Connect with us

ದಿನದ ಸುದ್ದಿ

ಮಹೇಂದ್ರ ಎಂಬ ಅಂಗುಲಿಮಾಲ

Published

on

  • ಯೋಗೇಶ್ ಮಾಸ್ಟರ್

ಯಾವ ಶಕ್ತಿಗಳು ರಾಷ್ಟ್ರ, ಸಂಸ್ಕೃತಿ, ಧರ್ಮ ಎಂದು ದೇಶದ ಏಕತೆ ಮತ್ತು ಸೌಹಾರ್ದತೆಯ ಮೇಲೆ ದಾಳಿ ಮಾಡುತ್ತಿದ್ದವೋ, ಅದೇ ಶಕ್ತಿಗಳ ಭಾಗವಾಗಿದ್ದ ತನ್ನ ಈ ಶಕ್ತಿ ವಿಧ್ವಂಸಕವಾಗಕೂಡದು ಮತ್ತು ರಚನಾತ್ಮಕವಾಗಬೇಕು ಎಂಬ ಜ್ಞಾನೋದಯ ಪಡೆದುಕೊಂಡ ವ್ಯಕ್ತಿ ಮಹೇಂದ್ರ ಕುಮಾರ್. ಆ ಜ್ಞಾನೋದಯವನ್ನು ಮತ್ತು ತನ್ನದಂತೆಯೇ ಇತರರದೂ ಜೀವ ಎಂದು ಪ್ರಜ್ಞೆ ಪಡೆದುಕೊಂಡ ವ್ಯಕ್ತಿ ಆ ಪ್ರಜ್ಞೆಯನ್ನು ತನ್ನ ಸಹಜೀವಿಗಳಿಗೆ ಹಂಚಿಕೊಳ್ಳುತ್ತಾ ಶಕ್ತಿಯು ನಕಾರಾತ್ಮಕವಾಗುವ ಬದಲು ರಚನಾತ್ಮಕವಾಗಿ ಸಮಾಜದಲ್ಲಿ ಬಳಕೆಯಾಗಬೇಕು ಎಂದು ಬಯಸುತ್ತಾ, ಕೆಲಸ ಮಾಡುತ್ತಿದ್ದರು. ಇಂತಹ ಪ್ರಜ್ಞಾವಂತ ಜೀವಿ ಇಷ್ಟುಬೇಗ ಬದುಕಿನಿಂದ ವಿಮುಖವಾಗಿದ್ದು ನಿಜಕ್ಕೂ ಜನಪರ ಹೋರಾಟಕ್ಕೆ ಆದ ಅನ್ಯಾಯವೇ.

ಬಜರಂಗದಳದ ತಂಡದಿಂದ ತನ್ನ ಅರಿವಿನಿಂದ ಹೊರಗೆ ಬಂದ ಈ ಅಂಗುಲಿಮಾಲ ಶರಣಾಗಿದ್ದು ಮನುಷ್ಯ ಪ್ರೀತಿಗೆ. ಇಂಥಾ ಸಮಯದಲ್ಲಿ ನಮಗೆ ಪೂರಕ ಶಕ್ತಿಯಾಗುವಂತೆ ಇದ್ದ ಮಹೇಂದ್ರ ಕುಮಾರ್ ಇನ್ನಿಲ್ಲ ಎಂಬುದನ್ನು ಅರಿಗಿಸಿಕೊಳ್ಳಲು ಕಷ್ಟವಾದರೂ ನಿಜ. ಮಹೇಂದ್ರ ಕುಮಾರ್ ಇನ್ನಿಲ್ಲ ಎಂಬ ಆಘಾತಕರ ಸುದ್ಧಿಯನ್ನು ನಾನು ನಂಬಲಾಗದೇ ಅವರಿವರಿಗೆ ಫೋನ್ ಮಾಡಿ ನಿಜವೆಂದು ಹೇಳಿದರು. ಆದರೆ ನಂಬಲು ಈಗಲೂ ಸಿದ್ಧನಿಲ್ಲ.

ಯುವಶಕ್ತಿಯನ್ನು ಜೀವಪರವಾದ ಮತ್ತು ಸಮಾಜಮುಖಿಯಾದ ದಾರಿಯಲ್ಲಿ ನಡೆಸುತ್ತಾ ಮನುಷ್ಯಪ್ರೇಮದ ಗುರಿಗೆ ಒಯ್ಯಲು ಸಾಂಘಿಕವಾಗಿ ಶ್ರಮಿಸುತ್ತಿದ್ದ ಮಹೆಂದ್ರಕುಮಾರ್ ಗೆ ಬಹಳ ಸಂಕಟದಿಂದ ಅಂತಿಮ ವಿದಾಯಗಳನ್ನು ಹೇಳುತ್ತಿದ್ದೇನೆ. ಮಹೇಂದ್ರ ಕುಮಾರ್ ನನಗೆ ಇತ್ತೀಚೆಗೆ ತಿಮ್ಮಿಯ ಬಗ್ಗೆ ಮಾಡಿದ್ದ ಕರೆ ಕೊನೆಯದಾಗಬಹುದೆಂದು ನಾನು ಹೇಗೆ ಕಲ್ಪಿಸಿಕೊಳ್ಳಲು ಸಾಧ್ಯ?

ತಿಮ್ಮಿಯ ಮೇಲಿನ ನಮ್ಮ ಪ್ರೀತಿಯನ್ನು ಮತ್ತು ನಮ್ಮ ಕುಟುಂಬದಲ್ಲಿ ಅದು ಪಡೆದುಕೊಂಡಿರುವ ಸ್ಥಾನವನ್ನು ಅದು ಬಂದ ಪ್ರಾರಂಭದ ದಿನಗಳಲ್ಲೇ ಗಮನಿಸಿದ್ದ ಮಹೇಂದ್ರ ಕುಮಾರ್ “ಒಬ್ಬರು ಒಂದು ಪ್ರಾಣಿಯನ್ನು ತಮ್ಮ ಪ್ರೀತಿಯ ಜೀವ ಎಂದು ಮನೆಯಲ್ಲಿ ಸಾಕುತ್ತಿರುವಾಗ, ಮುದ್ದಿಸುತ್ತಿರುವಾಗ ಅದನ್ನು ಕೊಯ್ಯುವ ತಿನ್ನುವ ಬಗ್ಗೆಯೇ ನಾವು ಪೋಸ್ಟ್ ಮಾಡುತ್ತಿದ್ದರೆ ಅದೆಷ್ಟು ಕ್ರೂರ.

ಯೋಗೇಶ್ ಮಾಸ್ಟರ್ ನೆಚ್ಚಿನ ಮನೆಯ ಸದಸ್ಯ ಕೋಳಿ ಬಗ್ಗೆ ಮಹೇಂದ್ರ ಕುಮಾರ್ ಕಾಮೆಂಟ್ ಇದು.

ಅದನ್ನು ಮುದ್ದಿನ ಪ್ರಾಣಿ ಮತ್ತು ಮನೆಯ ಸದಸ್ಯರನ್ನಾಗಿ ಮಾಡಿಕೊಂಡಿರುವ ಮನಸ್ಸಿಗೆ ಅದೆಷ್ಟು ನೋವಾಗುವುದಿಲ್ಲ! ಇದು ತಮಾಷೆ ಅಲ್ಲ ಮೇಷ್ಟೇ. ತಮಾಷೆಗೆ ನಿಮ್ಮ ಮನೆ ಸದಸ್ಯನ ಕುಯ್ದುಕೊಂಡು ತಿಂತೀನಿ ಅಂತ ಹೇಳ್ತಾರಾ? ಇವರಿಗೇನು ಇಷ್ಟು ಮಾತ್ರ ಗೊತ್ತಾಗುವುದಿಲ್ಲವಾ? ಅವರ ಪ್ರೀತಿಯ ಮತ್ತು ಮನೆಯ ಸದಸ್ಯರಲ್ಲಿ ಒಂದಾಗಿರುವ ಜೀವವನ್ನು ಕೊಲ್ಲುವ, ಮಸಾಲೆ ಅರೆಯುವ, ತಿನ್ನುವ ಮಾತಾಡಿದರೆ ನಿಮ್ಮ ಮನಸಿಗೆ ಅದೆಷ್ಟು ನೋವಾಗುವುದಿಲ್ಲ?” ಎಂದು ನನಗೆ ಫೋನ್ ಮಾಡಿಯೇ ಮಾತಾಡಿದ್ದರು. ಇದೇ ನನಗೆ ಅವರು ಮಾಡಿದ್ದ ಕೊನೆಯ ಕರೆ.

ಜೀವಕ್ಕೆ ಮತ್ತು ಜೀವನಕ್ಕೆ ಬೆಲೆಯಿಲ್ಲದಂತೆ ವರ್ತಿಸುವ, ಪ್ರೀತಿ ಪ್ರೇಮವನ್ನು ಲವ್ ಜಿಹಾದ್ ಎಂದು ದಾಳಿ ಮಾಡುವ ಮತೋನ್ಮತ್ತ ಸಂಘಗಳ ಹಿನ್ನೆಲೆಯಿಂದಲೇ ಬಂದ ವ್ಯಕ್ತಿ ಒಂದು ಕೋಳಿಯ ಜೀವಕ್ಕೂ ಮರುಗುವಷ್ಟು, ಅದರೊಂದಿಗೆ ಸಂಬಂಧಹೊಂದಿರುವವರ ಪ್ರೀತಿಯನ್ನು ಆದರಿಸುವಷ್ಟು ಕಾಳಜಿಯನ್ನು ತೋರುತ್ತಿದ್ದರೆಂದರೆ, ಅವರು ತಮ್ಮ ಜೊತೆಗೆ ಇದ್ದ ಯುವಕರಲ್ಲಿ ಇನ್ನೆಷ್ಟರ ಮಟ್ಟಿಗೆ ಜೀವಪರ ಸಂವೇದನೆಯನ್ನು ಪ್ರೇರೇಪಿಸುತ್ತಿದ್ದರು ಎಂದು ಆಲೋಚಿಸುತ್ತಿದ್ದೆ.

ನಮ್ಮ ಧ್ವನಿ ಎಂದು ತನ್ನ ಜೀವಪರ ದನಿಗೆ ಸಾಂಸ್ಥಿಕ ರೂಪಕೊಟ್ಟು ಯುವಕರಿಗೆ ಸಮಾಜಮುಖಿಯಾಗುವಂತಹ ತರಬೇತಿಗಳನ್ನು ಕೊಡುತ್ತಿದ್ದರು. ಈ ತರಬೇತಿ ಶಿಬಿರಗಳಲ್ಲಿ ಪರಿಣಿತರಿಂದ, ಪ್ರಸಿದ್ಧರಿಂದ ಹೋರಾಟಗಾರರಿಗೆ ನೈತಿಕತೆ, ತಾತ್ವಿಕತೆ ಮತ್ತು ತಾಂತ್ರಿಕತೆಗಳ ಶಿಕ್ಷಣ ಕೊಡಿಸುವ ಕೆಲಸವಾಗುತ್ತಿತ್ತು. ನಮ್ಮ ಧ್ವನಿಯಲ್ಲಿ ಅನುಯಾಯಿಗಳನ್ನು ಬೆನ್ನಿಗಿಟ್ಟುಕೊಳ್ಳುವ ಇರಾದೆ ಇಲ್ಲದೇ ನಾಯಕರನ್ನು ತಯಾರುಮಾಡುವ, ಜನರನ್ನು ಮುನ್ನಡೆಸಲು ಮುಂದಾಳುಗಳನ್ನು ರೂಪಿಸುವ ಆಶಯವನ್ನು ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಹತ್ತಿರದಿಂದ ಬಲ್ಲೆ.

ಮತ್ತೆ ಸಿಗೋಣ ಎಂದು ಕೊಟ್ಟ ಮಾತನ್ನು ಮುರಿದಿದ್ದು ಅಕ್ಷಮ್ಯ ಮತ್ತು ಸಂಕಟ. ವಿದಾಯ ಹೇಳುವ ಮನಸ್ಸಿಲ್ಲ ಮಹೇಂದ್ರ. ನೀವು ನನ್ನ ಭರವಸೆಗಳನ್ನು ಈಡೇರಿಸದೇ, ನೀವು ಕಂಡ ಸಮಸಮಾಜದ ಕನಸನ್ನು ಸಂಘಾಂತರವಾಗಿ ಬರುವ ಮನಸುಗಳಿಗೆ ಧಾರೆಯೆರೆಯದೇ ಮತ್ತು ಈ ಯುವಸಮಾಜಕ್ಕಾಗಿ ಕೊಟ್ಟ ಹಲವು ಮಾತುಗಳನ್ನು ಪೂರೈಸದೇ ಹೋಗುವುದನ್ನು ಹೇಗೆ ಭರಿಸಲಿ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್

Published

on

ಸುದ್ದಿದಿನ,ದಾವಣಗೆರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದ ವಿದ್ಯಾರ್ಥಿ ಭರತ್ ಜಿ. ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

625ಕ್ಕೆ 625 ಅಂಕಗಳನ್ನು ಪಡೆದ ಭರತ್ ಅವರು ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ವಿದ್ಯಾರ್ಥಿ. ರಾಜ್ಯದ ಇತರ ಐದು ವಿದ್ಯಾರ್ಥಿಗಳೊಂದಿಗೆ ಅಗ್ರಸ್ಥಾನವನ್ನು ಭರತ್ ಅವರು ಹಂಚಿಕೊಂಡಿದ್ದಾರೆ. ಭರತ್ ಅವರ ತಂದೆ ಗಿರೀಶ್ ಕೃಷಿ ಹಾಗೂ ಗುತ್ತಿಗೆ ದಾರರು, ತಾಯಿ ಶಿಲ್ಪ ಗೃಹಿಣಿ.

ಗ್ರಾಮೀಣ ಭಾಗದಿಂದ ಬಂದ ಭರತ್ ರಾಜ್ಯಕ್ಕೆ ಟಾಪರ್ ಆಗಿ ದೊಡ್ಡ ಸಾಧನೆ ಮಾಡಿದ್ದಾರೆ.ನಮ್ಮ ಶಾಲೆಯು ಎರಡು ಬಾರಿ ಜಿಲ್ಲೆಗೆ ಹಾಗೂ ಎರಡು ಬಾರಿ ತಾಲ್ಲೂಕಿಗೆ ಟಾಪ‌ರ್ ಆಗಿತ್ತು. ಇದೀಗ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ನಿರಂತರವಾಗಿ ಸಾಧನೆ ಮಾಡುತ್ತಿದ್ದು ಈ ಬಾರಿಯೂ ಶೇ 100ರಷ್ಟು ಫಲಿತಾಂಶ ನೀಡಿದೆ ಎಂದು ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ ಎ.ಎನ್ ಹರ್ಷ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ

Published

on

ಸುದ್ದಿದಿನ,ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 23) ಮಧ್ಯಾಹ್ನ 12ಕ್ಕೆ ಪ್ರಕಟಿಸಲಾಗುತ್ತದೆ.

ಫಲಿತಾಂಶವನ್ನು ವೆಬ್‌ಸೈಟ್ (https://karresults.nic.in) ಲಿಂಕ್ ಮೂಲಕ ಹಾಗೂ KarnatakaOne mobile app ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ಗೆ ವಾಟ್ಸ್‌ಆ್ಯಪ್/ ಎಸ್‌ಎಂಎಸ್‌ ಮೂಲಕ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗುತ್ತದೆ.

ಈ ವರ್ಷ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್‌ (https://www.digilocker.gov.in) ಮೂಲಕ ಲಭ್ಯಗೊಳಿಸಲಾಗುತ್ತದೆ. ಈ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಫಲಿತಾಂಶ ಪಟ್ಟಿಯನ್ನು ಸಂಬಂಧಿತ ಶಾಲೆಗಳಿಗೆ ಮಧ್ಯಾಹ್ನ 12 ಗಂಟೆಗೆ ಲಭ್ಯಗೊಳಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮ್ಮ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದರೆ ತಮ್ಮ ಶ್ರೇಣಿಗಳ ಬಗ್ಗೆ ಅತೃಪ್ತರಾಗಿರುವ ವಿದ್ಯಾರ್ಥಿಗಳು ಮಂಡಳಿಯು ಏರ್ಪಡಿಸಿದ ಕರ್ನಾಟಕ SSLC ಸುಧಾರಣಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಇದು ನಿರ್ದಿಷ್ಟ ವಿಷಯಗಳಲ್ಲಿ ಅಂಕಗಳನ್ನು ಸುಧಾರಿಸಲು ಅವಕಾಶವನ್ನು ನೀಡುತ್ತದೆ.

ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಒಬ್ಬ ವಿದ್ಯಾರ್ಥಿ ಅನುತ್ತೀರ್ಣನಾದರೆ, ಅವರು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳದೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಳೆ ಸಸಿಗಳ ಮಾರಾಟ : ಸಂಪರ್ಕಿಸಿ

Published

on

ಸುದ್ದಿದಿನ,ದಾವಣಗೆರೆ: ಉತ್ತಮ ಗುಣಮಟ್ಟದ ಜಿ-9 ತಳಿಯ ಅಂಗಾಂಶ ಕೃಷಿ ಬಾಳೆಗಳನ್ನು ಕೃಷಿ ಇಲಾಖೆ ಮಾರಾಟ ಮಾಡಲಾಗುತ್ತಿದೆ.

ಆಸಕ್ತ ರೈತರು ಸಹಾಯಕ ತೋಟಗಾರಿಕಾ ಅಧಿಕಾರಿ, ಅಂಗಾಂಶ ಕೃಷಿ ಬಾಳೆ, ಜೈವಿಕ ಕೇಂದ್ರ, ಎಪಿಎಂಸಿ ಈ ಬ್ಲಾಕ್, ಹಣ್ಣಿನ ಮಾರುಕಟ್ಟೆ ಹತ್ತಿರ ಮೊ.ಸಂ:6360950904, 8192296196 ಸಂಪರ್ಕಿಸಿ ಇಲಾಖೆ ದರದಲ್ಲಿ ಬಾಳೆಸಸಿಗಳನ್ನು ಕೊಂಡುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending