Connect with us

ಅಂತರಂಗ

ಅರಿಮೆಯ ಅರಿವಿರಲಿ-22 : ಹೆಂಗಸರ ಬುದ್ಧಿ

Published

on

Art by Alex Cherry
  • ಯೋಗೇಶ್ ಮಾಸ್ಟರ್

ಹೆಂಗಸರ ಬುದ್ಧಿ ಎಂಬ ಶೀರ್ಷಿಕೆ ನೋಡಿದ ತಕ್ಷಣ ನಿಮ್ಮಲ್ಲಿ ಅದೆಷ್ಟು ಜನ ‘ಮೊಣಕಾಲು ಕೆಳಗೆ’ ಎಂದು ಮನಸ್ಸಿನಲ್ಲಿಯೇ ವಾಕ್ಯವನ್ನು ಮುಂದುವರಿಸಿಕೊಂಡರೋ ಗೊತ್ತಿಲ್ಲ. ಹಾಗೆ ಗಾದೆ ವಾಕ್ಯವನ್ನು ಪೂರ್ಣಗೊಳಿಸಿದವರು ಸ್ತ್ರೀ ವಿರೋಧಿಗಳೆನಲ್ಲ. ಹೆಣ್ಣನ್ನು ಕೀಳಾಗಿ ಕಾಣುವವರೂ ಏನಲ್ಲ. ಆದರೆ ಅವರಲ್ಲಿ ಸಮಾಜವು ಹುಟ್ಟಿಸಿರುವ ಅರಿಮೆಯ ಸಂಕೇತ ಇನ್ನೂ ಜೀವಂತವಾಗಿದೆ ಅಥವಾ ತಿಳುವಳಿಕೆಯಲ್ಲಿದೆ ಎಂಬುದು ಮಾತ್ರ ನಿಜ.

ತಾನು ಸಮರ್ಥನಲ್ಲ, ತನ್ನಿಂದ ಆಗುವುದಿಲ್ಲ, ತಾನು ಲಾಯಕ್ಕಲ್ಲ ಎಂದು ಒಂದು ವ್ಯಕ್ತಿಯನ್ನು ಕೀಳರಿಮೆಗೆ ತಳ್ಳುವುದು, ಆತನ ಪ್ರತಿಭೆ ಅನಾವರಣವಾಗಲು ಬಿಡದಿರುವುದು, ಸಾಧನೆ ಮಾಡಬಹುದಾದವನು ವೇದನೆಯಲ್ಲಿಯೇ ಸಾಯುವಂತೆ ಮಾಡುವುದು ಮಾನವ ದ್ರೋಹ ಎಂದೇನೋ ಅಂದುಬಿಟ್ಟೆವು. ಅದು ಸರಿಯೇ. ಆದರೆ ನಮ್ಮ ಸಮಾಜದಲ್ಲಿ ಸಮೂಹ ಅಥವಾ ಸಮುದಾಯಗಳಿಗೇ ಸಾಮೂಹಿಕವಾಗಿ ಕೀಳರಿಮೆಯನ್ನು ಹುಟ್ಟಿಸುವಂತಹ ಸಂಚುಗಾರಿಕೆಯೇನೂ ಕಡಿಮೆ ಇಲ್ಲ.

ಅದು ಲಿಂಗದ ಆಧಾರದ ಮೇಲೆ, ಜಾತಿಯ ಆಧಾರದ ಮೇಲೆ, ವರ್ಗದ ಆಧಾರದ ಮೇಲೆ; ಯಾವುದೋ ಒಂದು ಸಮೂಹವನ್ನು ಅಥವಾ ಸಮುದಾಯವನ್ನು ಗುರಿಯಾಗಿಸಿ ಕೀಳರಿಮೆಯನ್ನು ಹುಟ್ಟಿಸುವ ಸಾಮಾಜಿಕ ಮನೋರೋಗದ ಬಗ್ಗೆಯೂ ನಾವು ಎಚ್ಚರವಾಗಿರಬೇಕು.

