ಕ್ರೀಡೆ
ಓಟದ ರಾಣಿ ಹಿಮಾದಾಸ್ | ಅಪ್ಪನ ಗದ್ದೆಯ ಕಡೆಯ ಹಾದಿಗಳೇ ಈಕೆಯ ‘ಓಟದ ಟ್ರಾಕ್’ಗಳಾದವು

•ಹಿಮಾದಾಸ್ ಸಾಧನೆಗೆ 10 ಲಕ್ಷ ಬಹುಮಾನ ಘೋಷಿಸಿದ ಪರಂ
ಆ ರೈತನ ಮಗಳು ಓದುತ್ತಿದ್ದ ಶಾಲೆಯ ದೈಹಿಕ ಶಿಕ್ಷಕಿಯು ಒಮ್ಮೆ ಆತನನ್ನು ಭೇಟಿ ಮಾಡಿ ‘ನಿಮ್ಮ ಮಗಳು ವಾಲಿಬಾಲ್ ಆಟದಲ್ಲಿಯೂ ಬಹಳ ಮುಂದಿದ್ದಾಳೆ ಹಾಗೆಯೇ ಓಟದಲ್ಲಿಯೂ ಕೂಡ, ಹೀಗಿದ್ದಾಗ ನೀವೇಕೆ ಈಕೆಗೆ ಅತ್ಯುತ್ತಮ ತರಬೇತಿ ಕೊಡಿಸಬಾರದು’ ಎಂಬ ಹೊಸ ಹುಳವನ್ನು ಬಿಟ್ಟಿದ್ದರು.
ಆದರೆ ಆ ಪ್ರತಿಭಾವಂತ ಮಗಳ ತಂದೆ ರೈತನಾಗಿ ಕಸುಬು ನಿರ್ವಹಿಸುತ್ತಿದ್ದ ರಂಜಿತ್ ದಾಸ್ ಎಂಬ ವ್ಯಕ್ತಿಗೆ ರೈತರಿಗೆ ಕಾಡುವ ಹಣಕಾಸಿನ ಸಮಸ್ಯೆಗಳು ಸಾಕಾಗುವಷ್ಟು ಇದ್ದವು ಜೊತೆಗೆ ಮನೆಯಲ್ಲಿದ್ದ ಆರು ಜನರನ್ನು ಸಾಕುವ ಜವಾಬ್ಧಾರಿ ಇತ್ತಾದರೂ,ಐದು ಜನ ಮಕ್ಕಳಲ್ಲಿ ಕೊನೆಯ ಪುಟಾಣಿಯಾದ ಪ್ರತಿಭಾವಂತ ಹುಡುಗಿಗೆ ತರಬೇತಿ ಕೊಡಿಸುವ ಕಡೆ ಯೋಚಿಸಿದನು ಆ ಪುಟಾಣಿ ಹುಡುಗಿಯ ಹೆಸರು ‘ಹಿಮ ದಾಸ್’.
ಮನೆಯಲ್ಲಿನ ಹಣಕಾಸಿನ ಸಮಸ್ಯೆಯಿಂದಾಗಿ ನೇರವಾಗಿ ಕೋಚ್ ಬಳಿ ಸೇರಲಾಗದೆ ಮೊದಲಿಗೆ ಅಪ್ಪನ ಗದ್ದೆಯ ಕಡೆಯ ಹಾದಿಗಳೇ ಈಕೆಯ ‘ಓಟದ ಟ್ರಾಕ್’ಗಳಾದವು,ಅವಳ ಮಿಂಚಿನ ಓಟದ ಛಾತಿಯನ್ನು ಗದ್ದೆಯ ಹಾದಿಗಳಲ್ಲಿ ನೋಡಿದ ರಂಜಿತ್ ದಾಸ್ ಗೆ ತನ್ನ ಮಗಳು ಹಿಮದಾಸ್ ಓಟದಲ್ಲಿ ಏನೋ ಒಂದನ್ನು ಸಾಧಿಸಿಯೇ ತೀರುತ್ತಾಳೆ ಎಂದೆನಿಸಿತು.
ಆ ದಿನಗಳಲ್ಲಿಯೇ ಈ ಹಿಮಾಸಿಂಗ್ ಗೌಹಾತಿಯ ಸ್ಟೇಟ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದಳು.
