Connect with us

ದಿನದ ಸುದ್ದಿ

ಎಲ್ಲಾ ಬುದ್ಧರುಗಳ ಬೋಧನೆಯ ತಿರುಳೆ ಈ ಗಾಥೆ..!

Published

on

  • ಶಿವಸ್ವಾಮಿ, ಬೌದ್ಧುಪಾಸಕರು

ಸಬ್ಬ ಪಾಪಸ್ಸ ಅಕರಣಂ,
ಕುಸಲಸ್ಸ ಉಪಸಂಪದಾ,
ಸಚಿತ್ತ ಪರಿಯೋದಪನಂ,
ಏತಂ ಬುದ್ಧಾನಸಾಸನಂ “

– ಧಮ್ಮಪದ, -183.

ಈ ಗಾಥೆಯು ಒಬ್ಬ ಸಾಧಕನು ಅಷ್ಟಾಂಗ ಮಾರ್ಗವನ್ನು ತನ್ನ ನಿತ್ಯಜೀವನದಲ್ಲಿ ಹೇಗೆ ಪಾಲಿಸಬೇಕೆಂಬುದನ್ನು ಹೇಳುತ್ತದೆ.

ಸಬ್ಬ ಪಾಪಸ್ಸ ಅಕರಣಂ‘ – ಕೆಟ್ಟದನ್ನು ಮಾಡದಿರುವುದು ಅಂದರೆ ಸರಿಯಾದ ಮಾತಾನ್ನಾಡುವ,ಸರಿಯಾದ ಕೆಲಸವನ್ನು ಮಾಡುವ ಮತ್ತು ಸರಿಯಾದ ಜೀವನೋಪಾಯದ ವಿಚಾರಕ್ಕೆ ಸಂಬಂಧಿಸಿದೆ.ಯಾರು ಮಾತು,ಕೃತಿ ಮತ್ತು ಸಂಪಾದನೆಯಲ್ಲಿ ಕೆಡಕನ್ನು ಮಾಡುವುದಿಲ್ಲವೋ ಅವರು ಶೀಲವನ್ನು ಪಾಲಿಸುತ್ತಾರೆ.

ಕುಸಲಸ್ಸ ಉಪಸಂಪದಾ‘, ಕುಶಲವನ್ನು ಸಂಪಾದಿಸುವುದು ಧ್ಯಾನಕ್ಕೆ (ಸಮಾಧಿ) ಸಂಬಂದಿಸಿರುವುದು ಸರಿಯಾದ ಪ್ರಯತ್ನ,ಸರಿಯಾದ ಮಾನಸಿಕ ಜಾಗ್ರತೆ ಮತ್ತು ಸರಿಯಾದ ಏಕಾಗ್ರತೆ ಒಳಗೊಂಡಿದೆ. ಯಾರು ಸಮತಾ ಧ್ಯಾನದ ಮೂಲಕ ಮನಸ್ಸನ್ನ ತರಬೇತಿಗೊಳಿಸಿಕೊಳ್ಳುತ್ತಾರೊ ಅವರು ಅನಂದವನ್ನು ಬೆಳೆಸಿಕೊಳ್ಳುತ್ತಾರೆ.ಆ ಮೂಲಕ ಚೇತೋ ವಿಮುಕ್ತಿಯನ್ನು ( ಮನಸ್ಸಿನಿಂದ ಬಿಡುಗಡೆ) ಪಡೆಯುತ್ತಾರೆ.

ಸಚಿತ್ತ ಪರಿಯೋದಪನಂ‘, ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳುವುದು ಪ್ರಜ್ಞೆಗೆ ಸಂಬಂಧಪಟ್ಟಿದೆ. ಈ ಪ್ರಜ್ಞೆಯಲ್ಲಿ ಸರಿಯಾದ ದೃಷ್ಟಿ ಮತ್ತು ಸರಿಯಾದ ಸಂಕಲ್ಪ ಅಥವಾ ಆಲೋಚನೆ ಸೇರಿಕೊಂಡಿವೆ. ಯಾರು ವಿಪಸ್ಸನ ಧ್ಯಾನದ ಮೂಲಕ ಮನಸ್ಸನ್ನು ವಿಕಸನಗೊಳಿಸುತ್ತಾರೊ ಅವರು ಎಷ್ಟೇ ಸೂಕ್ಷ್ಮ ವಿರುವ ಮಾನಸಿಕ ಕೊಳಕುಗಳನ್ನು ಬುಡಮೇಲು ಮಾಡಿ ಆ ಮೂಲಕ ಮನಸ್ಸು ಪರಿವರ್ತನೆಯಾಗಿ ಸಂಸಾರ ಬಂಧನದಿಂದ (ಮತ್ತೆ ಮತ್ತೆ ಹುಟ್ಟುವ) ಬಿಡುಗಡೆ ಹೊಂದುತ್ತಾರೆ.