ಗರತಿ ಮತ್ತು ಗೊಡ್ಡಿ

ಅಡುಗೆ ಮನೆ ಸೌಟಿಗೇಕೆ ಊರಿನ ಪಾರುಪತ್ಯ? ಎನ್ನುವ ಗಾದೆಯು ಆ ಯಾವುದೋ ಒಂದು ವ್ಯಕ್ತಿಯನ್ನು ಕುರಿತಂತೆ ಹೇಳಿರುವುದಲ್ಲ. ಆ ಹೊತ್ತಿನ ಸಾಮಾಜಿಕ ವ್ಯವಸ್ಥೆಯು ಹೆಣ್ಣಾದವಳು ಅಡುಗೆ ಮನೆಯಲ್ಲಿ ದುಡಿದುಕೊಂಡಿರಬೇಕು ಹೊರಗಿನ ಕೆಲಸಕ್ಕೆ ಯೋಗ್ಯಳಲ್ಲ ಅಥವಾ ಅವಳಿಗದು ಬೇಕಿಲ್ಲ ಎಂದು ಇಡೀ ಸ್ತ್ರೀ ಸಮೂಹವನ್ನು ಮೂಲೆಗೊತ್ತುವ ಸಂಚಾಗಿತ್ತು ಅದು. ಗಾದೆ ಮಾತೆಂದರೆ ಅದೊಂದು ರೀತಿಯಲ್ಲಿ ಸಂಕಲಿತ ಅಭಿಪ್ರಾಯ.

ಸಂದರ್ಭಾನುಸಾರ ಉಲ್ಲೆಖಿಸುತ್ತಿದ್ದಂತಹ ಜನಪದರ ಧ್ವನಿ. ಗಂಡಸರ ಸೊಕ್ಕು ಉಕ್ಕೇರಿದ್ದ ಸಮಾಜದಲ್ಲಿ ಹೆಣ್ಣಿನಲ್ಲಿ ಕೀಳರಿಮೆಯನ್ನು ಹುಟ್ಟಿಸಿ ಅವಳ ಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಅಡಗಿಸುವಂತಹ ಅರಿಮೆಗಳವು.

‘ಸೊಕ್ಕಿದ ಮೇಲೆ ಹೆಣ್ಣಲ್ಲ, ಉಕ್ಕಿದ ಮೇಲೆ ಹಾಲಲ್ಲ’ ಎಂಬ ಗಾದೆಯನ್ನಾಡುವ ಜನರು ಹೆಣ್ಣು ತಮ್ಮ ಅಧೀನದಲ್ಲಿರಬೇಕೆಂದು ಬಯಸಿದ್ದವರು. ಏಕೆಂದರೆ, ‘ಹೆಂಗಸಿನ ಬುದ್ಧಿ ಮಂಡಿ ಕೆಳಗೆ.’ ‘ನೂರು ಜುಟ್ಟು ಕಲೆತರೂ ಮೂರು ಜಡೆ ಕಲೆಯೊಲ್ಲ’ ಎಂದು ಅವರ ತೀರ್ಮಾನ.

ಅವಳು ಗಂಡಿನ ಅಧೀನದಲ್ಲಿಯೇ ಇರಬೇಕು ಎನ್ನುವ ಆಶಯಕ್ಕೆ ಒಪ್ಪಿಗೆಯ ಮುದ್ರೆ ಗಂಡಿನಿಂದಲೂ, ಹೆಣ್ಣಿನಿಂದಲೂ ಬೀಳುತ್ತಿತ್ತು. ಹೆಣ್ಣೂ ಕೂಡಾ ಇದನ್ನೊಪ್ಪಿಬಿಟ್ಟಿದ್ದಳು ಅಥವಾ ಅವಳಿಗೆ ಒಪ್ಪಿಸಿಬಿಟ್ಟಿದ್ದರು. ಒಪ್ಪದೇ ಗತ್ಯಂತರವಿಲ್ಲ ಎನ್ನುವಂತಹ ಅನಿವಾರ್ಯತೆಯನ್ನು ಸೃಷ್ಟಿಸಲಾಗಿತ್ತು.

‘ಗಂಡ್ನ ಬೈದೋಳು ಗರತ್ಯಲ್ಲ’ ಅಥವಾ ‘ಗಂಡನ್ನ ಬಿಟ್ಟಾಕೆ ಗಯ್ಯಾಳಿ’ ಎಂಬ ಅಪಕೀರ್ತಿಗೆ ಒಳಗಾಗದಿರಲು ತಾನು ಹೆಣ್ಣು, ತನ್ನ ಇತಿ ಮಿತಿಯಲ್ಲಿ ತಾನಿರಬೇಕು ಎಂದು ಸೀಮೆಯನ್ನು ಕುಬ್ಜಗೊಳಿಸಿಕೊಳ್ಳುವ ಕೀಳರಿಮೆಯನ್ನು ಸಾಮಾನ್ಯವಾಗಿ ಹೊಂದಿರುವಂತಹ ಸಮಾಜ ನಮ್ಮದಾಗಿತ್ತು.

ಗಂಡನನ್ನು ಬೈದರೂ ಕಷ್ಟ, ಬಿಟ್ಟರೂ ಕಷ್ಟ; ಅಷ್ಟೇ ಅಲ್ಲ, ಅವನು ಸತ್ತರೂ ಕಷ್ಟ. ‘ಮುಂಡೆ ಮನೆ ಹೆಣ್ಣು ಬೇಡ, ಮೋಟುಗೋಡೆ ಒರಗಬೇಡ’ ಎಂಬುವ ಮಾತು. ‘ಬಂಡಿ ರಥವಲ್ಲ, ಮುಂಡೆ ಮುತ್ತೈದೆಯಲ್ಲ’ ಎನ್ನುತ್ತಾ ಮುತ್ತೈದೆಯಾದ ಹೆಣ್ಣಿಗೆ ದೊರಕಿಬಿಟ್ಟಿತೇ ಸಂಪತ್ತು? ಅವಳಿಗೆ ಮಕ್ಕಳಾಗದಿದ್ದರೆ ಮತ್ತೆ ತನಗೆ ಮಕ್ಕಳಿಲ್ಲ ಎಂಬ ಕೀಳರಿಮೆಯಲ್ಲಿ ಯಾವ ಮುತ್ತೈದೆಯ ಸೌಭಾಗ್ಯ? ಆಗಲೂ ಸಮಾಜ ಅನ್ನುವುದೇನು? ಬಂಜೇದು ಬಾಳಲ್ಲ, ಮಂಜು ಮಳೆಯಲ್ಲ! ಈ ನೋವು ತಡೆಯಲಾರದೆ ಸತ್ತಳೋ, ‘ಬಾಳಲಾರದವಳು ಬಾವಿಗೆ ಬಿದ್ದು ಸತ್ತಳಂತೆ!’ ಆಕೆ ಸಾಯಲೂ ಬಾರದು. ಬದುಕಿರಬೇಕು. ಆದರೆ ಹೇಗೆ? ‘ಬಂಜೆ ಬಾಳು, ಎಂಜಿಲೆಲೆಗೆ ಸಮ.’ ಬೇರೆ ದಾರಿ ಇಲ್ಲ.

ಏಕೆಂದರೆ ‘ಗೊಡ್ಡಿ ಹೆರಲ್ಲ, ಬಡ್ಡಿ ಆಳಲ್ಲ’ ಈಗ ನಾನು ನೋಡುತ್ತಿರುವ ಮಟ್ಟಿಗೆ ಹೆಣ್ಣಿಗೆ ಇಂತಹ ಪರಿಸ್ಥಿತಿ ವ್ಯಾಪಕವಾಗಿಯಂತೂ ಇಲ್ಲ. ಆದರೂ ಅಂದಿದ್ದ ಈ ಬಗೆಯ ವ್ಯವಸ್ಥೆಯು ಅರಿಮೆಗಳನ್ನು ಹುಟ್ಟಿಸಿ ಅಪ್ಪಣೆಗಳನ್ನು ಅರಿವಿಲ್ಲದೆಯೇ ಪಾಲಿಸುವಂತೆ ನೋಡಿಕೊಳ್ಳುವ ಹುನ್ನಾರವಿತ್ತು.

ಸೌಭಾಗ್ಯದ ಸಂಕೇತಗಳೆಂದು ಕರೆದು ಕುಂಕುಮ ಬಳೆಗಳನ್ನು ಕಿತ್ತುಕೊಂಡು ಅವಳನ್ನು ವಿರೂಪಗೊಳಿಸಲು ಯತ್ನಿಸುತ್ತಿದ್ದ ಸಮಾಜ ಅವಳ ಮನಸ್ಥಿತಿಯನ್ನು ವರ್ಣಿಸುತ್ತಿದ್ದದ್ದು ಅತ್ಯಂತ ಸ್ಯಾಡಿಸ್ಟ್ ರೀತಿಯಲ್ಲಿ ‘ಮುಂಡೆಗೆ ಮುಂಡೆಯರನ್ನು ಕಂಡರೆ ಉಂಡಷ್ಟೇ ಸಂತೋಷ’ ಎಂದು. ಇನ್ನು ಬೈಗುಳಗಳಲ್ಲಿ ಹೆಣ್ಣನ್ನೇ ವಸ್ತುವನ್ನಾಗಿಸಿಕೊಂಡಿರುವುದು ಇದೇ ಸಮಾಜವೆಂದು ಬೇರೆ ಹೇಳಬೇಕಾಗಿಲ್ಲ.

ಅಂದೆಂದೋ ಸಂಕಲಿತವಾಗಿ ಸಮಾಜವು ಹುಟ್ಟಿಸಿದ ಅಂತಹ ಅರಿಮೆಯು ಈಗಲೂ ‘ಹೆಣ್ಣು ಹಡೆದವನ ಮನೆ ನುಣ್ಣಗೆ, ಗಂಡ ಹಡೆದವನ ಮನೆ ತಣ್ಣಗೆ’ ಎಂಬ ಪಳೆಯುಳಿಕೆಗಳು ಅಲ್ಲಿ ಇಲ್ಲಿ ಕಾಣುತ್ತಿರುತ್ತದೆ. ಹೆಣ್ಣನ್ನುಕೀಳರಿಮೆಗೆ ತಳ್ಳುವ ಗಂಡಿನ ಮೇಲರಿಮೆಯು ‘ಎತ್ತು ಸೊಕ್ಕಿದರೆ ಕೊಟ್ಟಿಗೆಯಲ್ಲಿ ನಿಲ್ಲದು, ಹೆಣ್ಣು ಸೊಕ್ಕಿದರೆ ಮನೆಯಲ್ಲಿ ನಿಲ್ಲದು’ ಎಂದು ಈಗಲೂ ಗೊಣಗುತ್ತದೆ. ಏಕೆಂದರೆ ಅವರು ಗಂಡಿನ ಅಹಂ ನಂಬಿರುವುದೇನೆಂದರೆ, ‘ಹೆಣ್ಣು ಕೆಟ್ಟರೆ ಸೂಳೆ, ಗಂಡು ಕೆಟ್ಟರೆ ಜೋಗಿ’. ಅದಕ್ಕೇ ಅವರು ಯಾವಾಗಲೂ ಹೆಣ್ಣನ್ನು ಕಾಪಾಡುವಂತಹ ಜವಾಬ್ದಾರಿ ತಮ್ಮದು ಎಂದುಕೊಂಡಿದ್ದಾರೆ.ಏಕೆಂದರೆ, ‘ಪಕ್ಕದಲ್ಲಿದ್ದರೆ ಹೆಂಡತಿ, ಪೆಟ್ಟಿಯಲ್ಲಿದ್ದರೆಹಣ.’ವಿದ್ಯಾವಂತರು,ಮುಂದುವರಿದವರೆನಿಸಿಕೊಂಡವರ ಎಷ್ಟೆಷ್ಟೋ ಕುಟುಂಬಗಳಲ್ಲಿ ಈಗಲೂ ಪರಂಪರಾನುಗತವಾದ ನಂಬಿಕೆಗಳಿವೆ, ‘ಹೆಂಗಸಿಗೆ ಆಡಳಿತ ಕೊಡೋದೂ ಒಂದೇ, ಚೇಳಿಗೆ ಪಾರುಪತ್ಯ ಕೊಡೂದೂ ಒಂದೇ’ ಎಂದು. ಅದಕ್ಕೆ ಅವರ ಕಾರಣವೇನೆಂದರೆ, ಸ್ತ್ರೀ ಬುದ್ಧಿಃ ಪ್ರಳಯಾಂತಕಃ.

ನಮ್ಮೆಜಮಾನರು

‘ಹೆಂಗಸಿಗೆ ಹಿರಿತನ ಕೊಡಬಾರದು, ಹಂಗಿಸಿ ಕೂಳು ಹಾಕಬಾರದು’ ಎಂಬುದನ್ನು ತಾನೇ ಒಪ್ಪಿಕೊಂಡಿರುವ ಹೆಣ್ಣು ಈಗಲೂ ಹೇಳುವುದಿಲ್ಲವೇ ತನ್ನ ಗಂಡನೇ ತನ್ನ ಯಜಮಾನ ಎಂದು. ಸಮಾಜವು ಹುಟ್ಟಿಸಿರುವ ಕೀಳರಿಮೆಯ ಪಳೆಯುಳಿಕೆಯು “ನಮ್ಮ ಯಜಮಾನರು” ಎಂದು ಧ್ವನಿಸುತ್ತಿರುತ್ತದೆ.

‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂಬುದನ್ನು ಸಮ್ಮತಿಸಿರುವ ಹೆಣ್ಣು ಮದುವೆಯಾದ ಮೇಲೆ ತನ್ನ ಹೆಸರಿನ ಜೊತೆಗೆ ಗಂಡನ ಹೆಸರನ್ನು ಅಥವಾ ಅವನ ಕುಲನಾಮವನ್ನೋ, ಅವನ ಮನೆತನದ ಹೆಸರನ್ನೋ ಸೇರಿಸಿಕೊಳ್ಳುತ್ತಾಳೆ. ಅಪ್ಪನ ಹೆಸರಿನಿಂದ ಗಂಡನ ಹೆಸರಿಗೆ ಹಕ್ಕುಪತ್ರದ ವರ್ಗಾವಣೆಯೇ ಹೊರತು ಅವಳತನದ್ದೇನಿಲ್ಲ ಅಲ್ಲಿ.

ತಾನು ಹೆತ್ತು ಹಕ್ಕನ್ನು ಗಂಡನಿಗೆ ಕೊಡುವಂತೆ ಅಪ್ಪನ ಇನಿಶಿಯಲ್ ಅಥವಾ ಹೆಸರನ್ನು ಮಗುವಿಗೆ ಹಚ್ಚುತ್ತಾಳೆ. ಅಪ್ಪನ ಅಥವಾ ಗಂಡನ ಗುಂಗಿನಲ್ಲಿಯೇ ಇರುವ ಹೆಣ್ಣು ಇನ್ನೂ ಅಂದು ಹುಟ್ಟಿಸಿರುವ ಕೀಳರಿಮೆಯಿಂದ ಗುಣಮುಖಳಾಗಿಲ್ಲ.

ಮಗುವಿನ ಹೆಸರು ಹಲವು ಇರುವ ಕಾರಣ ನಿರ್ದಿಷ್ಟ ಗುರುತಿಗೆ ಇನಿಶಿಯಲ್ ಅಥವಾ ಸಂಕೇತಾಕ್ಷರ ಹಚ್ಚುವುದೇ ಆದರೆ ತನ್ನ ಹೆಸರನ್ನು ಹಚ್ಚುವಂತಹ ನಿರ್ಧಾರ ಅಮ್ಮ ಏಕೆ ತೆಗೆದುಕೊಳ್ಳಲು ಎಂಬುದು ನನ್ನ ಪ್ರಶ್ನೆ. ಅಥವಾ ಅಪ್ಪ ಅಮ್ಮ ಇಬ್ಬರದ್ದೂ ಸೇರಿಬಿಟ್ಟರೆ ಹೆಸರು ಹೇಳಲಾಗದಿರುವಷ್ಟು ಉದ್ದವಾಗಿಬಿಟ್ಟೀತೇ? ಸಮಾಜ ಹುಟ್ಟಿಸಿರುವ ಕೀಳರಿಮೆಯ ಸಂಕೇತವನ್ನು ಒಡೆದು ಹಾಕಲು ಅವಳಿನ್ನೂ ಸಿದ್ಧವಿಲ್ಲವೇ? ತನ್ನದೇ ಐಡೆಂಟಿಟಿ ಅಥವಾ ಸ್ವತಂತ್ರ ಗುರುತಿನ ಅಸ್ತಿತ್ವವನ್ನು ಹೊಂದಲು ಅವಳಿಗಿನ್ನೂ ಹೊಳೆದಿಲ್ಲವೇ?

ದರಿದ್ರ ಹುಟ್ಟು

ಲಿಂಗ ತಾರತಮ್ಯವನ್ನು ಮಾಡುತ್ತಾ ಗಂಡಿನ ಮೇಲ್ಮೈಯನ್ನು ಸಾಧಿಸುವ ಒಂದು ಬಗೆಯಾದರೆ, ಇನ್ನು ಜಾತಿ ಮತ್ತು ಕುಲದ ಮೂಲದಿಂದ ಗುರುತು ಹಿಡಿದು ಕೀಳರಿಮೆಗೆ ತಳ್ಳುವುದು ಇನ್ನೊಂದು. ವ್ಯಕ್ತಿ ಯಾವುದೇ ಸಾಮರ್ಥ್ಯವನ್ನು ಹೊಂದಿರಲಿ, ಆತನ ಹುಟ್ಟಿನ ಅಥವಾ ಕುಲದ ನೆಲೆಯಿಂದ ಅವನಲ್ಲಿ ಕೀಳರಿಮೆಯನ್ನು ತಂದು ಸಮಾಜದಲ್ಲಿ ಕಡೆಗಣಿಸಲು ಯತ್ನಿಸುವುದು ಏನೂ ಅಪರಿಚಿತ ವಿಷಯವಲ್ಲ.

ಬ್ರಾಹ್ಮಣರಿಗಷ್ಟೇ ವಿದ್ಯೆ ಕಲಿಸುವ ಧೋರಣೆಯ ಪರಶುರಾಮ, ರಾಜಮನೆತನದ ಕ್ಷತ್ರಿಯರಿಗಷ್ಟೇ ಪಾಠ ಮಾಡುತ್ತಾ ಬೇಡರ ಹುಡುಗನನ್ನು ನಿರಾಕರಿಸುವ ದ್ರೋಣ ಸಂಕೇತಿಸುವುದಾದರೂ ಏನನ್ನು? ತನ್ನಲ್ಲಿ ಕ್ಷತ್ರಿಯನಲ್ಲ ಮತ್ತು ದ್ರೋಣನ ಶಿಷ್ಯನಾಗಲು ಯೋಗ್ಯನಲ್ಲ ಎಂಬ ಕೀಳರಿಮೆಯನ್ನು ಹುಟ್ಟಿಸಿದರೂ ಅದನ್ನು ಮೆಟ್ಟಿದ ಏಕಲವ್ಯರು ಬಹು ಸಂಖ್ಯೆಯಲ್ಲಿಲ್ಲವಲ್ಲ ನಮ್ಮ ಸಮಾಜದಲ್ಲಿ.

ಸೂತಪುತ್ರನಾಗಿ ಅಪಮಾನಕ್ಕೆ ಒಳಗಾಗುತ್ತಿದ್ದ ಕರ್ಣನಿಗೆ ಸುಯೋಧನನೊಬ್ಬ ಬೆಂಬಲವಾಗಿ ನಿಲ್ಲಬೇಕಾಯ್ತು. ಜಾತಿಯ ಕೀಳರಿಮೆ ಅದೆಷ್ಟು ಪ್ರತಿಭೆಗಳನ್ನು, ಸಾಮರ್ಥ್ಯಗಳನ್ನು ನಾಶ ಮಾಡಿದೆಯೋ ಲೆಕ್ಕವಿಟ್ಟವರಾರು? ಇಂಥಾ ಜಾತಿ, ಕುಲಗಳಲ್ಲಿ ಹುಟ್ಟಿದವನು ಅದಕ್ಕಷ್ಟೇ ಸೀಮಿತನಾಗಿರಬೇಕೆಂಬ ಅರಿಮೆಯು ಶ್ರೇಣಿಯನುಸಾರವಾಗಿ ಅರಿಮೆಗಳನ್ನು ಹುಟ್ಟಿ ಹಾಕುತ್ತಿತ್ತು ಎಂಬುದಕ್ಕೆ ಈ ಲೇಖನದಿಂದ ಪ್ರತ್ಯೇಕವಾಗಿ ತಿಳಿದುಕೊಳ್ಳಬೇಕಾಗಿರುವಷ್ಟು ಹೊಸತಿನ ವಿಷಯವೇನಲ್ಲ.

‘ಬ್ರಾಹ್ಮಣ ಗಳಿಸಿದ್ದು ಪಿಂಡಕ್ಕೆ, ಒಕ್ಕಲಿಗ ಗಳಿಸಿದ್ದು ದಂಡಕ್ಕೆ, ತುರುಕ ಗಳಿಸಿದ್ದು ಖಂಡಕ್ಕೆ, ಹೊಲೆಯ ಗಳಿಸಿದ್ದು ಹೆಂಡಕ್ಕೆ’ ಎನ್ನುವ ಗಾದೆಯನ್ನಾಡುವ ಜನರು ‘ಧೋತ್ರ ದೊಡ್ಡದಾದ ಮಾತ್ರಕ್ಕೆ ಗೋತ್ರ ದೊಡ್ಡದೇ?’ ಎಂದು ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ವರ್ಣವನ್ನು ಬದಲಾಯಿಸಿಕೊಳ್ಳುತ್ತೇವೆಂದರೂ ಒಪ್ಪುತ್ತಿರಲಿಲ್ಲ. ‘ಮಾದಿಗನನ್ನು ಮನೆಗೆ ಬಿಡಬೇಡ, ಕೋಣವನ್ನು ನೀರಿಗೆ ಬಿಡಬೇಡ’ ಎಂಬುವ ಗಾದೆಯು ಆ ಸಮುದಾಯದವರಲ್ಲಿ ಹುಟ್ಟಿಸುವ ಅರಿಮೆ ಯಾವ ಘನ ಉದ್ದೇಶವನ್ನು ಹೊಂದಿದೆ? ‘ತುಪ್ಪದ ಹಾಗಿದ್ದರೂ ತುರುಕನ ಸಹವಾಸ ಬೇಡ’ ಎನ್ನುವ ಸಮಾಜದ ಧ್ವನಿಯು ಮುಸಲ್ಮಾನನು ಎಷ್ಟೇ ಒಳ್ಳೆಯವನಾಗಿದ್ದರೂ ಅಥವಾ ಅವನಿಂದ ಒಳ್ಳೆಯ ಕೆಲಸಗಳಾಗುತ್ತಿದ್ದರೂ ಅವನನ್ನು ಸೇರಿಸಿಕೊಳ್ಳಬೇಡ ಎನ್ನುವ ಗಾದೆ ಮಾತು ಹೇಳುತ್ತಿರುವ ಗುಟ್ಟೇನು? ಸಮುದಾಯದಲ್ಲಿ ಹುಟ್ಟಿಸುವ ಇಂತಹ ಸಾಮಾಜಿಕ ಕೀಳರಿಮೆಗಳು ಕರೋನಾ ವೈರಸ್ಸಿಗಿಂತ ಹೆಚ್ಚು ಸಾಂಕ್ರಾಮಿಕ. ರೋಗದ ಸೋಂಕಾದರೂ ಒಂದಷ್ಟು ಕಾಲ. ಆದರೆ ಇಂತಹ ಸಾಮಾಜಿಕ ಧೋರಣೆಗಳ ಸೋಂಕು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತವೆ.

ಹಣದ ಕೊರತೆಯಿರುವವನಲ್ಲಿ ಹುಟ್ಟಿಸಿರುವ ಕೀಳರಿಮೆಯಿಂದ ಒಬ್ಬ ಖಾಲಿ ಪರ್ಸು ಜೇಬಿನಲ್ಲಿಟ್ಟುಕೊಂಡು, ‘ಅಯ್ಯೋ, ನಾನು ಇವತ್ತು ಪರ್ಸ್ ಮರೆತು ಬಂದಿದ್ದೇನೆ. ಹಣ ತಂದಿಲ್ಲ’ ಎನ್ನುವನ್ನು ಕಂಡಿರಬಹುದು. ಅವನಿಗೆ ತನ್ನಲ್ಲಿ ಹಣವಿಲ್ಲ ಎಂಬ ನಿಜವನ್ನು ಒಪ್ಪಿಕೊಳ್ಳಲು ಕೀಳುಭಾವ ಕಾಡುವುದು.
ಇಂಗ್ಲೀಷ್ ಮೀಡಿಯಂ ಮಕ್ಕಳ ಮುಂದೆ ಕನ್ನಡ ಮೀಡಿಯಂ ಮಕ್ಕಳು ಅನುಭವಿಸುವ ಕೀಳರಿಮೆಯ ಉದಾಹರಣೆಗಳು ಕಣ್ಣಿಗೆ ಬೀಳುತ್ತಿರುತ್ತವೆ.

ಒಟ್ಟಾರೆ ಈ ಲೇಖನ ಹೇಳಲು ಹೋದದಿಷ್ಟು.ವ್ಯಕ್ತಿಗಳಲ್ಲಿ ಹುಟ್ಟುವ ಕೀಳರಿಮೆಯಂತೆ ಸಮಾಜದಲ್ಲಿಯೂ ಸಾಮುದಾಯಿಕವಾಗಿ ಕೀಳರಿಮೆಗಳು ಹುಟ್ಟಿವೆ, ಬೆಳೆದಿವೆ ಮತ್ತು ಅದರ ಫಲವನ್ನು ಅನುಭವಿಸುತ್ತಿದ್ದೇವೆ. ಇದರಿಂದ ಬಿಡುಗಡೆ ಹೊಂದಲೂ ಸಾಮುದಾಯಿಕ ಅರಿಮೆಯ ಸಾಮಾಜಿಕ ಅರಿವಿರಲಿ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading
Advertisement

Title

ದಿನದ ಸುದ್ದಿ14 hours ago

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ

ಸುದ್ದಿದಿನ,ದಾವಣಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದು ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹತ್ವದ...

ದಿನದ ಸುದ್ದಿ4 days ago

ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್

ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO)...

ದಿನದ ಸುದ್ದಿ6 days ago

ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ

ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು...

ದಿನದ ಸುದ್ದಿ6 days ago

ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ‌.ಕೆ.ಎ.ಓಬಳಪ್ಪ ಲೋಕಾಗೆ ದೂರು

ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7...

ದಿನದ ಸುದ್ದಿ6 days ago

ಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಇವರಿಗೆ ರಾಜ್ಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಬಿಡುಗಡೆಯಾದ ರೂ. 695 ಲಕ್ಷಗಳ ಅನುದಾನದ ಖರ್ಚು ವೆಚ್ಚವನ್ನು ಇಲಾಖಾ...

ದಿನದ ಸುದ್ದಿ2 weeks ago

ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ

ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,...

ದಿನದ ಸುದ್ದಿ2 weeks ago

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ

ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ....

ದಿನದ ಸುದ್ದಿ2 weeks ago

ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ

ಸುದ್ದಿದಿನ,ದಾವಣಗೆರೆ‌ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು...

ದಿನದ ಸುದ್ದಿ3 weeks ago

ಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ

ಸುದ್ದಿದಿನ,ದಾವಣಗೆರೆ: ದೇಶದ ಪ್ರಮುಖ ಆರೋಗ್ಯ ವಿಮೆ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರನ್ಸ್ ಕಂಪನಿ ಲಿಮಿಟೆಡ್, ಕರ್ನಾಟಕದಲ್ಲಿ ಮಳೆಗಾಲದಲ್ಲಿ ಜನರನ್ನು ಕಾಡುವ ವಿವಿಧ ಬಗೆಯ...

ದಿನದ ಸುದ್ದಿ3 weeks ago

ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ...

Trending