‘ಅಯ್ಯಯ್ಯಪ್ಪಾ….ಯಾವುದೇ ಅಂತರಾಷ್ಟ್ರೀಯ ಗುಣಮಟ್ಟದ ಬೇಸಿಕ್ ತರಬೇತಿ ಇಲ್ಲದ ಅಸ್ಸಾಮಿನ ಹಳ್ಳಿ ಹುಡುಗಿ ನೋಡ್ರೀ’ ಎಂದು ತನ್ನ ಮಗಳ ಕುರಿತು ಅಲ್ಲಿದ್ದ ಹಲವರು ಮಾತನಾಡಿದ್ದು ಕೇಳಿದ ಹಿಮಾ ಸಿಂಗಳ ಅಪ್ಪನಿಗೆ ‘ಅದೆಷ್ಟೇ ಕಷ್ಟವಾದರೂ ಸರಿ ತನ್ನ ಮಗಳಿಗೆ ಉತ್ತಮ ತರಬೇತಿ ಕೊಡಿಸಲೇಬೇಕು…”ಎಂದು ನಿರ್ಧರಿಸಿಬಿಟ್ಟನು ಆ ನಂತರ ಕಷ್ಟಪಟ್ಟು ಅಲ್ಲಿ ಇಲ್ಲಿ ಹಣ ಕೂಡಿಸಿ ರೆಜಿನಾ ಸ್ಟೇಡಿಯಂ ಗ್ರೂಪ್ ಸೇರಿಸಿದನು, ಅಲ್ಲಿ ಆಕೆ ಗುಣಮಟ್ಟದ ತರಬೇತಿ ಹೊಂದಿದಳು.
ಅಲ್ಲಿ ದೊರೆತ ಅತ್ಯುತ್ತಮ ತರಬೇತಿ ಆಕೆಯನ್ನು ಮತ್ತೂ ಅತ್ಯುತ್ತಮಗೊಳಿಸುತ್ತಾ ಹಾಗೆಯೇ ಆಗಾಗ ನಡೆಯುವ ಚಾಂಪಿಯನ್ ಶಿಪ್ಪುಗಳಲ್ಲಿ ಭಾಗವಹಿಸುತ್ತಾ ಪ್ರಶಸ್ತಿ ಗೆಲ್ಲುತ್ತಾ ಸಾಗಿದಳು.
ಅಂತೂ ಇಂತೂ ಅಪ್ಪ ಬಿದ್ದ ಪಡಿಪಾಟಲಿಗೆ ತಕ್ಕುನಾದ ಮೌಲ್ಯ ದೊರಕುವ ಸಂದರ್ಭ ಬಂದೇಬಿಟ್ಟಿತು,ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಟ್ರಾಕಿನ ನಾಲ್ಕನೇ ಸಾಲಿನಲ್ಲಿ ಓಡುತ್ತಿದ್ದಾಗ ಐದನೇ ಸಾಲಿನಲ್ಲಿ ರೊಮಾನಿಯಾದ ಆಂಡ್ರಿಯಾ ಮಿಕ್ಲೋಸ್ ಅವಳ ಪಕ್ಕದಲ್ಲಿ ಅಮೇರಿಕದ ಟೇಲರ್ ಮ್ಯಾಸನ್ ಓಡುತ್ತಿದ್ದಳು.
ಅಲ್ಲಿ ಹಾಜರಿದ್ದ ಓಟದ ಪಂಡಿತರೆಲ್ಲರೂ ಅಮೇರಿಕದ ಟೇಲರ್ ಮ್ಯಾಸನ್ನಳೇ ಚಿನ್ನ ಗೆಲ್ಲುತ್ತಾಳೆ ಎಂದಿದ್ದರು ಅವರ ಕವಡೆ ಭವಿಷ್ಯಕ್ಕೆ ತಕ್ಕಂತೆ ಏರ್ ಗನ್ ಢಂಮ್ಮೆಂದೊಡನೆ ಶುರುವಾದ ಓಟದಲ್ಲಿ ಅಮೇರಿಕದ ಟೇಲರ್ ಮ್ಯಾಸನ್ನಳೇ ಮುನ್ನೂರು ಮೀಟರುಗಳವರೆಗೆ ಚಿಮ್ಮೆಗರುತ್ತಾ ಮುಂದಿದ್ದಳು ಆದರೆ ಹಿಮಾಸಿಂಗ್ ಅಂದಿನ ಓಟದ ಜವಾಬ್ಧಾರಿ ನೆನೆದು ಹಠಕ್ಕೆ ಬಿದ್ದವಳಂತೆ ಮುನ್ನೂರು ಮೀಟರಿನ ನಂತರ ಕೊನೆಯಲ್ಲಂತೂ ಎಲ್ಲರನ್ನೂ ಹಿಂದಿಕ್ಕುತ್ತಾ ಟಾಪ್ ಗೇಯರಿನಲ್ಲಿ ಅತೀ ವೇಗದಿಂದ ಓಡಿಬಿಟ್ಟಳು ಅಂತೂ ಅಪ್ಪನಿಗಾಗಿ ಚಿನ್ನದ ಪದಕ ಗೆದ್ದುಬಿಟ್ಟಳು.
ಇಂದು ಬಂದ ಖ್ಯಾತಿ,ಹಣ,ಅಂತಸ್ತು ಎಲ್ಲಾ ಪಕ್ಕಕ್ಕಿಡಿ ! ಸಾಂಸಾರಿಕ ರಣಸಮಸ್ಯೆಗಳ ಹೋರಾಟದ ನಡುವೆಯೇ ಅಂತಹಾ ಹಠ ತೊಟ್ಟು ಮಗಳಿಗೆ ತರಬೇತಿ ಕೊಡಿಸಿ ಆಕೆಯನ್ನು ಈ ಮಟ್ಟಕ್ಕೇರಿಸಿದ ಖ್ಯಾತಿ,ಪ್ರೀತಿ,ಒಲುಮೆ ಇವೆಲ್ಲವೂ ಆ ಅಪ್ಪನಿಗೆ ಸೇರಬೇಕು .ಒಟ್ಟಿನಲ್ಲಿ ಅಪ್ಪನ ಕಂಗಳಲ್ಲಿ ಚಿನ್ನದ ಆನಂದಬಾಷ್ಪ ಮೂಡಿಸುವಲ್ಲಿ ಮಗಳು ಹಿಮದಾಸ್ ಯಶಸ್ವಿಯಾದಳು.
ಜಿ. ಪರಮೇಶ್ವರ್ ಬಹುಮಾನ ಘೋಷಿಸಿ ಟ್ವೀಟ್
The Grit and Perseverance displayed by @HimaDas8 is inspirational for thousands of aspiring sportspersons across India.
As a token of our appreciation, it is my pleasure to award you with a cash prize money of ₹10 lakh on behalf of Sri Siddhartha Academy of Higher Education.
— Dr. G Parameshwara (@DrParameshwara) July 14, 2018
ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಹಿಮಾದಾಸ್ ಗೆ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿರುವುದಾಗಿ ಟ್ಟೀಟ್ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ
ವಾಲಿಬಾಲ್ ಪಂದ್ಯಾವಳಿ | ಹೊಸದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ಸ್ಥಾನ

ಸುದ್ದಿದಿನ, ಹೊನ್ನಾಳಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾಳಿ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜುಗಳ ಪುರುಷ ಮತ್ತು ಮಹಿಳೆಯರ ಪಂದ್ಯಾವಳಿಯನ್ನುಇದೇ 17-18 ರಂದು ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗ ಪ್ರಥಮ ಸ್ಥಾನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ ದ್ವಿತೀಯ ಸ್ಥಾನ, ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ತೃತೀಯ ಸ್ಥಾನ, ಶ್ರೀ ಶಿವಲಿಂಗೇಶ್ವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಗಿರಿ ನಾಲ್ಕನೇ ಸ್ಥಾನವನ್ನು ಪಡೆದು ಕಾಲೇಜಿಗೆ ಮತ್ತು ವಿಶ್ವ ವಿದ್ಯಾನಿಲಯಕ್ಕೆ ಕೀರ್ತಿ ತಂದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಜಿ ಧನಂಜಯ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ಈ ಸಮಾರಂಭದಲ್ಲಿ ಪ್ರೊ. ಡಿ ಸಿ ಪಾಟೀಲ್, ಗ್ರಂಥಪಾಲಕರಾದ ಪ್ರೊ. ಎಂ ನಾಗರಾಜ ನಾಯ್ಕ ಕ್ರೀಡಾ ಆಯೋಜಕರಾದ ಡಾ. ಹರೀಶ ಪಿ ಎಸ್, ಬೆಳ್ಳುಳ್ಳಿ ಕೊಟ್ರೇಶ, ಹೆಚ್ ವಿ ಗೀತಾ, ಅಮೂಲ್ಯ ಆರ್ ಹೆಚ್, ಡಾ. ಮಂಜುನಾಥ ಗುರು ವಿ ಜಿ ದಾವಣಗೆರೆ ವಿಶ್ವವಿದ್ಯಾನಿಲಯ ಕ್ರೀಡಾಧಿಕಾರಿಗಳಾದ ಡಾ. ವೀರಪ್ಪ ಬಿ ಹೆಚ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಡಾ. ಚಂದ್ರಶೇಖರ್ ಸಿ, ಡಾ. ರೇಖಾ ಎಂ ಆರ್, ಗಿರೀಶ್ ಎಂ ಎಸ್, ಬಾಲಚಂದ್ರಣ್ಣ ಬಿ. ಆರ್. ಕಲ್ಲೇಶಪ್ಪ ಹರೀಶ್ ಕೆ ಎಂ , ತೀರ್ಪುಗಾರರಾದ ಆಶಿಕ್ ಮತ್ತು ಕಲೀಲ್, ಇಬ್ರಾಹಿಂ ಜಾಫರ್ ಮುಖ್ಯ ಮುಖ್ಯ ತೀರ್ಪುಗಾರರಾದ ಪರಮೇಶ್ವರಪ್ಪ ಮತ್ತು ನಮ್ಮ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಐಸಿಸಿ ವಿಶ್ವಕಪ್ ಕ್ರಿಕೆಟ್ | ಭಾರತ-ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ

ಸುದ್ದಿದಿನ, ಡಿಸ್ಕ್ : ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ನ ಮೊದಲ ಸೆಮಿಫೈನಲ್ ಪಂದ್ಯವು ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದೆ.