ಶೀಲ ಸಮಾಧಿ ಪ್ರಜ್ಞೆ ಈ ಮೂರನ್ನು ಸಾಧನೆಯಲ್ಲಿ ತರುವುದೆಂದರೆ ಮೂರು ರೀತಿಯ ಭಿನ್ನವಾಗಿದೆ ಮಾನಸಿಕ ಕ್ರಿಯೆಗಳು ಮತ್ತು ಬದುಕಿನ ರೀತಿಗಳಾಗಿವೆ.ಇವು ಯಾವುವೆಂದರೆ ಸಿಕ್ಖಾ (ತರಬೇತಿ), ಭಾವನಾ (ಮನಸ್ಸಿನ ಬೆಳವಣಿಗೆ) ಮತ್ತು ವಿಶುದ್ಧಿ (ಮನಸ್ಸಿನ ಶುದ್ಧೀಕರಣ) ಸಿಕ್ಖಾ ಎಂದರೆ ಶೀಲದ ಮೂಲಕ ತನ್ನನ್ನು ತಾನೇ ತಯಾರು ಮಾಡಿಕೊಳ್ಳುವುದು – ಅದು ಪಂಚಶೀಲಗಳು ಮತ್ತು ಅಷ್ಟಶೀಲಗಳು ದಶಶೀಲಗಳು ಹಾಗೆಯೇ 227 ಭಿಕ್ಕು ನಿಯಮಗಳು ಅಥವಾ ಸನ್ಯಾಸಿ ನಿಯಮಗಳು.

ಒಬ್ಬನು ತನ್ನನ್ನು ಕಮ್ಮ ವಾಚಾ,ಕಮ್ಮ ಕಮ್ಮಂತ, ಕಮ್ಮ ಆಜೀವ(ಮಾತು ಕ್ರಿಯೆ ಜೀವನೋಪಾಯ) ಶೀಲಗಳ ಮೂಲಕ ಗುಣವರ್ಧನೆ ಮತ್ತು ನೈತಿಕ ಬಲವನ್ನು ಹೊಂದುತ್ತಾನೆ.ಶೀಲವನ್ನು ಶ್ರಿಮಂತಗೊಳಿಸಿದಷ್ಟೂ ಆತನ ನಡವಳಿಕೆ ಶುದ್ಧವಾಗಿ ಮನಸ್ಸು ಪರಿಶುದ್ಧವಾಗುತ್ತದೆ.

ಯಾರು ಧ್ಯಾನದಲ್ಲೇ ಸಾಧನೆಗೈದು ಮುಂದುವರಿಯುತ್ತಾರೊ ಅವರು ಮಾನಸಿಕ ಏಕಾಗ್ರತೆಯನ್ನು ಬೆಳೆಸಿಕೊಳ್ಳುತ್ತಾರೆ.ಈ ಮೂಲಕ ಮಾನಸಿಕ ಸ್ಥಿತಿಗಳಿಗೂ ಮೀರಿದ ಸಮಾಧಿ ಸ್ಥಿತಿ ಅಥವಾ ಜಾನದ ಹಂತಕ್ಕೆ ತಲುಪುತ್ತಾರೆ. ಬೌದ್ಧ ಧಮ್ಮದಲ್ಲಿ 40 ಕ್ಕೂ ಹೆಚ್ಚು ರೀತಿಯ ಧ್ಯಾನಗಳಿವೆ ಪ್ರಮುಖವಾದವು ಸಮತಾ ಮತ್ತು ವಿಪಸ್ಸನಾ,ಸಮತಾ ಧ್ಯಾನವು ಸಮಾಧಿಯ ವಿವಿಧ ಸ್ತರಗಳಿಗೆ ಕೊಂಡೊಯ್ದು ಮನಸ್ಸನ್ನು ಉನ್ನತ ಸ್ಥಿತಿಗಳಿಗೆ ಕರೆದೊಯ್ಯುತ್ತದೆ,ಮನಸ್ಸು ಎಲ್ಲ ರೀತಿಯ ಮಾನಸಿಕ ಅಡೆತಡೆಗಳಿಂದ ಅಂದರೆ ಧ್ಯಾನ ಶೀಲ ಪಾರಮಾರ್ಥಿಕ ಬೆಳವಣಿಗೆಗೆ ಅಡ್ಡಿ ಬರುವ ಸಂಗತಿಗಳಿಂದ ಮುಕ್ತವಾಗುತ್ತದೆ.ಹೀಗೆ ಒಬ್ಬನು ಉತ್ತಮ ಸ್ಥಿತಿಗಳತ್ತ ಸಾಗುತ್ತಾನೆ.

ಈ ಮಾನಸಿಕ ಅಡೆತಡೆಗಳು ಇಂದ್ರಿಯ ಸಂಬಂಧ ಆಸೆಗಳು,ದ್ವೇಷ, ಸೋಮಾರಿತನ, ಅಶಾಂತಿ ಅನುಮಾನ.ಒಮ್ಮೆ ಮನಸ್ಸು ಅಡೆತಡೆಗಳಿಂದ ಹೊರತಾದಲ್ಲಿ ಚಿತ್ತವಿಶುದ್ಧಿಯಾಗುತ್ತದೆ.ಮನಸ್ಸೊಂದೇ ಶುದ್ಧಿಯಾಗುವುದರಿಂದ ಸಂಸಾರಿಕ ತಾಪತ್ರಯಗಳಿಂದ ಮುಕ್ತಿ ದೊರಕದು.ಉತ್ತಮ ಮಾನಸಿಕ ಸ್ಥಿತಿಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಒಬ್ಬನು ಹಲವಾರು ಲೋಕೋತ್ತರ ಶಕ್ತಿಗಳನ್ನು ಅಥವಾ ಜ್ಞಾನದ ಸ್ಥಿತಿಗಳನ್ನು ಪಡೆಯುತ್ತಾನೆ.

ಯಾರು ಸಮತಾ ಧ್ಯಾನಕ್ಕಿಂತ ಭಿನ್ನವಾದ ವಿಪಸ್ಸನಾ ಧ್ಯಾನದಲ್ಲಿ ಸಾಧನೆಗೈಯುತ್ತಾರೊ ಅವರು ವಾಸ್ತವತೆಗಳ ವಿಭಿನ್ನ ಹಂತಗಳನ್ನು ಬೆಳೆಸಿಕೊಳ್ಳುತ್ರಾರೆ. ಧ್ಯಾನಾವಸ್ಥೆಯ ಈ ವಿವಿಧ ಮಜಲುಗಳು ಮಾನಸಿಕ ಕೊಳಕುಗಳನ್ನು ಬುಡಮೇಲು ಮಾಡಿ ಮನಸ್ಸನ್ನು ಪರಿಶುದ್ಧಗೊಳಿಸುವುದಲ್ಲದೆ ಪರಿವರ್ತನೆಯನ್ನು ಮಾಡುತ್ತವೆ. ಪರಿವರ್ತಿತಗೊಂಡ ಮನಸ್ಸು ಲೋಕೀಯ ಚಿತ್ತದಿಂದ ಲೋಕೋತ್ತರ ಚಿತ್ತಸ್ಥಿತಿಗೆ ಹೊಗುತ್ತದೆ.

4 ರೀತಿಯ ಲೋಕೋತ್ತರ ಚಿತ್ತ ಸ್ಥಿತಿಗಳಿವೆ;ಅಂದರೆ ಧ್ಯಾನದ ಉನ್ನತ ಸ್ಥಿತಿಯನ್ನು ಮೀರಿರುವ ನಿಬ್ಬಾಣವನ್ನು ಮುಟ್ಟಿರುವ ಚಿತ್ತ ಸ್ಥಿತಿ,ಕಾಮಲೋಕ (ಇಂದ್ರಿಯ ಸಂಬಂಧ ಆಸೆಗಳಿಂದ ಕೂಡಿದ ವಲಯ) ರೂಪಲೋಕ (ಸೂಕ್ಷ್ಮ ವಸ್ತುಗಳಿಂದ ಕೂಡಿದ ವಲಯ) ಅರೂಪ ಲೋಕ (ರೂಪರಹಿತ ಸಂಗತಿಗಳಿಂದ ಕೂಡಿದ ವಲಯ) ಈ ಮೂರು ರೀತಿಯ ಅಸ್ತಿತ್ವಗಳಿಂದ ಕೂಡಿದ ಲೋಕೀಯ ಚಿತ್ತಸ್ಥಿತಿಯನ್ನು ಮೀರಿರುವ ಲೋಕೋತ್ತರ ಚಿತ್ತ.

ತಾನೇ ತನ್ನ ಅಕುಶಲ ಕರ್ಮಗಳಿಂದ (ಪಾಳಿಯಲ್ಲಿ ಕಮ್ಮಗಳು )ಸೃಷ್ಟಿಸಿಕೊಂಡ ಸಂಯೋಜನೆಗಳನ್ನು ನಾಶಮಾಡಿಕೊಂಡ ಮೇಲೆ ಮನಸ್ಸು ಮೇಲೆ ಹೇಳಿದ ಮೂರು ಅಸ್ತಿತ್ವ ವಲಯಗಳನ್ನು ಮೀರುತ್ತಾ ಬಿಡುಗಡೆಯತ್ತಾ ಪಯಣಿಸುತ್ತಾದೆ.ಈ ಸಂಯೋಜನೆಗಳೇ ಮುಂದಿನ ಹುಟ್ಟಿಗೆ ಅಥವಾ ಪುನಬ್ಭವಕ್ಕೆ ಕೊಂಡಿಯಾಗುತ್ತವೆ.ಒಮ್ಮೆ ಈ ಸಂಯೋಜನೆಗಳು ಮುರಿದವೆಂದರೆ ಮನಸ್ಸು ಪ್ರಾಪಂಚಿಕ ಅಸ್ತಿತ್ವದಿಂದ ವಿಮುಕ್ತಿಗೊಳ್ಳುತ್ತದೆ.4 ಲೋಕೋತ್ತರ ಫಲ ಚಿತ್ತದಿಂದ ಉದ್ಭವವಾಗುವ 4 ಹಂತಗಳ ಬಿಡುಗಡೆ ಇದೆ.ಈ 4 ಲೋಕೋತ್ತರ ಸ್ಥಿತಿಗಳ ಸಂಯೋಜನೆಗಳನ್ನು ನಾಶ ಮಾಡುತ್ತಾ ಹೋಗುತ್ತದೆ ಈ ಮೂಲಕ ಮನಸ್ಸು ಬಿಡುಗಡೆಗೊಂಡು ಪರಿಶುದ್ಧವಾಗುತ್ತದೆ.

ಕೊನೆಯ ಸಾಲು “ಏತಂ ಬುದ್ಧಾನುಸಾಸನಂ” ಇದರಲ್ಲಿ 3 ರೀತಿಯ ತರಬೇತಿ ಭೋಧನೆ ಇದೆ

ಅವು ಸಿಕ್ಖಾ (ಮನಸ್ಸಿನ ತರಬೇತಿ),
ಭಾವನ (ಮನಸ್ಸಿನ ಬೆಳವಣಿಗೆ), ಮತ್ತು ವಿಶುದ್ಧಿ (ಪರಿಶುದ್ಧಿ) ಇವೇ ಎಲ್ಲಾ ಬುದ್ಧರುಗಳ ಭೋಧನೆಯ ತಿರುಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ : ಸಚಿವ ಸಂತೋಷ್ ಲಾಡ್

Published

on

ಸುದ್ದಿದಿನ,ದಾವಣಗೆರೆ:ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾ ಕಾರ್ಮಿಕರು ಹಾಗೂ ಮನೆಗೆಲಸದಲ್ಲಿ ತೊಡಗಿರುವ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಅಧಿನಿಯಮಗಳನ್ನು ರೂಪಿಸಿದೆ. ಮುಂಬರುವ ದಿನಗಳಲ್ಲಿ ಸದನದಲ್ಲಿ ಈ ಅಧಿಸೂಚನೆಗಳನ್ನು ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆಗಳನ್ನಾಗಿ ಜಾರಿ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ನಗರದ ದೊಡ್ಡಬೂದಿಹಾಳ್ ರಸ್ತೆಯ ತಾಜ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈಗಾಗಲೇ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಗಿಗ್ ಕಾರ್ಮಿಕರನ್ನು ನೋಂದಾಯಿಸಿ, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಹಾಗೂ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ‘ಕರ್ನಾಟಕ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಅಧಿನಿಯಮ-2025’ ಜಾರಿ ಮಾಡಲಾಗುವುದು. ರಾಜ್ಯದಲ್ಲಿ ವರ್ಷಕ್ಕೆ ಸುಮಾರು 4 ಕೋಟಿ ಸಿನಿಮಾ ಟಿಕೆಟ್‌ಗಳು ಮಾರಾಟವಾಗುತ್ತವೆ.

ಈ ಟಿಕೆಟ್‌ಗಳ ಮೇಲೆ ಸೆಸ್ ವಿಧಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆಸಲಾಗುತ್ತಿದೆ. ಇದಕ್ಕಾಗಿ ‘ಕರ್ನಾಟಕ ಸಿನಿಮಾ ಮತ್ತು ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಸುಂಕ ಅಧಿನಿಯಮ-2024’ ಅನ್ನು ರಚಿಸಲಾಗಿದೆ. ಇದರೊಂದಿಗೆ ಮನೆಗೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ‘ಕರ್ನಾಟಕ ಗೃಹ ಕಾರ್ಮಿಕರ ಅಧಿನಿಯಮ-2025’ ರಚಿಸಲಾಗಿದೆ. ಈ ಎಲ್ಲಾ ಅಧಿನಿಯಮಗಳ ನಿಯಾವಳಿಗಳನ್ನು ರೂಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಅಧಿನಿಯಮಗಳನ್ನು ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಗೆ 5 ವರ್ಷದಲ್ಲಿ 3 ಲಕ್ಷ ಕೋಟಿ ಖರ್ಚು

ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 56 ರಿಂದ 60 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಈ ಮೊತ್ತ 5 ವರ್ಷಗಳಲ್ಲಿ 3 ಲಕ್ಷ ಕೋಟಿ ರೂ. ತಲುಪಬಹುದು. ದೇಶದ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಮೊತ್ತದ ಹಣವನ್ನು ನೇರವಾಗಿ ಜನರ ಕಲ್ಯಾಣಕ್ಕಾಗಿ ವ್ಯಯಿಸುತ್ತಿಲ್ಲ. ರಾಜ್ಯದಲ್ಲಿ 30 ರಿಂದ 40 ಲಕ್ಷ ಅಸಂಘಟಿತ ಕಾರ್ಮಿಕರು ಇದ್ದು, ಕಾರ್ಮಿಕ ಇಲಾಖೆ 91 ವಿವಿಧ ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಿದೆ. ಅಸಂಘಟಿತ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಇದಕ್ಕಾಗಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಜಾರಿ ಮಾಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 25,45,607 ಕಾರ್ಮಿಕರು, ದಾವಣಗೆರೆ ಜಿಲ್ಲೆಯಲ್ಲಿ 89,493 ಕಾರ್ಮಿಕರು ನೊಂದಣಿಯಾಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೂಲಕ, ಚಾಲಕರು, ನಿರ್ವಾಹಕ, ಕ್ಲೀನರ್, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಬುಕಿಂಗ್, ನಗದು, ಡಿಪೋ ಗುಮಾಸ್ತರು ಸೇರಿದಂತೆ, ಮೋಟಾರು ಕ್ಷೇತ್ರದಲ್ಲಿ ದುಡಿಯತ್ತಿರುವ ಎಲ್ಲಾ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.

ಖಾಸಗಿ ವಲಯದ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶಿತ ದೃಷ್ಠಿಯಿಂದ ‘ಆಶಾದೀಪ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯಡಿ ಉದ್ಯೋಗದಾತ ಮಾಲಿಕರು ಪಾವತಿಸಿದ ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಕೆ ಮರುಪಾವತಿ, ತರಬೇತಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಶಿಷ್ಯವೇತನ ಮರುಪಾವತಿ, ಹೊಸ ನೇಮಕಾತಿಗೊಂಡವರಿಗೆ ಪಾವತಿಸಿದ ವೇತನದ ಎರಡು ವರ್ಷಗಳ ಅವಧಿಗೆ ಪ್ರತಿ ಉದ್ಯೋಗಿಯ ಮಾಸಿಕ ತಲಾ 6000 ರೂ. ವೇತನವನ್ನು ಉದ್ಯೋಗದಾತರಿಗೆ ಮರುಪಾವತಿ ಮಾಡಲಾಗುವುದು ಎಂದು ಸಚಿವ ಸಂತೋಷ ಎಸ್. ಲಾಡ್ ತಿಳಿಸಿದರು.

ಸರ್ಕಾರದಿಂದ ಖಾಸಗಿ ಕಂಪನಿಗಳು ನೀಡುವ ಇ.ಪಿ.ಎಫ್‌ಗಳನ್ನು ಪ್ರತ್ಯೇಕವಾಗಿ ಬ್ಯಾಂಕ್ ಖಾತೆಗಳನ್ನು ತೆರದು ನಿರ್ವಹಣೆ ಮಾಡುವಂತೆ ನಿಯಮ ರೂಪಿಸಲಾಗಿದೆ. ಉದ್ಯೋಗಿ, ಕಂಪನಿ ತೊರೆದ ಸಂದರ್ಭದಲ್ಲಿ ಈ ಹಣ ನೇರವಾಗಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಇದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಜಿಲ್ಲೆಯಲ್ಲಿ ಅರ್ಹ ಅಸಂಘಟಿತ ಕಾರ್ಮಿಕರನ್ನು ಗುರತಿಸಿ ಸ್ಮಾರ್ಟ್ಕಾರ್ಡ್ ವಿತರಿಸಲಾಗುತ್ತಿದೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜನರಿಗೆ ಯೋಜನೆ ಮತ್ತು ಸೌಲಭ್ಯಗಳನ್ನು ಸಮಪರ್ಕವಾಗಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಬಡವರ, ಕಾರ್ಮಿಕ ವರ್ಗದವರ ಕಷ್ಟಗಳ ಬಗ್ಗೆ ಅರಿತಿರುವ ಸಚಿವ ಸಂತೋಷ್ ಲಾಡ್ ಅವರು, ಅನೇಕ ಜನಕಲ್ಯಾಣ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾರ್ಮಿಕ ಇಲಾಖೆ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ. ಈ ಹಿಂದೆ ಕಾರ್ಮಿಕ ಇಲಾಖೆಯಲ್ಲಿ ಮಾತ್ರ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಆದರೆ ಸಚಿವ ಲಾಡ್ ಅವರಿಂದ ಪ್ರಸ್ತುತ ಮೇ 01ರಂದು ಎಲ್ಲಾ ಇಲಾಖೆ ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿಯೂ ಆಚರಿಸಲಾಗುತ್ತದೆ ಎಂದರು.

ವಿವಿಧ ಸೌಲಭ್ಯಗಳ ವಿತರಣೆ

ಕಾರ್ಯಕ್ರಮದಲ್ಲಿ ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ಚಾಲಕರ ಅವಲಂಬಿತ ಮಹಿಳೆ ಜಗಳೂರಿನ ಗೌರಮ್ಮನವರಿಗೆ ರೂ.5 ಲಕ್ಷ ಪರಿಹಾರ ಧನ, ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ವಾಹನ ಚಾಲಕರ ಮಕ್ಕಳಿಗೆ ರೂ.10,000 ಶೈಕ್ಷಣಿಕ ಧನಸಹಾಯದ ಚೆಕ್ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡುಗಳನ್ನು ವಿತರಿಸಲಾಯಿತು.

ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ್ ಶಿಂದಿಹಟ್ಟಿ ಸ್ವಾಗತಿಸಿದರು. ಜಂಟಿ ಕಾರ್ಮಿಕ ಆಯುಕ್ತ ಡಾ. ಎಸ್.ಬಿ. ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಚೇತನ್ ಹಾಗೂ ಸಂಡಿಗರ ಕಲಾತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನೌಡ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿ.ಪಂ.ಸಿಇಓ ಗಿತ್ತೆ ಮಾಧವ ವಿಠಲ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 9360 ಪ್ರಕರಣ ಇತ್ಯರ್ಥ ; ವಿಚ್ಚೇದನ ಕೋರಿ ಸಲ್ಲಿಸಿದ್ದ 23 ಜೋಡಿ ವೈವಾಹಿಕ ಜೀವನ ಸುಖಾಂತ್ಯ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಪ್ರಕರಣಗಳ 18024 ಕೈಗೆತ್ತಿಕೊಂಡಿದ್ದು, ಅದರಲ್ಲಿ ಒಟ್ಟು 9,360 ಜಾರಿಯಲ್ಲಿರುವ ಪ್ರಕರಣಗಳು ಮುಕ್ತಾಯಗೊಂಡು, ರೂ.14,33,66,571 ಹಣದ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ 2,62,712 ಪ್ರಕರಣಗಳು ಮುಕ್ತಾಯಗೊಂಡು ರೂ.72,62,10,788 ಹಣದ ಪರಿಹಾರವಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯ ನ್ಯಾಯಾಲಯಗಳಲ್ಲಿ 77 ಅಪರಾಧಿಕ, 195 ಚೆಕ್ ಅಮಾನ್ಯ, 43 ಬ್ಯಾಂಕ್ ವಸೂಲಾತಿ, 14 ಇತರೆ ಹಣ ವಸೂಲಾತಿ, 74 ಅಪಘಾತ ಪರಿಹಾರ, 144 ವಿದ್ಯುತ್ ಕಳ್ಳತನ, 02 ಅಕ್ರಮ ಮರಳು ಗಣಿಗಾರಿಕೆ, 51 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆ, 26 ಭೂ ಸ್ವಾಧೀನ ಪರಿಹಾರ ಜಾರಿ ಅರ್ಜಿ, 132 ಇತರೆ ರಾಜಿ ಅರ್ಜಿ ಹಾಗೂ ಹಲವು ಕಾರಣಕ್ಕಾಗಿ ದಾಖಲಿಸಿದ 88 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ 50 ಪ್ರಕರಣಗಳು ಸೇರಿ ಒಟ್ಟು 9360 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.

23 ಜೋಡಿ ವೈವಾಹಿಕ ಜೀವನ ಸುಖಾಂತ್ಯ

ಜಿಲ್ಲೆಯಲ್ಲಿ ಒಟ್ಟು 225 ಜೋಡಿ ವಿವಿಧ ಕಾರಣಗಳಿಂದ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿ ನ್ಯಾಯಾಲಯ ಮೆಟ್ಟಿಲೇರಿದ್ದು, ಅದರಲ್ಲಿ 20 ಪ್ರಕರಣ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಹಾಗೂ ಹರಿಹರ, ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕು ನ್ಯಾಯಾಲಯದಲ್ಲಿ ತಲಾ ಒಂದರಂತೆ ಒಟ್ಟು 23 ಜೋಡಿಗಳು ತಮ್ಮ ವೈಮನಸ್ಸುಗಳನ್ನು ಮರೆತು ಒಂದಾಗಿ ಸಹಬಾಳ್ವೆ ನಡೆಸಲು ಒಪ್ಪಿಕೊಂಡಿದ್ದು ಸುಖಾಂತ್ಯ ಕಂಡಿವೆ. ರಾಷ್ಟ್ರೀಯ ಲೋಕ್ ಅದಾಲತ್ ನಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಗ್ರಾಮೀಣ ಪ್ರದೇಶದಲ್ಲಿ 500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ಹಾಗೂ ನಗರ ಪ್ರದೇಶಗಳಲ್ಲಿ 800 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮುಂದಿನ ಮೂರು ತಿಂಗಳಲ್ಲಿ 10 ಸಾವಿರ ನಿವೇಶನ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 2 ಸಾವಿರದ 500 ಮನೆಗಳು ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕೂಡ ಅರ್ಹ ಫಲಾನುಭವಿಗಳಿಗೆ ಹಂಚಲಾಗುತ್ತದೆ ಎಂದು ಮಾಹಿತಿ ನೀಡಿದರು.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending