ದಿನದ ಸುದ್ದಿ
ಕವಿತೆ | ಮಾಧುರ್ಯದ ಮರುವ್ಯಾಖ್ಯಾನ
- ಡಾ.ಎನ್. ಕೆ. ಪದ್ಮನಾಭ
ಪ್ರತೀ ದಿನ ಬೆಳಗನ್ನು ಎದುರು ನೋಡುತ್ತೇನೆ
ಬರೀ ಬೆಳಕಿನ ಹಂಬಲದಿಂದ ಮಾತ್ರವಲ್ಲ;
ನಿನ್ನ ಹೊಳೆವ ಕಾಂತಿಯ ವೈಭವದೊಳಗೆ ಮಿಂದೇಳುವ ಅವಕಾಶಕ್ಕಾಗಿ
ಮಳೆಹನಿವ ಕ್ಷಣಗಳಿಗೆ ಹಾತೊರೆಯುತ್ತೇನೆ
ನೀರಸಿಂಚನ ಸೊಗಡು
ಸವಿಯುವುದಕ್ಕಷ್ಟೇ ಅಲ್ಲ:
ಕಟ್ಟಿದ ಮೋಡಗಳ ಕರಗಿಸುವ
ನಿನ್ನಿರುವಿನ ಮಹಿಮೆ ಕಣ್ತುಂಬಿಕೊಳ್ಳುವುದಕ್ಕಾಗಿ
ಕ್ಷಣಕ್ಷಣವೂ ಹೊಸಹುಟ್ಟು ನನ್ನದಾಗಿಸಿಕೊಳ್ಳಬೇಕೆಂದುಕೊಳ್ಳುತ್ತೇನೆ
ಜಗದ ವಿಸ್ಮಯಗಳ ಹಾದುಹೋಗುವುದಕ್ಕಲ್ಲ:
ನಾನಿರುವ ಕಾಲವನ್ನು ಪಾವನಗೊಳಿಸಿದ ನಿನ್ನ ಪ್ರಖರತೆಯ ಒಡಲುಗೊಳ್ಳುವುದಕ್ಕಾಗಿ
ಧಾವಿಸಿ ಬರುವ ಅಲೆಗಳೊಳಗಿನ ಬಿಂದುವಾಗಬೇಕೆಂದುಕೊಳ್ಳುತ್ತೇನೆ
ಕಡಲಾಳದ ಮುತ್ತುಗಳಿಗಾಗಿ ಅಲ್ಲ;
ತೀರದಲಿ ಕುಳಿತು ಕಂಗೊಳಿಸುವ ನಿನ್ನ ನೋಟದ ಬೆರಗಿನೊಳಗಿನ ಕಣಕಣವಾಗುವುದಕ್ಕಾಗಿ
ನಿನ್ನಿಷ್ಟದ ಹೂವಿನ ಬಣ್ಣವಾಗಬೇಕೆಂದುಕೊಳ್ಳುತ್ತೇನೆ
ಘಮದ ಪರಿಮಳಕ್ಕಾಗಿ ಅಲ್ಲ;
ನಿನ್ನ ಗಮನ ಸೆಳೆಯುವ ಭಾಗ್ಯಕ್ಕಾಗಿ
ಗಾಳಿಯಾಗಬೇಕೆಂದುಕೊಳ್ಳುತ್ತೇನೆ
ತಂಗಾಳಿಯಾಗಬೇಕೆಂದುಕೊಳ್ಳುತ್ತೇನೆ
ಜಗಕೆ ಉಸಿರಾಟ ದಯಪಾಲಿಸಿದ ಹೆಮ್ಮೆ ನನ್ನದಾಗಿಸಿಕೊಳ್ಳುವುದಕ್ಕಲ್ಲ;
ನಿನ್ನ ಜೀವಂತಿಕೆಯ ಸ್ಫೂರ್ತಿ ಜೊತೆಯಾಗಿಸಿಕೊಳ್ಳುವುದಕ್ಕೆ
ಕಳೆದುಹೋಗಬೇಕೆಂದುಕೊಳ್ಳುತ್ತೇನೆ
ಮನವ ಚುಚ್ಚುವ ನೋವುಗಳಿಗೆ
ಬೆನ್ನು ತೋರಿಸಿ ಪಲಾಯನಗೈಯ್ಯುವುದಕ್ಕಲ್ಲ;
ಪ್ರಕೃತಿ ಬರೆದು ಕೊಡುಗೆಯಾಗಿ ಕೊಟ್ಟ
ನಿನ್ನಂದದೊಳಗಿನ ಕವಿತೆಯ ಪದಗಳಲ್ಲಿ ಅಡಗಿಕೊಳ್ಳುವುದಕ್ಕೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