ಪಂದ್ಯವು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ಇದು ಎರಡನೇ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಹಿಂದೆ 2019ರಲ್ಲಿ ಈ ತಂಡಗಳು ಎದುರಾಗಿದ್ದವು. ವಾಂಖೆಡೆ ಕ್ರೀಡಾಂಗಣವು ಹೆಚ್ಚು ಸ್ಕೋರ್ ದಾಖಲಿಸಲು ಹೆಸರುವಾಸಿಯಾಗಿದ್ದು, ಈ ಹಿಂದೆ ನಡೆದ ಪಂದ್ಯಾವಳಿಯಲ್ಲಿ ಶ್ರೀಲಂಕಾ ಎದುರು ಆಕರ್ಷಕ 302 ರನ್ ಗಳನ್ನು ಕಲೆ ಹಾಕಿತ್ತು. ಎರಡನೇ ಸೆಮಿಫೈನಲ್ ಪಂದ್ಯವು ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಾಡಿದ್ದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಎರಡು ಪಂದ್ಯ

ಸುದ್ದಿದಿನ ಡೆಸ್ಕ್ : ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿವೆ. ಧರ್ಮಶಾಲಾದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.
ಎರಡನೇ ಪಂದ್ಯ ಹೈದರಾಬಾದ್ನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ-ಶ್ರೀಲಂಕಾ ತಂಡಗಳು ಸೆಣೆಸಲಿವೆ. ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
ಹೈದರಾಬಾದ್ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ, ನ್ಯೂಜಿಲೆಂಡ್ ತಂಡ ನೆದರ್ಲೆಂಡ್ ವಿರುದ್ದ 99 ರನ್ಗಳಿಂದ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತು. ನ್ಯೂಜಿಲೆಂಡ್ ಪರ ವಿಲ್ ಯಂಗ್ 70 , ಟಾಮ್ ಲಾಥಮ್
53 ಹಾಗೂ ರಚಿನ್ ರವೀಂದ್ರ 51 ರನ್ ಗಳಿಸಿದರು.
ನೆದರ್ಲೆಂಡ್ ಪರ ರೋಲೋಫ್ ವಾಂಡೆರ್ ಮೆರ್ವೆ, ಪೌಲ್ ವ್ಯಾನ್ ಮೀಕರೆನ್, ಆರ್ಯನ್ ದತ್ ತಲಾ 2 ವಿಕೆಟ್ ಪಡೆದುಕೊಂಡರು. 323 ರನ್ಗಳ ಗುರಿ ಬೆನ್ನತ್ತಿದ ನೆದರ್ಲೆಂಡ್ 46.3 ಓವರ್ಗಳಲ್ಲಿ 223 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ನೆದರ್ಲೆಂಡ್ ಪರ ಕಾಲಿನ್ ಆಕರ್ಮನ್ 69, ಸ್ಕಾಟ್ ಎಡ್ವರ್ಡ್ 30 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಮಿಶೆಲ್ ಸ್ಯಾಂಟ್ನರ್ 5, ಮ್ಯಾಟ್ ಹೆನ್ರಿ 3 ವಿಕೆಟ್ ಪಡೆದುಕೊಂಡರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಯಾಂಟ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ4 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ
-
ದಿನದ ಸುದ್ದಿ7 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು