವಂತಹ ಮಾತುಗಳನ್ನು ಆಡುವುದು, ರಾಷ್ಟ್ರ ಗೀತೆಗೆ ಗೌರವ ಸಲ್ಲಿಸದೆ ನಡೆಯುವುದು, ಹೆಮ್ಮೆಯ ಬಾವುಟದ ಮೇಲೆ ಸಹಿ ಹಾಕುವುದನ್ನು ನೋಡಿಯೂ ನೋಡದಂತೆ ನಟಿಸಬಾರದು.

ಒಬ್ಬ ಮುಖ್ಯಮಂತ್ರಿಯ ಚಪ್ಪಲನ್ನು ಗುರುತು ಮಾಡಿದ ತಾವು 40.36% ಇರುವ ನಿರ್ಗತಿಕ ಮತ್ತು, ‘ಭಾರತದ ಸ್ವರ್ಗ’ ಎಂದು ಬಿಂಬಿಸುವ ಗುಜರಾತಿನಲ್ಲಿ ಕೂಡ 62.78 % ಜನರು ತಮ್ಮ ಪ್ರಾಥಮಿಕ ಕಾರ್ಯಗಳನ್ನು ಬಯಲು ಪ್ರದೇಶದಲ್ಲಿ ಮಾಡುವುದು, ದೈನಂದಿನ ಒಂದು ಹೊತ್ತಿನ ತುತ್ತಿಗಾಗಿ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುವುದು, ಭ್ರಷ್ಟಾಚಾರ ದಿನನಿತ್ಯ ನಡೆಯುವುದು, ಜಾತಿ ಮತದ ಹೆಸರಲ್ಲಿ ತಮ್ಮೊಳಗೆ ಜಗಳ ತಂದಿಕ್ಕಿ ISIS ನಂತಹ ಸಂಘಟನೆಗಳು ಮೊಳಕೆಯೊಡೆಯುವುದು, ಜೀವಿಸಲು ಅತ್ಯಗತ್ಯ ಸಾಮಾನುಗಳ ಬೆಲೆ ಗಗನಕ್ಕೆ ಏರುವುದು ಮಾತ್ರವಲ್ಲ ಸೈನಿಕರು ಸಾವನ್ನಪ್ಪುವುದು ಕಂಡಿಲ್ಲ ಎಂಬಂತೆ ತಾವು ನಟಿಸಬಾರದು.

ನಿಮಗಿದು ಗೊತ್ತೇ ?? ನಾನು ಕೂಡ ಒಬ್ಬ ಇಂಜಿನಿಯರ್ ನ ಮಗನಾಗಿದ್ದೇನೆ, ಅಲ್ಲದೆ IIT ಯವನೂ ಅಲ್ಲದೆ IRS, ಮತ್ತು ಒಬ್ಬ ಆದಾಯ ತೆರಿಗೆ ಉದ್ಯೋಗಸ್ತೆಯ ಪತಿಯಾಗಿದ್ದೇನೆ, ಆರ್ಥಿಕವಾಗಿ ಒಂದು ಉತ್ತಮ ಕುಟುಂಬ, ಆದರೂ ವಿದ್ಯಾಬ್ಯಾಸದಲ್ಲಿ ಮತ್ತು ಉದ್ಯೋಗದಲ್ಲಿ ನಾನು ಒಮ್ಮೆಯೂ ನಮ್ಮ ರಾಜಕೀಯ ನೇತಾರರನ್ನು ಅವರ ವೇಷದಲ್ಲಿ ಅಲ್ಲ ಅವರು ಮಾಡುವ ಕೆಲಸದಲ್ಲಿ ಗಮನ ನೀಡಿದವನಾಗಿದ್ದೇನೆ. ಇಂದಿರಾ ಗಾಂಧಿಯವರ ಬಿಳಿ ಕೂದಲೊ ದೇವೇಗೌಡರ ಕೂದಲಿಲ್ಲದ ತಲೆಯೋ ನನ್ನ ಗಮನಕ್ಕೆ ಬಂದಿಲ್ಲ, ಅಲ್ಲದೆ ಅವರು ನೇತಾರರಾಗಿರುವ ಸಮಯದಲ್ಲಿ ನಮ್ಮ ರಾಷ್ಟ್ರದ ಜನಜೀವನ ರೀತಿ ಹೇಗಿದೆ ಎಂಬುದರಲ್ಲಾಗಿತ್ತು ನನ್ನ ಗಮನ ಮತ್ತು ನೋಟ.

ಭಿಕ್ಷೆ ಬೇಡುವ ಮಕ್ಕಳು, ಅವರ ಪಾಲನೆಗಾಗಿ ಶರೀರ ಮಾರುವ ತಾಯಂದಿರು, ಆದಾಗ್ಯೂ ಬಡತನ ತಡೆಯಲಾರದೆ ಆತ್ಮಹತ್ಯೆ ನಡೆಸುವ ತಂದೆಯಂದಿರು, ನಮ್ಮ ದೇಶದ ಈ ವ್ಯವಸ್ಥೆಯಾಗಿದೆ ಬಲು ದೊಡ್ಡ ಅವಮಾನ ಎಂದು ಹೇಳಲು ನನಗೆ ನಿರಾಶೆ ಇದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ನಾನು ಚಿಂತಿಸಿದೆ.

ಅದಕ್ಕಾಗಿ ನಾನು ನನ್ನ ಉದ್ಯೋಗಕ್ಕೆ ರಾಜಿ ಕೊಟ್ಟೆ, ಜನರ ನಡುವೆ ಇಳಿದು ಕೆಲಸ ಮಾಡಿದೆ, ಅದರ ಪ್ರತಿಫಲ ತಿಳಿಯಲು ಆರಂಭಿಸಿತು, ಜನರು ನನ್ನೊಂದಿಗೆ ನಿಂತರು ಚುನಾವಣೆಯಲ್ಲಿ ಅವರು ನನ್ನ ಗುರುತನ್ನು ಪ್ರದರ್ಶಿಸಿದರು, ಇಂದು ನನಗೆ ಅವರ ಕನಸುಗಳನ್ನು ನನಸು ಗೊಳಿಸುವ ಕೆಲಸದಲ್ಲಿ ನಿರತನಾಗಿದ್ದೇನೆ ಆದೂದರಿಂದ ನಾನದನ್ನು ಮರೆತೆ, ಕೋಟ್ಟು ಸೂಟು ಕನ್ನಡಕ ಹಾಕಿ ಸುತ್ತಬೇಕು ಎಂದೂ ವಿದೇಶಗಳಲ್ಲಿ ಹೋಗಿ ಸೆಲ್ಫಿ ತೆಗೆಯಬೇಕೆಂದು.

ಇಂಜಿನಿಯರ್ ಆದಾಗ ನಿಮಗೆ ಮುಖ್ಯಮಂತ್ರಿಯರ ಚಪ್ಪಲ್ ಒಂದು ಕೊರತೆಯಾಗಿ ಕಂಡಿತು, ತಾವು ಅದಕ್ಕೆ ಪರಿಹಾರ ಕಂಡು ಹಿಡಿದಿರಿ ಮೊದಲಾಗಿ ಅದನ್ನು ನಾನು ಅಭಿನಂದಿಸುತ್ತೇನೆ.ಆದರೆ ನಾನು ಇಂಜಿನಿಯರ್ ಆದಾಗ ನಮ್ಮ ರಾಷ್ಟ್ರದ ಏನೆಲ್ಲ ಕೊರತೆಗಳು ಎಂದು ನನ್ನ ಸ್ವರಾಜ್ ಎಂಬ ಪುಸ್ತಕದಲ್ಲಿದೆ, ಅದರಲ್ಲಿ ಹೇಳುವ ಕೊರತೆಗಳನ್ನ ಪರಿಹರಿಸಲು ನಿಮ್ಮ ಸಹಾಯ ಖಂಡಿತ ಬೇಕೆಂದು ನಿರೀಕ್ಷಿಸುತ್ತಾ..”

ನಿಮ್ಮವನೇ ಆದ ಅರವಿಂದ್ ಕೇಜ್ರಿವಾಲ್

ಒಳಿತನ್ನು ಹೇಳಲು ರಾಜಕೀಯ ನೋಡಬೇಕಾಗಿಲ್ಲ.”

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ. ಈ ಬಾರಿಯೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 90.91 ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 20,810 ವಿದ್ಯಾರ್ಥಿಗಳ ಪೈಕಿ 16,046 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡ 77.11 ರಷ್ಟು ಹಾಗೂ ಹೊಸದಾಗಿ ಪರೀಕ್ಷೆ ಬರೆದ (Freshers) 18,949 ವಿದ್ಯಾರ್ಥಿಗಳಲ್ಲಿ 15,540 ಮಂದಿ ಉತ್ತೀರ್ಣರಾಗಿದ್ದಾರೆ ಶೇಕಡ 82.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶದ ವಿಶ್ಲೇಷಣೆ

ವಿಜ್ಞಾನ ವಿಭಾಗ (Science): ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಈ ವಿಭಾಗದಲ್ಲಿ ದಾಖಲಾಗಿದೆ. ಒಟ್ಟು 12,536 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,936 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 87.24). ಹೊಸ ವಿದ್ಯಾರ್ಥಿಗಳ ಪೈಕಿ 11,770 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,736 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 90.91 ರಷ್ಟು ಅದ್ಭುತ ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗ (Commerce)

ಈ ವಿಭಾಗದಲ್ಲಿ ಹಾಜರಾದ 4,295 ವಿದ್ಯಾರ್ಥಿಗಳಲ್ಲಿ 3,075 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 71.59). ಹೊಸ ವಿದ್ಯಾರ್ಥಿಗಳ ಪೈಕಿ 3858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2960 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 76.72 ರಷ್ಟು ಫಲಿತಾಂಶ ಬಂದಿದೆ.

ಕಲಾ ವಿಭಾಗ (Arts): ಕಲಾ ವಿಭಾಗದಲ್ಲಿ ಒಟ್ಟು 3,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,035 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 51.14). ಹೊಸ ವಿದ್ಯಾರ್ಥಿಗಳ ಪೈಕಿ 3321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1880 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 56.61 ರಷ್ಟು ಫಲಿತಾಂಶ ಬಂದಿದೆ.

ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಮತ್ತು ಕಲಾ ವಿಭಾಗಗಳು ನಂತರದ ಸ್ಥಾನ ಪಡೆದಿವೆ ಎಂದು ಉಪ ನಿರ್ದೇಶಕ ಪಳಿನಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ.

ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಯ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆಯು ಸುಗಮವಾಗಿ ಜರುಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ

Published

on

ಸುದ್ದಿದಿನಡೆಸ್ಕ್:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದ ಮತಗಟ್ಟೆಯಲ್ಲಿ ತೃತೀಯ ಲಿಂಗತ್ವ ಮತದಾರರು ಮತಗಟ್ಟೆಗೆ ಆಗಮಿಸಿ ಸಂತೋಷದಿಂದ ಮತ ಚಲಾಯಿಸಿದರು.

ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಎಂಬ ಸಂದೇಶವನ್ನು ಸಾರಿದ ಕ್ಷಣ! ತಮ್ಮ ಅಮೂಲ್ಯ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿದ ತೃತೀಯ ಲಿಂಗತ್ವ ಮತದಾರರಿಗೆ ಅಭಿನಂದನೆಗಳು ಎಂದು ಜಿಲ್ಲಾ ಪಂಚಾಯತ್ ಸಿಇಓ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending