ಕ್ರೀಡೆ
ಓಟದ ರಾಣಿ ಹಿಮಾದಾಸ್ | ಅಪ್ಪನ ಗದ್ದೆಯ ಕಡೆಯ ಹಾದಿಗಳೇ ಈಕೆಯ ‘ಓಟದ ಟ್ರಾಕ್’ಗಳಾದವು

•ಹಿಮಾದಾಸ್ ಸಾಧನೆಗೆ 10 ಲಕ್ಷ ಬಹುಮಾನ ಘೋಷಿಸಿದ ಪರಂ
ಆ ರೈತನ ಮಗಳು ಓದುತ್ತಿದ್ದ ಶಾಲೆಯ ದೈಹಿಕ ಶಿಕ್ಷಕಿಯು ಒಮ್ಮೆ ಆತನನ್ನು ಭೇಟಿ ಮಾಡಿ ‘ನಿಮ್ಮ ಮಗಳು ವಾಲಿಬಾಲ್ ಆಟದಲ್ಲಿಯೂ ಬಹಳ ಮುಂದಿದ್ದಾಳೆ ಹಾಗೆಯೇ ಓಟದಲ್ಲಿಯೂ ಕೂಡ, ಹೀಗಿದ್ದಾಗ ನೀವೇಕೆ ಈಕೆಗೆ ಅತ್ಯುತ್ತಮ ತರಬೇತಿ ಕೊಡಿಸಬಾರದು’ ಎಂಬ ಹೊಸ ಹುಳವನ್ನು ಬಿಟ್ಟಿದ್ದರು.
ಆದರೆ ಆ ಪ್ರತಿಭಾವಂತ ಮಗಳ ತಂದೆ ರೈತನಾಗಿ ಕಸುಬು ನಿರ್ವಹಿಸುತ್ತಿದ್ದ ರಂಜಿತ್ ದಾಸ್ ಎಂಬ ವ್ಯಕ್ತಿಗೆ ರೈತರಿಗೆ ಕಾಡುವ ಹಣಕಾಸಿನ ಸಮಸ್ಯೆಗಳು ಸಾಕಾಗುವಷ್ಟು ಇದ್ದವು ಜೊತೆಗೆ ಮನೆಯಲ್ಲಿದ್ದ ಆರು ಜನರನ್ನು ಸಾಕುವ ಜವಾಬ್ಧಾರಿ ಇತ್ತಾದರೂ,ಐದು ಜನ ಮಕ್ಕಳಲ್ಲಿ ಕೊನೆಯ ಪುಟಾಣಿಯಾದ ಪ್ರತಿಭಾವಂತ ಹುಡುಗಿಗೆ ತರಬೇತಿ ಕೊಡಿಸುವ ಕಡೆ ಯೋಚಿಸಿದನು ಆ ಪುಟಾಣಿ ಹುಡುಗಿಯ ಹೆಸರು ‘ಹಿಮ ದಾಸ್’.
ಮನೆಯಲ್ಲಿನ ಹಣಕಾಸಿನ ಸಮಸ್ಯೆಯಿಂದಾಗಿ ನೇರವಾಗಿ ಕೋಚ್ ಬಳಿ ಸೇರಲಾಗದೆ ಮೊದಲಿಗೆ ಅಪ್ಪನ ಗದ್ದೆಯ ಕಡೆಯ ಹಾದಿಗಳೇ ಈಕೆಯ ‘ಓಟದ ಟ್ರಾಕ್’ಗಳಾದವು,ಅವಳ ಮಿಂಚಿನ ಓಟದ ಛಾತಿಯನ್ನು ಗದ್ದೆಯ ಹಾದಿಗಳಲ್ಲಿ ನೋಡಿದ ರಂಜಿತ್ ದಾಸ್ ಗೆ ತನ್ನ ಮಗಳು ಹಿಮದಾಸ್ ಓಟದಲ್ಲಿ ಏನೋ ಒಂದನ್ನು ಸಾಧಿಸಿಯೇ ತೀರುತ್ತಾಳೆ ಎಂದೆನಿಸಿತು.
ಆ ದಿನಗಳಲ್ಲಿಯೇ ಈ ಹಿಮಾಸಿಂಗ್ ಗೌಹಾತಿಯ ಸ್ಟೇಟ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದಳು.
‘ಅಯ್ಯಯ್ಯಪ್ಪಾ….ಯಾವುದೇ ಅಂತರಾಷ್ಟ್ರೀಯ ಗುಣಮಟ್ಟದ ಬೇಸಿಕ್ ತರಬೇತಿ ಇಲ್ಲದ ಅಸ್ಸಾಮಿನ ಹಳ್ಳಿ ಹುಡುಗಿ ನೋಡ್ರೀ’ ಎಂದು ತನ್ನ ಮಗಳ ಕುರಿತು ಅಲ್ಲಿದ್ದ ಹಲವರು ಮಾತನಾಡಿದ್ದು ಕೇಳಿದ ಹಿಮಾ ಸಿಂಗಳ ಅಪ್ಪನಿಗೆ ‘ಅದೆಷ್ಟೇ ಕಷ್ಟವಾದರೂ ಸರಿ ತನ್ನ ಮಗಳಿಗೆ ಉತ್ತಮ ತರಬೇತಿ ಕೊಡಿಸಲೇಬೇಕು…”ಎಂದು ನಿರ್ಧರಿಸಿಬಿಟ್ಟನು ಆ ನಂತರ ಕಷ್ಟಪಟ್ಟು ಅಲ್ಲಿ ಇಲ್ಲಿ ಹಣ ಕೂಡಿಸಿ ರೆಜಿನಾ ಸ್ಟೇಡಿಯಂ ಗ್ರೂಪ್ ಸೇರಿಸಿದನು, ಅಲ್ಲಿ ಆಕೆ ಗುಣಮಟ್ಟದ ತರಬೇತಿ ಹೊಂದಿದಳು.
ಅಲ್ಲಿ ದೊರೆತ ಅತ್ಯುತ್ತಮ ತರಬೇತಿ ಆಕೆಯನ್ನು ಮತ್ತೂ ಅತ್ಯುತ್ತಮಗೊಳಿಸುತ್ತಾ ಹಾಗೆಯೇ ಆಗಾಗ ನಡೆಯುವ ಚಾಂಪಿಯನ್ ಶಿಪ್ಪುಗಳಲ್ಲಿ ಭಾಗವಹಿಸುತ್ತಾ ಪ್ರಶಸ್ತಿ ಗೆಲ್ಲುತ್ತಾ ಸಾಗಿದಳು.
ಅಂತೂ ಇಂತೂ ಅಪ್ಪ ಬಿದ್ದ ಪಡಿಪಾಟಲಿಗೆ ತಕ್ಕುನಾದ ಮೌಲ್ಯ ದೊರಕುವ ಸಂದರ್ಭ ಬಂದೇಬಿಟ್ಟಿತು,ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಟ್ರಾಕಿನ ನಾಲ್ಕನೇ ಸಾಲಿನಲ್ಲಿ ಓಡುತ್ತಿದ್ದಾಗ ಐದನೇ ಸಾಲಿನಲ್ಲಿ ರೊಮಾನಿಯಾದ ಆಂಡ್ರಿಯಾ ಮಿಕ್ಲೋಸ್ ಅವಳ ಪಕ್ಕದಲ್ಲಿ ಅಮೇರಿಕದ ಟೇಲರ್ ಮ್ಯಾಸನ್ ಓಡುತ್ತಿದ್ದಳು.
ಅಲ್ಲಿ ಹಾಜರಿದ್ದ ಓಟದ ಪಂಡಿತರೆಲ್ಲರೂ ಅಮೇರಿಕದ ಟೇಲರ್ ಮ್ಯಾಸನ್ನಳೇ ಚಿನ್ನ ಗೆಲ್ಲುತ್ತಾಳೆ ಎಂದಿದ್ದರು ಅವರ ಕವಡೆ ಭವಿಷ್ಯಕ್ಕೆ ತಕ್ಕಂತೆ ಏರ್ ಗನ್ ಢಂಮ್ಮೆಂದೊಡನೆ ಶುರುವಾದ ಓಟದಲ್ಲಿ ಅಮೇರಿಕದ ಟೇಲರ್ ಮ್ಯಾಸನ್ನಳೇ ಮುನ್ನೂರು ಮೀಟರುಗಳವರೆಗೆ ಚಿಮ್ಮೆಗರುತ್ತಾ ಮುಂದಿದ್ದಳು ಆದರೆ ಹಿಮಾಸಿಂಗ್ ಅಂದಿನ ಓಟದ ಜವಾಬ್ಧಾರಿ ನೆನೆದು ಹಠಕ್ಕೆ ಬಿದ್ದವಳಂತೆ ಮುನ್ನೂರು ಮೀಟರಿನ ನಂತರ ಕೊನೆಯಲ್ಲಂತೂ ಎಲ್ಲರನ್ನೂ ಹಿಂದಿಕ್ಕುತ್ತಾ ಟಾಪ್ ಗೇಯರಿನಲ್ಲಿ ಅತೀ ವೇಗದಿಂದ ಓಡಿಬಿಟ್ಟಳು ಅಂತೂ ಅಪ್ಪನಿಗಾಗಿ ಚಿನ್ನದ ಪದಕ ಗೆದ್ದುಬಿಟ್ಟಳು.
ಇಂದು ಬಂದ ಖ್ಯಾತಿ,ಹಣ,ಅಂತಸ್ತು ಎಲ್ಲಾ ಪಕ್ಕಕ್ಕಿಡಿ ! ಸಾಂಸಾರಿಕ ರಣಸಮಸ್ಯೆಗಳ ಹೋರಾಟದ ನಡುವೆಯೇ ಅಂತಹಾ ಹಠ ತೊಟ್ಟು ಮಗಳಿಗೆ ತರಬೇತಿ ಕೊಡಿಸಿ ಆಕೆಯನ್ನು ಈ ಮಟ್ಟಕ್ಕೇರಿಸಿದ ಖ್ಯಾತಿ,ಪ್ರೀತಿ,ಒಲುಮೆ ಇವೆಲ್ಲವೂ ಆ ಅಪ್ಪನಿಗೆ ಸೇರಬೇಕು .ಒಟ್ಟಿನಲ್ಲಿ ಅಪ್ಪನ ಕಂಗಳಲ್ಲಿ ಚಿನ್ನದ ಆನಂದಬಾಷ್ಪ ಮೂಡಿಸುವಲ್ಲಿ ಮಗಳು ಹಿಮದಾಸ್ ಯಶಸ್ವಿಯಾದಳು.
ಜಿ. ಪರಮೇಶ್ವರ್ ಬಹುಮಾನ ಘೋಷಿಸಿ ಟ್ವೀಟ್
The Grit and Perseverance displayed by @HimaDas8 is inspirational for thousands of aspiring sportspersons across India.
As a token of our appreciation, it is my pleasure to award you with a cash prize money of ₹10 lakh on behalf of Sri Siddhartha Academy of Higher Education.
— Dr. G Parameshwara (@DrParameshwara) July 14, 2018
ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಹಿಮಾದಾಸ್ ಗೆ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿರುವುದಾಗಿ ಟ್ಟೀಟ್ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ
ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ

ಸುದ್ದಿದಿನ,ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಮಾರ್ಚ್ 2021ನೇ ಮಾಹೆಯಲ್ಲಿ ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ (Sports Science) 8 ರಿಂದ 13 ವರ್ಷ ವಯೋಮಾನದೊಳಗಿನ ವಯೋಮಿತಿಯ ಬಾಲಕ/ಬಾಲಕಿಯರಿಗೆ ವೈಜ್ಞಾನಿಕವಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಲಿದ್ದಾರೆ.
ಜಿಲ್ಲೆಯಲ್ಲಿ ಮಾ.05 ರಂದು ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಸಂಘಟಿಸಲಾಗುವುದು. 08 ರಿಂದ 13 ವರ್ಷ ವಯೋಮಾನದೊಳಗಿನ ವಯೋಮಿತಿಯ ಬಾಲಕ/ಬಾಲಕಿಯರು ತಮ್ಮ ಜನ್ಮ ದಿನಾಂಕ, ಆಧಾರ್ ಕಾರ್ಡ್ ದಾಖಲೆ ಸಲ್ಲಿಸಬೇಕು. ಪ.ಜಾತಿ/ಪ.ಪಂ ಕ್ಕೆ ಸೇರಿದ ಕ್ರೀಡಾಪಟುಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಮಾ.03 ರೊಳಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಕಚೇರಿ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸಬೇಕು.
ಇದನ್ನೂ ಓದಿ | ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್ ಆರ್ ಅಶ್ವಿನ್
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ದೂ.ಸಂ: 08192-237480, ಮೊ.ಸಂ: 9480796263, 7019565606ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್ ಆರ್ ಅಶ್ವಿನ್

ಸುದ್ದಿದಿನ,ಅಹಮದಾಬಾದ್: ಟೀಂ ಇಂಡಿಯಾದ ಸ್ಪಿನ್ನರ್ ಆರ್ ಅಶ್ವಿನ್ ಅವರು ಅತಿ ಕಡಿಮೆ ಪಂದ್ಯಗಳಲ್ಲಿ 400 ವಿಕೆಟ್ಗಳನ್ನು ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಭಾರತದ ಪರ ಹೊಸ ದಾಖಲೆಯನ್ನು ಬರೆದಿದ್ದಾರೆ.
ಅಶ್ವಿನ್ 77ನೇ ಪಂದ್ಯವನ್ನು ಆಡುತ್ತಿದ್ದು ಇಂಗ್ಲೆಂಡಿನ ಎರಡನೇ ಇನ್ನಿಂಗ್ಸ್ನಲ್ಲಿ ಬೆನ್ ಸ್ಟೋಕ್ಸ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದು, ವಿಶ್ವದಲ್ಲಿ ಈ ಸಾಧನೆಯನ್ನು ಮಾಡಿದ ಆಟಗಾರರ ಪಟ್ಟಿಯಲ್ಲಿ ಅಶ್ವಿನ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್(72ಪಂದ್ಯ) ಮೊದಲ ಸ್ಥಾನದಲ್ಲಿದ್ದಾರೆ.
400 ವಿಕೆಟ್ ಗಡಿ ದಾಟಿದ ಭಾರತದ 4ನೇ ಬೌಲರ್ ಅಶ್ವಿನ್ ಆಗಿದ್ದು, ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 619ವಿಕೆಟ್, ಕಪಿಲ್ ದೇವ್ 434ವಿಕೆಟ್, ಹರ್ಭಜನ್ ಸಿಂಗ್ 417 ವಿಕೆಟ್ಗಳನ್ನು ಪಡೆದಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್, ಎರಡನೇ ಇನ್ನಿಂಗ್ಸ್ನಲ್ಲಿ ಅಶ್ವಿನ್ 4 ವಿಕೆಟ್ ಪಡೆದಿದ್ದಾರೆ. ಈ ಪಂದ್ಯಕ್ಕೂ ಮೊದಲು 76 ಪಂದ್ಯಗಳ 142 ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡಿ 394 ವಿಕೆಟ್ಗಳನ್ನು ಪಡೆದಿದ್ದರು.
"PHENOMENAL" says one legend about the "modern day" legend 🔝👌🏻@anilkumble1074 showers praise on off-spinner @ashwinravi99 😃#TeamIndia #INDvENG #PinkBallTest @Paytm pic.twitter.com/PMAe3jTBtD
— BCCI (@BCCI) February 25, 2021
💬 This body is ageing, but I won't be surprised if I surpass myself in the future: @ashwinravi99 👌🏻
Confidence 💯 percent from the champion spinner 🔝#TeamIndia #INDvENG #PinkBallTest @Paytm pic.twitter.com/vTcdoUGTj7
— BCCI (@BCCI) February 25, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ

ಸುದ್ದಿದಿನ, ನವದೆಹಲಿ : ಟಿ20ಐ ಟೂರ್ನಿಯಲ್ಲಿ ಕಿಶನ್, ಯಾದವ್ ಮತ್ತು ತಿವಾಟಿಯಾ ಎಂಬ ಹೊಸ ಮುಖಗಳನ್ನು ಪರಿಚಯಿಸುತ್ತಿದ್ದು, ಮಾರ್ಚ್ 12 ರಂದು ಅಹಮದಾಬಾದ್ನಲ್ಲಿ ಪ್ರಾರಂಭವಾಗುವ ಸರಣಿಗೆ ಆಯ್ಕೆದಾರರು 19 ಮಂದಿಯ ತಂಡವನ್ನು ಹೆಸರಿಸಿದ್ದಾರೆ.
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್, ಆಲ್ರೌಂಡರ್ ಆಕ್ಸಾರ್ ಪಟೇಲ್ ಮತ್ತು ವೇಗಿ ಭುವನೇಶ್ವರ್ ಕುಮಾರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಿಶನ್ ಕೂಡ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಮತ್ತು ವೈಟ್-ಬಾಲ್ ಕ್ರಿಕೆಟ್ನಲ್ಲಿ ರೆಡ್ ಹಾಟ್ ಫಾರ್ಮ್ನಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ಪರ 93 ಎಸೆತಗಳಲ್ಲಿ 173 ರನ್ ಗಳಿಸಿದ ಒಂದು ದಿನ ಅವರು ಕಾಲ್ ಅಪ್ ಪಡೆದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಮತ್ತು ಹರಿಯಾಣ ಪರ ಆಡುವ ತೆವಾಟಿಯಾ, ಕಳೆದ ವರ್ಷ ಐಪಿಎಲ್ನಲ್ಲಿ ನಡೆದ ಓವರ್ನಲ್ಲಿ ವೆಸ್ಟ್ ಇಂಡಿಯನ್ ಶೆಲ್ಡನ್ ಕಾಟ್ರೆಲ್ರನ್ನು ಐದು ಸಿಕ್ಸರ್ಗಳನ್ನು . ಬಾರಿಸಿ ತಮ್ಮ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ದರು.
ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್ ಮತ್ತು ಮನೀಶ್ ಪಾಂಡೆ ಅವರನ್ನು ಕೈಬಿಡಲಾಗಿದ್ದು, ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನುಭವಿಸಿದ ಗಾಯಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ.
ಕೊನೆಯದಾಗಿ 2018 ರ ಫೆಬ್ರವರಿಯಲ್ಲಿ ಟಿ 20 ಆಡಿದ ಪಟೇಲ್ ಕೂಡ ಐಪಿಎಲ್ನಲ್ಲಿ ಸತತ ಪ್ರದರ್ಶನ ನೀಡಿದ್ದಾರೆ. ಅವರು ತಮ್ಮ ಚೊಚ್ಚಲ ಟೆಸ್ಟ್ನಲ್ಲಿ ಐದು ವಿಕೆಟ್ಗಳನ್ನು ಕಬಳಿಸಿದ ನಂತರ ಜಡೇಜಾಗೆ ಬದಲಿ ಆಟಗಾರರಾಗಿದ್ದಾರೆ.
ಗಾಯದಿಂದಾಗಿ ಆಸ್ಟ್ರೇಲಿಯಾ ಸರಣಿಯನ್ನು ತಪ್ಪಿಸಿಕೊಂಡ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ವೇಗಿ ಟಿ ನಟರಾಜನ್ ಆಸ್ಟ್ರೇಲಿಯಾದಲ್ಲಿ ನಡೆದ ಚೊಚ್ಚಲ ಸರಣಿಯ ನಂತರ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಕಿಶನ್ ಮತ್ತು ಪಂತ್ ಇಬ್ಬರನ್ನೂ ವಿಕೆಟ್ ಕೀಪರ್ ಎಂದು ಹೆಸರಿಸಲಾಗಿದೆ, ಆದ್ದರಿಂದ ಕೆ ಎಲ್ ರಾಹುಲ್ ವಿಕೆಟ್ ಮುಂದುವರಿಸುತ್ತಾರೆಯೇ ಎಂದು ನೋಡಬೇಕಾಗಿದೆ. ಎಲ್ಲಾ ಐದು ಪಂದ್ಯಗಳು ಅಹಮದಾಬಾದ್ನಲ್ಲಿ ನಡೆಯಲಿದೆ.
ಭಾರತದ ಟಿ 20 ಐ ತಂಡ
ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್) ಚಹಲ್, ವರುಣ್ ಚಕ್ರವರ್ತಿ, ಆಕ್ಸಾರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ತಿವಾಟಿಯಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕೂರ್
Virat Kohli (Capt), Rohit Sharma (vc), KL Rahul, Shikhar Dhawan, Shreyas Iyer, Suryakumar Yadav, Hardik, Rishabh Pant (wk), Ishan Kishan (wk), Y Chahal, Varun Chakravarthy, Axar Patel, W Sundar, R Tewatia, T Natarajan, Bhuvneshwar Kumar, Deepak Chahar, Navdeep, Shardul Thakur. https://t.co/KkunRWtwE6
— BCCI (@BCCI) February 20, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್6 days ago
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
-
ಅಂತರಂಗ7 days ago
ಅನಾಥರನ್ನಾಗಿಸದ ಅಂತಿಮ ಸಂಗಾತಿ
-
ದಿನದ ಸುದ್ದಿ6 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ರಾಜಕೀಯ6 days ago
ಜನರನ್ನು ಕಷ್ಟಕ್ಕೆ ದೂಡಿ ಮೋದಿ ಸರ್ಕಾರ ಲಾಭಗಳಿಸುತ್ತಿದೆ : ಸೋನಿಯಾ ಗಾಂಧಿ ಕಿಡಿ
-
ಲೈಫ್ ಸ್ಟೈಲ್6 days ago
ಜಾನುವಾರುಗಳ ಲೋಹ ಕಾಯಿಲೆ
-
ದಿನದ ಸುದ್ದಿ6 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ರಾಜಕೀಯ7 days ago
ಮೋದಿಯವರ ನಿಜ ಬಣ್ಣ ಕಾಂಗ್ರೆಸ್ ಪಕ್ಷ ಬಯಲಿಗೆಳೆಯಲಿದೆ : ಸಿದ್ದರಾಮಯ್ಯ
-
ಲೈಫ್ ಸ್ಟೈಲ್5 days ago
ಏನಿದು ? ಗಡಿಮಾರಿ..!